![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ರಶೀದ್ ವಿಶ್ವ ಶ್ರೇಷ್ಠ ಲೆಗ್ಸ್ಪಿನ್ನರ್: ಜೋನ್ಸ್
Team Udayavani, Apr 19, 2018, 6:00 AM IST
![21.jpg](https://www.udayavani.com/wp-content/uploads/2018/04/19/21.jpg)
ಮುಂಬಯಿ: ಅಫ್ಘಾನಿಸ್ಥಾನದ ಬೌಲರ್ ರಶೀದ್ ಖಾನ್ ವಿಶ್ವದ ಶ್ರೇಷ್ಠ ಲೆಗ್ ಸ್ಪಿನ್ನರ್. ಅವರು ಎರಡೂ ವಿಧಗಳಲ್ಲೂ ಸ್ಪಿನ್ ದಾಳಿ ನಡೆಸಬಲ್ಲರು ಎಂದು ಆಸ್ಟ್ರೇಲಿಯದ ಮಾಜಿ ಬ್ಯಾಟ್ಸ್ಮನ್ ಡೀನ್ ಜೋನ್ಸ್ ಶ್ಲಾಘಿಸಿದ್ದಾರೆ. ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಸನ್ ರೈಸರ್ ಹೈದರಾಬಾದ್ ತಂಡದಲ್ಲಿರುವ 19ರ ಹರೆಯದ ರಶೀದ್ ಒಟ್ಟು ಮೂರು ಪಂದ್ಯಗಳಲ್ಲಿ ಎರಡು ವಿಕೆಟ್ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ರಶೀದ್ ಕುರಿತು ಮಾತನಾಡಿದ ಡೀನ್ ಜೋನ್ಸ್, “ಯುಜುವೇಂದ್ರ ಚಾಹಲ್ ಅವರಿಗೆ ಗೌರವ ಸಲ್ಲಿಸುತ್ತೇನೆ ಆದರೆ ನಾನು ರಶೀದ್ ಖಾನ್ ಅವರ ಬಲುದೊಡ್ಡ ಅಭಿಮಾನಿ. ಅಫ್ಘಾನಿಸ್ಥಾನ ತಂಡದ ತರಬೇತುದಾರನಾಗಿದ್ದರಿಂದ ರಶೀದ್ ಮೈದಾನದ ಒಳಗೆ ಮತ್ತು ಹೊರಗೆ ಹೇಗಿರುತ್ತಾರೆ ಎಂಬುದು ಗೊತ್ತಿದೆ. ಅವರು ಚೆಂಡನ್ನು ಎರಡೂ ರೀತಿಯಲ್ಲೂ ಸ್ಪಿನ್ ಮಾಡಬಲ್ಲರು. ಅವರಿಗೆ ಚೆಂಡಿನಲ್ಲಿ ನಾಲ್ಕು ವಿಧದ ಹಿಡಿತವಿರುವುದರಿಂದ ಅವರು ಅಪಾಯಕಾರಿಯಾಗಿ ದಾಳಿ ನಡೆಸಬಲ್ಲರು’ ಎಂದು ಹೇಳಿದರು.
ಚಾಹಲ್ ಮತ್ತು ರಶೀದ್ ಖಾನ್ ಉತ್ತಮ ಬೌಲರ್ಗಳೆಂದು ತಿಳಿಸಿದ ಜೋನ್ಸ್ ಅವರು ಖಾನ್ ಬಗ್ಗೆ ವಿವರಿಸುತ್ತ, “ಕೈಯ ಮುಂಭಾಗದಿಂದ ಸ್ಪಿನ್ ದಾಳಿ ನಡೆಸುವ ವಿಧಾನ ಒಂದಾದರೆ ಇನ್ನೆರಡು ಹಿಡಿತ ಅವರ ಲೆಗ್ ಬ್ರೇಕ್ ಬೌಲಿಂಗ್ ಕೌಶಲದಲ್ಲಿ ಸೇರಿದೆ. ಮತ್ತೆ ನೀವು ರಶೀದ್ ಖಾನ್ 30ಕ್ಕೂ ಹೆಚ್ಚು ರನ್ ನೀಡುವುದನ್ನು ಯಾವತ್ತಿಗೂ ನೋಡಲಾರಿರಿ. ಅವರೊಬ್ಬ ದೊಡ್ಡ ಸೂಪರ್ಸ್ಟಾರ್’ ಎಂದರು.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.