ಮೈದಾನದ ಸಿಬಂದಿಗೆ ದ್ರಾವಿಡ್ ಇನಾಮು
Team Udayavani, Nov 30, 2021, 7:00 AM IST
ಕಾನ್ಪುರ: ಇಲ್ಲಿನ “ಗ್ರೀನ್ಪಾರ್ಕ್ ಸ್ಟೇಡಿಯಂ’ನಲ್ಲಿ ಸ್ಪರ್ಧಾತ್ಮಕ ಪಿಚ್ ನಿರ್ಮಿಸಿದ ಮೈದಾನದ ಸಿಬಂದಿಗೆ ಕೋಚ್ ರಾಹುಲ್ ದ್ರಾವಿಡ್ 35 ಸಾವಿರ ರೂ. ಬಹುಮಾನ ನೀಡಿ ಗೌರವಿಸಿದ್ದಾರೆ.
ಇದರೊಂದಿಗೆ ಟೀಮ್ ಇಂಡಿಯಾದ ಇತರ ಕೋಚ್ಗಳಿಗಿಂತ ತಾನೆಷ್ಟು ವಿಭಿನ್ನ ಎಂಬುದನ್ನು ನಿರೂಪಿಸಿದ್ದಾರೆ.
“ಟೀಮ್ ಇಂಡಿಯಾದ ನೂತನ ಕೋಚ್ ರಾಹುಲ್ ದ್ರಾವಿಡ್ ಅವರು ನಮ್ಮ ಮೈದಾನದ ಸಿಬಂದಿಗೆ 35 ಸಾವಿರ ರೂ. ಬಹುಮಾನ ನೀಡಿದ್ದಾರೆ.
ಇಲ್ಲಿನ ಪಿಚ್ ಅವರಿಗೆ ತೃಪ್ತಿ ನೀಡಿದ್ದು, ಇದರಿಂದ ಖುಷಿಗೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ’ ಎಂದು ಉತ್ತರಪ್ರದೇಶ ಕ್ರಿಕೆಟ್ ಮಂಡಳಿ ತಿಳಿಸಿದೆ.
ಇದನ್ನೂ ಓದಿ:ರೂಪಾಂತರಿ ಭೀತಿ ನಡುವೆ “ಎ’ ತಂಡಗಳ ಟೆಸ್ಟ್
ಗ್ರೀನ್ಪಾರ್ಕ್ ಪಿಚ್ ಎಲ್ಲರಿಗೂ ಏಕರೀತಿಯ ನೆರವು ನೀಡಿದ್ದನ್ನು ಗಮನಿಸಬೇಕು. ಶ್ರೇಯಸ್ ಅಯ್ಯರ್, ಟಾಮ್ ಲ್ಯಾಥಂ, ವಿಲ್ ಯಂಗ್, ವೃದ್ಧಿಮಾನ್ ಸಾಹಾ ಬ್ಯಾಟಿಂಗ್ನಲ್ಲಿ ಮಿಂಚಿದ್ದರು. ಅಕ್ಷರ್ ಪಟೇಲ್, ಆರ್. ಅಶ್ವಿನ್, ರವೀಂದ್ರ ಜಡೇಜ ಸ್ಪಿನ್ ದಾಳಿಯಲ್ಲಿ ಯಶಸ್ಸು ಕಂಡಿದ್ದರು. ಹಾಗೆಯೇ ಕಿವೀಸ್ನ ಟಿಮ್ ಸೌಥಿ, ಕೈಲ್ ಜೇಮಿಸನ್ ವೇಗದ ದಾಳಿಯನ್ನು ಯಶಸ್ವಿಯಾಗಿ ಸಂಘಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ