ಸೂಪರ್‌ ಜೈಂಟ್ಸ್‌ನಿಂದ “ಎಸ್‌’ ಮಾಯವಾಯಿತೇಕೆ?!


Team Udayavani, May 22, 2017, 12:34 PM IST

Pune.jpg

ಪುಣೆ: ಪ್ರಸಕ್ತ ಐಪಿಎಲ್‌ನಲ್ಲಿ ಪುಣೆ ತಂಡ ತನ್ನ ನಾಯಕನನ್ನು ಬದಲಾಯಿಸಿ ಸುದ್ದಿಯಾಯಿತಷ್ಟೇ ಅಲ್ಲ, ತಂಡದ ಹೆಸರನ್ನೂ ಒಂದು ಅಕ್ಷರದ ಮಟ್ಟಿಗೆ ಕಿರಿದುಗೊಳಿಸಿ ಅಚ್ಚರಿ ಹುಟ್ಟಿಸಿತು. ರೈಸಿಂಗ್‌ ಪುಣೆ ಸೂಪರ್‌ “ಜೈಂಟ್ಸ್‌’ನಿಂದ “ಎಸ್‌’ ಅಕ್ಷರವನ್ನು ತೆಗೆದು “ಜೈಂಟ್‌’ ಎಂದಷ್ಟೇ ಉಳಿಸಿಕೊಂಡಿತು. 

ಇದಕ್ಕೇನು ಕಾರಣ ಎಂಬುದು ಈ ವರೆಗೆ ತಿಳಿದಿರಲಿಲ್ಲ. ಈಗ ಪುಣೆ ಫ್ರಾಂಚೈಸಿ ಮಾಲಕ  ಸಂಜೀವ ಗೊಯೆಂಕಾ ಈ ಗುಟ್ಟನ್ನು ಬಯಲು ಗೊಳಿಸಿದ್ದಾರೆ. “ಜೈಂಟ್ಸ್‌’ನಿಂದ ಎಸ್‌ ಅಕ್ಷರವನ್ನು ತೆಗೆದು ಹಾಕುವಂತೆ ಸೂಚಿಸಿದ್ದು ಒಬ್ಬ ಜೋತಿಷಿ ಯಂತೆ. ಇದರಿಂದ ತಂಡದ ಅದೃಷ್ಟ ಖುಲಾಯಿಸ ಲಿದೆಯೆಂದು ಆತ ಸಲಹೆ ನೀಡಿದ್ದನಂತೆ!

“ತಂಡದ ಹೆಸರಿನ ಕೊನೆಯಲ್ಲಿರುವ ಎಸ್‌ ಅಕ್ಷರ ತೆಗೆದದ್ದೇ ಆದರೆ ಈ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂಬ ಸಲಹೆ ಈ ಜ್ಯೋತಿಷಿಯಿಂದ ಬಂತು. ಆದರೆ ನನಗೆ ಇದರಲ್ಲೆಲ್ಲ ನಂಬಿಕೆ ಇರಲಿಲ್ಲ. ಒಂದಂತೂ ನಿಜ, ಕಳೆದ ವರ್ಷ ನಮ್ಮ ನಿರ್ವಹಣೆ ಉತ್ತಮ ಮಟ್ಟದಲ್ಲಿರಲಿಲ್ಲ. ಹೀಗಾಗಿ ಆತನ ಸಲಹೆಯನ್ನು ಪಾಲಿಸಿ ನೋಡೋಣ ಎಂಬ ನಿರ್ಧಾರಕ್ಕೆ ಬಂದೆವು. ಎಸ್‌ ತೆಗೆದ ಬಳಿಕ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ…’ ಎಂದು ಗೊಯೆಂಕಾ ಹೇಳಿದ್ದಾರೆ. 

ಕಳೆದ ವರ್ಷ “ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌’ ಹೆಸರಿನೊಂದಿಗೆ ಮೊದಲ ಐಪಿಎಲ್‌ ಆಡಿದ್ದ ಪುಣೆ ತಂಡ 10 ಅಂಕಗಳೊಂದಿಗೆ 7ನೇ ಸ್ಥಾನಕ್ಕೆ ಕುಸಿದಿತ್ತು. 

ಧೋನಿ ಕೆಳಗಿಳಿಸಲು ಕಾರಣ?
ಧೋನಿಯನ್ನು ಪುಣೆ ತಂಡದ ನಾಯಕತ್ವದಿಂದ ಕೆಳಗಿಳಿಸಲು ಇಂಥದೇ ಏನಾದರೂ ಕಾರಣ ಇದ್ದಿರಬಹುದೇ? ಇದು ಈಗ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆ. ಆದರೆ ಈ ಪ್ರಶ್ನೆ ಸಂಜೀವ ಗೊಯೆಂಕಾ ಅವರಿಗೆ ಎದುರಾಗಲಿಲ್ಲ. ಬದಲು, ಧೋನಿ ಗಿಂತ ಸ್ಮಿತ್‌ ಹೆಚ್ಚಿನ “ಕ್ರಿಕೆಟ್‌ ಬುದ್ಧಿಶಕ್ತಿ’ ಯುಳ್ಳ ಆಟಗಾರ ಎಂದು ಹೇಳಿದರು. ಅವರ ಈ ಹೇಳಿಕೆ ಬೇರೊಂದು ವಿವಾದ ವನ್ನು ಹುಟ್ಟುಹಾಕಲೂಬಹುದು!

ಟಾಪ್ ನ್ಯೂಸ್

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.