ಮರ್ರೆ ದ್ವಿತೀಯ ಸುತ್ತಿಗೆ


Team Udayavani, Jan 17, 2017, 3:45 AM IST

16-SP-1.jpg

ಮೆಲ್ಬರ್ನ್: ಅಗ್ರ ಶ್ರೇಯಾಂಕದ ಬ್ರಿಟನ್‌ನ ಆ್ಯಂಡಿ ಮರ್ರೆ, ಸ್ವಿಸ್‌ನ ರೋಜರ್‌ ಫೆಡರರ್‌, ಸ್ಟಾನ್‌ ವಾವ್ರಿಂಕ ಅವರು ಕಠಿನ ಹೋರಾಟದಲ್ಲಿ ಗೆಲುವು ಸಾಧಿಸಿ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದ ದ್ವಿತೀಯ ಸುತ್ತು ತಲುಪಿದ್ದಾರೆ. 

17 ಬಾರಿಯ ಗ್ರ್ಯಾನ್‌ ಸ್ಲಾಮ್‌ ಚಾಂಪಿಯನ್‌ ಫೆಡರರ್‌ ಒಂದು ಕಾಲದ ಅವರ ಜೂನಿಯರ್‌ ಎದು ರಾಳಿ ಆಸ್ಟ್ರೀಯಾದ ಜರ್ಗನ್‌ ಮೆಲ್ಜರ ಅವರನ್ನು 7-5, 3-6, 6-2, 6-2  ಸೆಟ್‌ಗಳಿಂದ ಉರುಳಿಸಿದರು. ಎರಡು ತಾಸು ಮತ್ತು 6 ನಿಮಿಷಗಳ ಈ ಕಾದಾಟದಲ್ಲಿ ಜಯಭೇರಿ ಬಾರಿಸಿದ ಫೆಡರರ್‌ ಮುಂದಿನ ಸುತ್ತಿನಲ್ಲಿ ಅಮೆರಿಕದ ಅರ್ಹತಾ ಆಟಗಾರ ನೋಹ್‌ ರುಬಿನ್‌ ಅವರನ್ನು ಎದುರಿಸಲಿದ್ದಾರೆ. 

ಮತ್ತೆ ನೈಜ ಟೆನಿಸ್‌ ಆಡಲು ಖುಷಿಯಾಗುತ್ತಿದೆ ಎಂದು ಫೆಡರರ್‌ ತಿಳಿಸಿದರು. 35ರ ಹರೆಯದ ಅವರು ಆಸ್ಟ್ರೇಲಿಯದ ಕೆನ್‌ ರೋಸ್‌ವೆಲ್‌ ಬಳಿಕ ಗ್ರ್ಯಾನ್‌ ಸ್ಲಾಮ್‌ ಗೆದ್ದ ಅತೀ ಹಿರಿಯ ಆಟಗಾರ ಎಂದೆನಿಸಿಕೊಳ್ಳುವ ಗುರಿ ಇಟ್ಟುಕೊಂಡಿದ್ದಾರೆ.

ಮರ್ರೆ ಮುನ್ನಡೆ
ತನ್ನ ಬಾಳ್ವೆಯಲ್ಲಿ ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಮ್‌ ಕೂಟವೊಂದರಲ್ಲಿ ಅಗ್ರಶ್ರೇಯಾಂಕದೊಂದಿಗೆ ಹೋರಾಟ ಕ್ಕಿಳಿದ ಆ್ಯಂಡಿ ಮರ್ರೆ ಅವರು ಉಕ್ರೈನ್‌ನ ಇಲಿಯಾ ಮಾರ್ಚೆಂಕೊ ಅವರನ್ನು 7-5, 7-6 (7-5), 6-2 ಸೆಟ್‌ಗಳಿಂದ ಸೋಲಿಸಿ ದ್ವಿತೀಯ ಸುತ್ತಿಗೆ ಮುನ್ನಡೆದರು. ನಿಜವಾಗಿ ಹೇಳುವುದಿದ್ದರೆ ಇದೊಂದು ಶ್ರೇಷ್ಠ ಪಂದ್ಯವೆಂದು ಭಾವಿಸುವುದಿಲ್ಲ ಎಂದು ಮರ್ರೆ ಪಂದ್ಯದ ಬಳಿಕ ನುಡಿದರು. ಎರಡು ತಾಸು ಮತ್ತು 47 ನಿಮಿಷಗಳ ಹೋರಾಟದಲ್ಲಿ ಗೆದ್ದ ಮರ್ರೆ ದ್ವಿತೀಯ ಸುತ್ತಿನಲ್ಲಿ ರಶ್ಯದ ಆಂದ್ರೆ ರುಬ್ಲೆವ್‌ ಅವರನ್ನು ಎದುರಿಸಲಿದ್ದಾರೆ. ರುಬ್ಲೆವ್‌ ಇನ್ನೊಂದು ಪಂದ್ಯದಲ್ಲಿ ಚೈನೀಸ್‌ ತೈಪೆಯ ಯೆನ್‌ ಸು ಲು ಅವರನ್ನು 4-6, 6-3, 7-6, (7-0), 6-3 ಸೆಟ್‌ಗಳಿಂದ ಸೋಲಿಸಿದರು.

ವಾವ್ರಿಂಕ ಪಾರು
ಮಾಜಿ ವಿಜೇತ ಸ್ವಿಸ್‌ನ ಸ್ಟಾನ್‌ ವಾವ್ರಿಂಕ ಮೊದಲ ಸುತ್ತಿನಲ್ಲಿ ಸೋಲುವುದರಿಂದ ಪಾರಾ ಗಿದ್ದಾರೆ. ಮೂರು ಬಾರಿಯ ಗ್ರ್ಯಾನ್‌ ಸ್ಲಾಮ್‌ ವಿಜೇತ ವಾವ್ರಿಂಕ ಐದು ಸೆಟ್‌ಗಳ ಮ್ಯಾರಥಾನ್‌ ಹೋರಾಟ ನಡೆಸಿ ಸ್ಲೋವಾಕಿಯಾದ ಮಾರ್ಟಿನ್‌ ಕ್ಲಿಝನ್‌ ಅವರನ್ನು 4-6, 6-4, 7-5, 4-6, 6-4 ಸೆಟ್‌ಗಳಿಂದ ಜಯ ಸಾಧಿಸಿದರು. ಅವರು ಮುಂದಿನ ಸುತ್ತಿ ನಲ್ಲಿ ಅಮೆರಿಕದ ಸ್ಟೀವ್‌ ಜಾನ್ಸನ್‌ ರನ್ನು ಎದು ರಿಸಲಿದ್ದಾರೆ. ಜಾನ್ಸನ್‌ ಮೊದಲ ಸುತ್ತಿ ನಲ್ಲಿ ಆರ್ಜೆಂಟೀನಾದ ಫೆಡರಿಕೊ ಡೆಲ್ಬೊನಿಸ್‌ರನ್ನು 6-3, 6-4, 6-4 ಸೆಟ್‌ಗಳಿಂದ ಕೆಡಹಿದ್ದರು.

ಈ  ಬಾರಿಯ ಚೆನ್ನೈ ಓಪನ್‌ನಲ್ಲಿ ಆಡಿದ್ದ ಕ್ರೊವೇಶಿಯದ ಮರಿನ್‌ ಸಿಲಿಕ್‌ ಅವರು ಪೋಲೆಂಡಿನ ಜೆರ್ಜಿ ಜಾನೋ ವಿಜ್‌ ಅವರನ್ನು 4-6, 4-6, 6-2, 6-2, 6-3 ಸೆಟ್‌ಗಳಿಂದ ಸೋಲಿಸಿ ಮುನ್ನಡೆದರು. ಮೊದಲೆರಡು ಸೆಟ್‌ ಸೋತರೂ ವಿಚಲಿತರಾಗದ ಸಿಲಿಕ್‌ ಅಮೋಘವಾಗಿ ಆಡಿ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು. ಅವರು ಮುಂದಿನ ಸುತ್ತಿನಲ್ಲಿ ಗ್ರೇಟ್‌ ಬ್ರಿಟನ್‌ನ ಡೇನಿಯಲ್‌ ಇವಾನ್ಸ್‌ ಅವರನ್ನು ಎದುರಿಸಲಿದ್ದಾರೆ. ಇವಾನ್ಸ್‌ ತನ್ನ ಪಂದ್ಯದಲ್ಲಿ ಫಾಕುಂಡೊ ಬಗ್ನಿಸ್‌ ಅವರನ್ನು 7-6 (10-8), 6-3, 6-1 ಸೆಟ್‌ಗಳಿಂದ ಪರಾಭವಗೊಳಿಸಿದರು.

ಇನ್ನುಳಿದ ಪ್ರಮುಖ ಪಂದ್ಯಗಳಲ್ಲಿ ಬೆರ್ನಾರ್ಡ್‌ ಟಾಮಿಕ್‌, ಜೋ ವಿಲ್ಫೆ†ಡ್‌ ಸೋಂಗ, ನಿಕ್‌ ಕಿರ್ಗಿಯೋಸ್‌, ಥಾಮಸ್‌ ಬೆರ್ಡಿಶ್‌, ಜಾನ್‌ ಇಸ್ನರ್‌, ಸ್ಯಾಮ್‌ ಕ್ವೆರಿ ಮತ್ತು ಕೆಯಿ ನಿಶಿಕೋರಿ ತಮ್ಮ ಎದುರಾಳಿಯೆದುರು ಜಯ ಸಾಧಿಸಿ ಮುನ್ನಡೆದಿದ್ದಾರೆ. 

ಟಾಪ್ ನ್ಯೂಸ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.