ಸೌಲಭ್ಯ ವಂಚಿತ ಮಕ್ಕಳಿಗಾಗಿ ಸಾಂತಾಕ್ಲಾಸ್ ಆದ ಸಚಿನ್
Team Udayavani, Dec 27, 2018, 6:15 AM IST
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕ್ರಿಸ್ಮಸ್ ಪ್ರಯುಕ್ತ ಮುಂಬೈನ ಸೌಲಭ್ಯ ವಂಚಿತ ಮಕ್ಕಳಿಗಾಗಿ ಸಾಂತಾಕ್ಲಾಸ್ ವೇಷ ಧರಿಸಿ ಅಚ್ಚರಿಯ ಉಡುಗೊರೆ ನೀಡಿದ್ದಾರೆ.
ಸರ್ಕಾರೇತರ ಸಂಸ್ಥೆ (ಎನ್ಜಿಒ)ಯೊಂದು ಮಕ್ಕಳಿಗಾಗಿ ಮುಂಬೈನಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಅದರಲ್ಲಿ ಸಚಿನ್ ಸಾಂತಾಕ್ಲಾಸ್ ವೇಷಧರಿಸಿ ಭಾಗವಹಿಸಿ ಮಕ್ಕಳಿಗೆ ಹಬ್ಬದ ಶುಭಾಶಯ ಕೋರಿದರು. ಬಳಿಕ ಮಕ್ಕಳ ಜತೆ ಕೆಲವು ಹೊತ್ತು ಸ್ಮರಣೀಯ ಕ್ಷಣಗಳನ್ನು ಕಳೆದರು. ಸ್ವತಃ ಸಚಿನ್ ಇದನ್ನು ಟ್ವೀಟರ್ನಲ್ಲಿ ಪ್ರಕಟಿಸಿದ್ದು, ಮುಗª ಮಕ್ಕಳ ನಗುವಿಗೆ ಎಂದಿಗೂ ಬೆಲೆ ಕಟ್ಟಲಾಗದು ಎಂದಿದ್ದಾರೆ.