![Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!](https://www.udayavani.com/wp-content/uploads/2024/07/nagu-1-415x229.jpg)
ನ್ಯೂಜಿಲ್ಯಾಂಡ್ ಓಪನ್: ಭಾರತದ ಸವಾಲು ಅಂತ್ಯ
Team Udayavani, May 4, 2019, 6:02 AM IST
![New-Zealand-Open](https://www.udayavani.com/wp-content/uploads/2019/05/New-Zealand-Open-620x388.jpg)
ಆಕ್ಲೆಂಡ್: ‘ನ್ಯೂಜಿಲ್ಯಾಂಡ್ ಓಪನ್’ ಬ್ಯಾಡ್ಮಿಂಟನ್ ಕೂಟದಲ್ಲಿ ಭಾರತದ ಏಕೈಕ ಭರವಸೆಯಾಗಿದ್ದ ಎಚ್.ಎಸ್. ಪ್ರಣಯ್ ಕ್ವಾರ್ಟರ್ಫೈನಲ್ನಲ್ಲಿ ಸೋತು ನಿರಾಸೆ ಮೂಡಿಸಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಪ್ರಣಯ್ ಜಪಾನಿನ ಕಂಟಾ ಸುನೆಯಮ ವಿರುದ್ಧ 21-17, 15-21, 14-21 ಗೇಮ್ಗಳಿಂದ ಸೋತು ಟೂರ್ನಿಯಿಂದ ಹೊರನಡೆದಿದ್ದಾರೆ. ಈ ಪಂದ್ಯ ಒಂದು ಗಂಟೆ 13 ನಿಮಿಷಗಳವರೆಗೆ ನಡೆದಿತ್ತು. ಮೊದಲ ಗೇಮ್ ತೀವ್ರತೆಯಿಂದ ಕೂಡಿತ್ತು. 13 ಅಂಕಗಳವರೆಗೆ ಒಬ್ಬರ ಹಿಂದೆ ಒಬ್ಬರಂತೆ ಅಂಕವನ್ನು ಗಳಿಸುತ್ತಾ ಪಂದ್ಯದ ತೀವ್ರತೆಯನ್ನು ಹೆಚ್ಚಿಸಿದ್ದರು. ಅನಂತರ ಸತತ 4 ಅಂಕಗಳನ್ನು ಗಳಿಸಿದ ಪ್ರಣಯ್ 17-13 ಅಂಕಗಳ ಮುನ್ನಡೆ ಪಡೆದರು. ಆದರೆ ಕಂಟಾ ಅಂಕಗಳ ಅಂತರವನ್ನು 17-18ಕ್ಕೆ ತಂದಿಟ್ಟರು. ಆಟದ ವೇಗ ಹೆಚ್ಚಿಸಿಕೊಂಡ ಪ್ರಣಯ್ 21-17 ಅಂಕಗಳ ಅಂತರದಿಂದ ಮೊದಲ ಗೇಮ್ ತಮ್ಮದಾಗಿಸಿಕೊಂಡರು.
ದ್ವಿತೀಯ ಗೇಮ್ನಲ್ಲೂ ಉತ್ತಮ ಆರಂಭ ಪಡೆದ ಪ್ರಣಯ್ 11-5 ಅಂಕಗಳನ್ನು ಗಳಿಸಿದ್ದರು. ಆದರೆ ಪ್ರಣಯ್ ಮಾಡಿದ ತಪ್ಪುಗಳಿಂದ ಅವಕಾಶ ಪಡೆದ ಕಂಟಾ ಸುಲಭವಾಗಿ ಈ ಗೇಮ್ ಗೆದ್ದರು. ನಿರ್ಣಾಯಕ ಗೇಮ್ನಲ್ಲಿ ಇಬ್ಬರ ನಡುವೆ ಭಾರೀ ಪೈಪೋಟಿಯೇ ನಡೆಯಿತು. 14-14 ಸಮಬಲದ ಹೋರಾಟದಲ್ಲಿದ್ದಾಗ ಅತ್ಯುತ್ತಮ ಆಟವಾಡಿದ ಕಂಟಾ ಪ್ರಣಯ್ಗೆ ಅಂಕ ಗಳಿಸುವ ಅವಕಾಶವನ್ನು ನೀಡದೆ 21-14 ಅಂಕಗಳಿಂದ ಗೆದ್ದು ಸೆಮಿಫೈನಲ್ಗೆ ಮುನ್ನಡೆದರು. ಈ ಸೋಲಿನೊಂದಿಗೆ ಕೂಟದಲ್ಲಿ ಭಾರತೀಯ ಸವಾಲು ಕೊನೆಗೊಂಡಿದೆ.
ಟಾಪ್ ನ್ಯೂಸ್
![Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!](https://www.udayavani.com/wp-content/uploads/2024/07/nagu-1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Screenshot (2)](https://www.udayavani.com/wp-content/uploads/2024/07/Screenshot-2-150x83.png)
Mangaluru: ಸೈನಿಕರನ್ನು ಗೌರವದಿಂದ ನಡೆಸಿಕೊಳ್ಳಿ: ಬ್ರಿ| ಐ.ಎನ್. ರೈ
![Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!](https://www.udayavani.com/wp-content/uploads/2024/07/nagu-1-150x83.jpg)
Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!
![Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ](https://www.udayavani.com/wp-content/uploads/2024/07/shiruru-150x90.jpg)
Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.