ಟೆಸ್ಟ್‌ ಕ್ರಿಕೆಟ್‌ನಲ್ಲಿ ಕ್ರಾಂತಿ: ಐದರ ಬದಲು 4 ದಿನಗಳ ಪಂದ್ಯ!

2023ರಿಂದ 2031ರ ವರೆಗಿನ ಟೆಸ್ಟ್‌ ಕ್ರಿಕೆಟ್‌ ವೇಳಾಪಟ್ಟಿ ಪರಿಷ್ಕರಣೆ‌

Team Udayavani, Dec 31, 2019, 5:14 AM IST

test

ದುಬಾೖ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಕ್ರಾಂತಿಕಾರಿ ಬದಲಾವಣೆಯೊಂದಕ್ಕೆ ಕಾಲ ಕೂಡಿಬರುತ್ತಿದೆ. 5 ದಿನಗಳ ಟೆಸ್ಟ್‌ ಪಂದ್ಯವನ್ನು 4 ದಿನಕ್ಕೆ ಸೀಮಿತಗೊಳಿಸಲು ಐಸಿಸಿ ನಿರ್ಧರಿಸಿದೆ. ಇಲ್ಲಿ ಉಳಿದ ದಿನಗಳನ್ನು ಟಿ20 ಸೇರಿದಂತೆ ಇತರ ಜಾಗತಿಕ ಕ್ರಿಕೆಟ್‌ ಕೂಟಗಳಿಗೆ ಬಳಸಿಕೊಳ್ಳಲು ಯೋಚಿಸಲಾಗಿದೆ. ಟೆಸ್ಟ್‌ ಕ್ರಿಕೆಟಿನ ರೋಚಕತೆ ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದ ಐಸಿಸಿಯ ಈ ಹೊಸ ಯೋಜನೆ ಸಾಕಷ್ಟು ಕುತೂಹಲ ಕೆರಳಿಸಿದೆ.

ಏನಿದು ಹೊಸ ಪ್ರಯತ್ನ?
ಸದ್ಯ ಇರುವ ಐಸಿಸಿ ನಿಯಮ ಪ್ರಕಾರ ಟೆಸ್ಟ್‌ ಕ್ರಿಕೆಟ್‌ ಒಟ್ಟು 5 ದಿನ ನಡೆಯುತ್ತದೆ. ಕ್ರಿಕೆಟ್‌ ವಲಯದಲ್ಲಿ ಇದನ್ನು 4 ದಿನಕ್ಕೆ ಸೀಮಿತಗೊಳಿಸಿ ಎನ್ನುವ ಕೂಗು ಹಿಂದಿನಿಂದಲೇ ಕೇಳಿ ಬಂದಿತ್ತು. ಈ ವಿಷಯ ಐಸಿಸಿ ಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಅಂತಿಮ ನಿರ್ಧಾರಕ್ಕೆ ಬರಲಾಗಿದೆ.

2023ರಿಂದ 2031ರ ಕ್ರಿಕೆಟ್‌ ವೇಳಾಪಟ್ಟಿಯಲ್ಲಿ ಐದರ ಬದಲು 4 ದಿನಗಳಿಗೆ ಟೆಸ್ಟ್‌ ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಐಸಿಸಿ ತಿಳಿಸಿದೆ. ಇದರಿಂದ ಒಂದು ದಿನದ ಲಾಭವಾಗಲಿದೆ. ಆ ಉಳಿದ ದಿನಗಳನ್ನು ಜಾಗತಿಕ ಮಟ್ಟದ ಬೇರೆ ಕ್ರಿಕೆಟ್‌ ಕೂಟಗಳನ್ನು ಆಯೋಜಿಸಲು ಬಳಸಬಹುದಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲ ರಾಷ್ಟ್ರಗಳು ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಆಡಲಿವೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.

335 ದಿನಗಳು ಉಳಿಯುತ್ತಿದ್ದವು!
ಐಸಿಸಿ 8 ವರ್ಷಗಳಿಗೆ ಅನ್ವಯವಾಗುವಂತೆ ಕ್ರಿಕೆಟ್‌ ವೇಳಾಪಟ್ಟಿ ರಚಿಸುತ್ತದೆ. ಈ ಪ್ರಕಾರವಾಗಿ ಈಗಾಗಲೇ 4 ದಿನಗಳಿಗೆ ಟೆಸ್ಟ್‌ ಕೂಟವನ್ನು ನಡೆಸುವುದು ಜಾರಿಯಾಗಿದ್ದರೆ 2015-2023ರ ಅವಧಿಯಲ್ಲಿ ಐಸಿಸಿಗೆ 335 ದಿನಗಳು ಲಭಿಸುತ್ತಿದ್ದವು!

2017ರಲ್ಲೇ ನಡೆದಿತ್ತು “ಟೆಸ್ಟ್‌’
4 ದಿನಗಳ ಟೆಸ್ಟ್‌ ಪಂದ್ಯದ ಪ್ರಾಯೋಗಿಕ ಪರೀಕ್ಷೆಯನ್ನು ಐಸಿಸಿ 2017ರಲ್ಲೇ ನಡೆಸಿದೆ. ಮೊದಲ 4 ದಿನಗಳ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ-ಜಿಂಬಾಬ್ವೆ ತಂಡಗಳು ಸೆಣಸಿದ್ದವು. 2019 ವರ್ಷಾರಂಭದಲ್ಲಿ ಇಂಗ್ಲೆಂಡ್‌-ಅಯರ್‌ಲ್ಯಾಂಡ್‌ ನಡುವೆ 4 ದಿನಗಳ 2ನೇ ಪ್ರಾಯೋಗಿಕ ಟೆಸ್ಟ್‌ ಪಂದ್ಯ ನಡೆದಿತ್ತು.

ಟೆಸ್ಟ್‌ ಕ್ರಿಕೆಟ್‌ ಆಕರ್ಷಣೆಗೆ…
ಗುಲಾಲಿ ಬಣ್ಣದ ಚೆಂಡಿನಲ್ಲಿ ಹಗಲು-ರಾತ್ರಿ ಟೆಸ್ಟ್‌ ಆಯೋಜನೆ, ಡಿಆರ್‌ಎಸ್‌ ಬಳಕೆ, ಜೆರ್ಸಿ ಮೇಲೆ ಅಂಕಿ ಮತ್ತು ಆಟಗಾರನ ಹೆಸರು ಸೇರಿದಂತೆ ಹಲವು ಹೊಸ ಬದಲಾವಣೆಗಳನ್ನು ಐಸಿಸಿ ತಂದಿದೆ. ಟೆಸ್ಟ್‌ ಕ್ರಿಕೆಟನ್ನು ಹೆಚ್ಚು ಆಕರ್ಷಕಗೊಳಿಸುವ ಜತೆಗೆ ಜೀವಂತವಾಗಿಡುವ ಪ್ರಯತ್ನ ನಡೆಯುತ್ತಲೇ ಇದೆ. ಇದೀಗ 4 ದಿನಗಳ ಪಂದ್ಯದ ಸರದಿ.

ಹೆಚ್ಚು ಟಿ20: ಭಾರತ ಒತ್ತಾಯ
ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಹೆಚ್ಚಿನ ಸಂಖ್ಯೆಯ ಟಿ20 ಕ್ರಿಕೆಟ್‌ ಕೂಟಗಳನ್ನು ವಿಶ್ವಾದ್ಯಂತ ಆಯೋಜಿಸುವಂತೆ ಐಸಿಸಿಯನ್ನು ಒತ್ತಾಯಿಸಿದೆ. ಮಾತ್ರವಲ್ಲ 5 ದಿನಗಳ ಟೆಸ್ಟ್‌ ಕ್ರಿಕೆಟಿಗೆ ಹೆಚ್ಚಿನ ಖರ್ಚು ವೆಚ್ಚವಾಗುತ್ತದೆ. ಹೀಗಾಗಿ ದಿನವನ್ನು ಕಡಿಮೆಗೊಳಿಸಬೇಕು. ಉಳಿಯುವ ಹಣವನ್ನು ಬೇರೆ ಕ್ರಿಕೆಟ್‌ ಕೂಟಗಳಿಗೆ ಬಳಸಬೇಕೆಂದು ಐಸಿಸಿಗೆ ಬಿಸಿಸಿಐ ಮನವಿ ಮಾಡಿದೆ. ಇದಕ್ಕೀಗ ಕಾಲ ಕೂಡಿಬಂದಂತಿದೆ.

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1–vi

Lancashire ಪರ ಆಡುವ ವೆಂಕಟೇಶ್‌ ಅಯ್ಯರ್‌

1-srrr

Women’s Asia Cup: ಪಾಕ್ ವಿರುದ್ಧ ರೋಚಕ ಜಯ; ಫೈನಲ್‌ಗೆ ಲಂಕಾ

1-paris-11

Paris Olympics; ಸೀನ್ ನದಿಯ ಉದ್ದಕ್ಕೂ ನಡೆದ ಅತ್ಯಾಕರ್ಷಕ ಉದ್ಘಾಟನಾ ಸಮಾರಂಭ

Suryakumar Yadav

Leadership ನಾನು ಸಂಭ್ರಮಿಸುತ್ತೇನೆ, ಕೆಲವು ನಾಯಕರಿಂದ ಹಲವು ಕಲಿತಿದ್ದೇನೆ: ಸೂರ್ಯ ಕುಮಾರ್

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.