ಇಂದು ಪ್ರಶಸ್ತಿ ಸ್ವೀಕಾರದ ಸಂಭ್ರಮದಲ್ಲಿದ್ದ ‘ದ್ರೋಣಾಚಾರ್ಯ’ ಪುರುಷೋತ್ತಮ ರೈ ನಿಧನ!
Team Udayavani, Aug 29, 2020, 6:00 AM IST
ಬೆಂಗಳೂರು: ದೇಶ ಕಂಡ ಖ್ಯಾತ ಅಥ್ಲೆಟಿಕ್ಸ್ ತರಬೇತುದಾರ ಪುರುಷೋತ್ತಮ ರೈ ತಮ್ಮ 79ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.
ಶುಕ್ರವಾರ ರಾತ್ರಿ 7.30ಕ್ಕೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತ ಹೊಂದಿದ ಪರಿಣಾಮ, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಶನಿವಾರ ಆನ್ಲೈನ್ ಮೂಲಕ ದ್ರೋಣಾಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸುವ ಸಂಭ್ರಮದಲ್ಲಿದ್ದ ಅವರು, ಹಿಂದಿನ ದಿನವಾದ ಶುಕ್ರವಾರ ನಿಧನ ಹೊಂದಿರುವುದು ನೋವಿನ ಸಂಗತಿಯಾಗಿದೆ.
ದ್ರೋಣಾಚಾರ್ಯ ಭಾರತೀಯ ಕ್ರೀಡಾ ತರಬೇತುದಾರರಿಗೆ ನೀಡುವ ಸರ್ವೋಚ್ಚ ಪ್ರಶಸ್ತಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಪುರುಷೋತ್ತಮ ರೈ ಅವರು, ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರಾಗಿ ನಿವೃತ್ತರಾಗಿದ್ದರು.
ಅವರಿಗೆ ಹತ್ತಾರುವರ್ಷಗಳ ಹಿಂದೆಯೇ ಸಿಗಬೇಕಾಗಿದ್ದ ದ್ರೋಣಾಚಾರ್ಯ, ತಡವಾಗಿಯಾದರೂ ಸಿಕ್ಕಿತ್ತು. ಸ್ವತಃ ರೈಯವರು ಈ ಪ್ರಶಸ್ತಿ ತನಗೆ 20 ವರ್ಷಗಳ ಹಿಂದೆಯೇ ಬರಬೇಕಿತ್ತೆಂದು ಹೇಳಿದ್ದರು. ಪ್ರಸ್ತುತ ತರಬೇತುದಾರರಾಗಿ ಅವರು ಮಾಡಿದ ಆಜೀವ ಸಾಧನೆಗೆ ದ್ರೋಣಾಚಾರ್ಯ ಲಭಿಸಿದೆ.
ಪುರುಷೋತ್ತಮ ಅವರು, 1974ರಿಂದಲೇ ತರಬೇತುದಾರಿಕೆಯನ್ನು ಆರಂಭಿಸಿದರು. ಹಲವಾರು ಏಷ್ಯನ್ ಗೇಮ್ಸ್ಗಳು, ಸ್ಯಾಫ್ ಗೇಮ್ಸ್ಗಳು, ಏಷ್ಯಾಮಟ್ಟದ ಇತರೆ ಕೂಟಗಳಿಗಾಗಿ ಅವರು ಅಥ್ಲೀಟ್ಗಳನ್ನು ತಯಾರು ಮಾಡಿದ್ದರು.
1987ರಲ್ಲಿ ಇಟಲಿಯ ರೋಮ್ನಲ್ಲಿ ವಿಶ್ವ ಅಥ್ಲೆಟಿಕ್ ಕೂಟಕ್ಕೆ ಭಾರತೀಯ ತಂಡದ ತರಬೇತುದಾರರಾಗಿ ತೆರಳಿದ್ದರು.
ಇವರ ಗರಡಿಯಲ್ಲಿ ತಯಾರಾಗಿದ್ದ ಖ್ಯಾತ ಕ್ರೀಡಾಪಟುಗಳು: ಪುರುಷೋತ್ತಮ ಅವರ ಗರಡಿಯಲ್ಲಿ ಹಲವಾರು ಕ್ರೀಡಾರತ್ನಗಳು ಸಿದ್ಧವಾಗಿವೆ ಅಚರಲ್ಲಿ ಪ್ರಮುಖರೆಂದರೆ, ಮುರಳಿಕುಟ್ಟನ್, ಅಶ್ವಿನಿ ನಾಚಪ್ಪ, ಎಸ್.ಡಿ.ಈಶನ್, ರೋಸಾ ಕುಟ್ಟಿ, ಜಿ.ಜಿ.ಪ್ರಮೀಳಾ, ಎಂ.ಕೆ.ಆಶಾ, ಇ.ಬಿ.ಶೈಲಾ, ಜೈಸಿ ಥಾಮಸ್ ಇವರಿಂದ ತರಬೇತಾದ ಪ್ರಮುಖರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Kunigal; ಬೈಕ್ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ
ನಮ್ಮ ವಿರುದ್ಧ ಷಡ್ಯಂತ್ರ: ಎಚ್.ಡಿ. ರೇವಣ್ಣ