RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
ಬೆಂಗಳೂರಿನ ಮೂರು ಕೆರೆಗಳಿಗೆ ಪುನರುಜ್ಜೀವ..
Team Udayavani, Apr 20, 2024, 6:45 AM IST
ಬೆಂಗಳೂರು: ಸಂಪ್ರ ದಾಯ ದಂತೆ ರಾಯಲ್ ಚಾಲೆಂಜರ್ ಬೆಂಗಳೂರು ಕ್ರಿಕೆಟಿಗರು “ಗೋ ಗ್ರೀನ್’ ಅಭಿಯಾನದ ಕ್ಷಣಗಣನೆ ಯಲ್ಲಿದ್ದಾರೆ. ರವಿವಾರ ಕೋಲ್ಕತಾ ನೈಟ್ರೈಡರ್ ವಿರುದ್ಧ ಐತಿಹಾಸಿಕ “ಈಡನ್ ಗಾರ್ಡನ್ಸ್’ನಲ್ಲಿ ಅಪರಾಹ್ನ ನಡೆಯುವ ಪಂದ್ಯದಲ್ಲಿ ಆರ್ಸಿಬಿ ಕ್ರಿಕೆಟಿಗರು ಹಸಿರು ಉಡುಗೆಯಲ್ಲಿ ಆಡಲಿಳಿಯಲಿದ್ದಾರೆ. ಆರ್ಸಿಬಿ ತನ್ನ “ಎಕ್ಸ್’ ಖಾತೆಯಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ.
ಸ್ವತ್ಛ ಮತ್ತು ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲು ವಾಗಿ ಆರ್ಸಿಬಿ 2011ರಿಂದ ಈ ಅಭಿಯಾನವನ್ನು ನಡೆಸಿಕೊಂಡು ಬಂದಿದೆ. ಸಾಮಾನ್ಯವಾಗಿ ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಹಗಲು ವೇಳೆ ನಡೆಯುವ ಪಂದ್ಯದಲ್ಲಿ ಆರ್ಸಿಬಿ ಕ್ರಿಕೆಟಿಗರು ಹಸಿರು ಜೆರ್ಸಿ ಧರಿಸುವುದು ವಾಡಿಕೆ. ಆದರೆ ಕೋವಿಡ್ ಕಾರಣದಿಂದ 2021ರಿಂದ ಮೊದಲ್ಗೊಂಡು 2023ರ ತನಕ ಸೀಮಿತ ತಾಣಗಳಲ್ಲಿ ಐಪಿಎಲ್ ಪಂದ್ಯಗಳು ನಡೆದುದರಿಂದ ಈ ಸಂಪ್ರದಾಯವನ್ನು ಪಾಲಿಸ ಲಾಗಲಿಲ್ಲ. 2023ರಲ್ಲಿ ಮತ್ತೆ ಬೆಂಗಳೂರು ಪಂದ್ಯದಲ್ಲೇ ಹಸಿರು ಉಡುಗೆ ಧರಿಸಿ ಆಡಿತು. ಈ ಬಾರಿ ತವರಿ ನಾಚೆಯ ಪಂದ್ಯದಲ್ಲಿ ಗೋ ಗ್ರೀನ್ ಅಭಿಯಾನ ಅನಿವಾರ್ಯ ವಾಗಿದೆ.
ಕೋಲ್ಕತಾದಲ್ಲೇ ಏಕೆ?
ಆರ್ಸಿಬಿಗೆ ಇನ್ನು ತವರಲ್ಲಿ 3 ಪಂದ್ಯಗಳಿವೆ. ಗುಜರಾತ್, ಡೆಲ್ಲಿ ಮತ್ತು ಚೆನ್ನೈ ವಿರುದ್ಧ ಬೆಂಗಳೂರಿನಲ್ಲಿ ಆಡಲಿದೆ. ಆದರೆ ಇವೆಲ್ಲವೂ ರಾತ್ರಿ ಪಂದ್ಯಗಳು. ಆರ್ಸಿಬಿ ಪ್ರಸಕ್ತ ಸೀಸನ್ನಲ್ಲಿ ಆಡಲಿರುವ ಡೇ ಮ್ಯಾಚ್ ಒಂದು ಮಾತ್ರ. ಇದು ರವಿವಾರ ಕೆಕೆಆರ್ ವಿರುದ್ಧ ಕೋಲ್ಕತಾದಲ್ಲಿ ನಡೆಯುವ ಕಾರಣ ಈ ಪಂದ್ಯವನ್ನೇ ಗೋ ಗ್ರೀನ್ ಅಭಿಯಾನಕ್ಕೆ ಆಯ್ದುಕೊಂಡಿದೆ. ಈ ಜೆರ್ಸಿಯ ಬಹು ಭಾಗ ಹಸಿರಿನಿಂದ ಕೂಡಿದ್ದು, ಶರ್ಟ್ನ ಮೇಲ್ಭಾಗ ನೀಲಿ ಬಣ್ಣವನ್ನು ಹೊಂದಿದೆ.
ಬೆಂಗಳೂರಿನ ಮೂರು ಕೆರೆಗಳಿಗೆ ಪುನರುಜ್ಜೀವ
ಗೋ ಗ್ರೀನ್ ಇನಿಶಿಯೇಟಿವ್ನ ಭಾಗವಾಗಿ ಬೆಂಗಳೂರಿನ ಮೂರು ಕೆರೆಗಳನ್ನು ಪುನರುಜ್ಜೀವಗೊಳಿಸುವ ಮೂಲಕ ಕಳೆದೆರಡು ತಿಂಗಳುಗಳಿಂದ ಬೆಂಗಳೂರನ್ನು ಆವರಿಸಿರುವ ನೀರಿನ ಬಿಕ್ಕಟ್ಟನ್ನು ಪರಿಹರಿಸುವ ಪ್ರಯತ್ನಗಳಿಗೆ ಕೊಡುಗೆ ಸಲ್ಲಿಸಲು ಮುಂದಾಗಿದೆ.
ಇಂಡಿಯಾ ಕೇರ್ಸ್ ಫೌಂಡೇಶನ್ ವರದಿಯ ಪ್ರಕಾರ ಆರ್ ಸಿಬಿ , ಕಣ್ಣೂರು ಕೆರೆ, ಇಟ್ಟಗಲ್ಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಗಳ ಪುನಶ್ಚೇತನ ಕಾರ್ಯವನ್ನು ಕೈಗೊಳ್ಳಲಿದೆ.
ಆರ್ಸಿಬಿಯು ಕಳೆದ ಅಕ್ಟೋಬರ್ನಲ್ಲಿ ತಮ್ಮ ಇಎಸ್ಜಿ ಬದ್ಧತೆಯ ಭಾಗವಾಗಿ ಕೆರೆಗಳ ಸುಧಾರಣಾ ಕಾರ್ಯಗಳ ಯೋಜನೆಯನ್ನು ಪ್ರಾರಂಭಿಸಿದ್ದು, ಕಾವೇರಿ ನೀರು ತಲುಪದ, ಅಂತರ್ಜಲ ಮತ್ತು ಮೇಲ್ಮೈ ನೀರಿನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಪ್ರದೇಶಗಳಲ್ಲಿ ಜಲಮೂಲಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದೆ.
Last year as part of our Go Green Initiative, we had promised to rejuvenate lakes in Bengaluru and help people in the surrounding land lead a better life. With the help of our partners and the authorities, we have lived the dream. 🐟🏞️🌳
Here’s more on @bigbasket_com presents… pic.twitter.com/yZONZ8V3db
— Royal Challengers Bengaluru (@RCBTweets) April 19, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ
Thomas Cup: ಬ್ಯಾಡ್ಮಿಂಟನ್; ಭಾರತದ ಆಟಕ್ಕೆ ತೆರೆ
Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ
T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್ ಅಗರ್ಕರ್
MUST WATCH
ಹೊಸ ಸೇರ್ಪಡೆ
Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ
Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’
Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ
Interview: “ಈ ಭಾಗದಲ್ಲಿ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’
Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು