ಕ್ರಿಕೆಟ್ನಲ್ಲಿ ಯಾರೂ ಕೂಡ ಪರಿಪೂರ್ಣರಲ್ಲ: ಕೆಎಲ್ ರಾಹುಲ್
Team Udayavani, Sep 20, 2022, 7:33 AM IST
ಮೊಹಾಲಿ: ಸಂಖ್ಯೆಗಳು ಯಾವಾಗಲೂ ಆಟಗಾರನ ಸಂಪೂರ್ಣ ಕಥೆಯನ್ನು ಹೇಳಲು ಸಾಧ್ಯವಿಲ್ಲ. ಕ್ರಿಕೆಟ್ನಲ್ಲಿ ಯಾರೂ ಕೂಡ ಪರಿಪೂರ್ಣರಲ್ಲ. ಆದರೆ ಪರಿಪೂರ್ಣ ಆಟ ಗಾರರಾಗಿ ಮೂಡಿ ಬರಲು ಪವರ್ಪ್ಲೇಯಲ್ಲಿ ನನ್ನ ಹೊಡೆತಗಳ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಿದ್ದೇನೆ ಎಂದು ಭಾರತ ತಂಡದ ಉಪನಾಯಕ ಕೆಎಲ್ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಯೊಬ್ಬ ಆಟಗಾರನೂ ತನ್ನ ಸ್ಟ್ರೈಕ್ರೇಟ್ ಹೆಚ್ಚಿಸಲು ಬಹಳಷ್ಟು ಪ್ರಯತ್ನ ನಡೆಸುತ್ತಾರೆ. ಯಾರೂ ಕೂಡ ಪರಿಪೂರ್ಣರಲ್ಲ. ಉತ್ತಮ ನಿರ್ವಹಣೆ ನೀಡುವ ಉದ್ದೇಶದಿಂದ ಎಲ್ಲರೂ ತಮ್ಮ ಪ್ರಯತ್ನ ನಡೆಸುತ್ತಾರೆ ಎಂದು ರಾಹುಲ್ ಹೇಳಿದ್ದಾರೆ.
ಕಾರ್ತಿಕ್ ಅಥವಾ ಪಂತ್ ಅವರ ಆಯ್ಕೆ ಬಗ್ಗೆ ವಿವರ ನೀಡಿದ ರಾಹುಲ್ ಪಂದ್ಯದ ದಿನ ಪಿಚ್ನ ಪರಿಸ್ಥಿತಿ ನೋಡಿ ಕೊಂಡು ನಿರ್ಧರಿಸಲಾಗುತ್ತದೆ. ಅವರಿಬ್ಬರೂ ಉತ್ತಮ ಗುಣಮಟ್ಟದ ಆಟಗಾರರಾಗಿದ್ದಾರೆ ಎಂದರು.
ಪ್ರವಾಸಿ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಬಳಿಕ ಟಿ20 ವಿಶ್ವಕಪ್ಗಾಗಿ ನಮ್ಮ ಆಟಗಾರರ ಯಾದಿಯನ್ನು ಅಂತಿಮಗೊಳಿಸಲಾಗು ತ್ತದೆ. ಕೌಶಲವನ್ನು ಗಮನಿಸಿದರೆ ನಮ್ಮ ನಿರ್ವಹಣೆಯು ಶೇ. 80ರಿಂದ 85ರಷ್ಟಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ನಾವು ಇನ್ನಷ್ಟು ಸುಧಾರಿಸಬೇಕಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್ಗಳ ಅಮೋಘ ಜಯ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್