![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಸಿದಾಕ್ ಸಿಂಗ್: 10 ವಿಕೆಟ್ ಸಾಹಸ
Team Udayavani, Nov 4, 2018, 6:00 AM IST
![sidak-singh.jpg](https://www.udayavani.com/wp-content/uploads/2018/11/4/sidak-singh-620x349.jpg)
ಮುಂಬಯಿ: ಪುದುಚೇರಿಯ 19ರ ಹರೆಯದ ಎಡಗೈ ಸ್ಪಿನ್ನರ್ ಸಿದಾಕ್ ಸಿಂಗ್ “ಕರ್ನಲ್ ಸಿ.ಕೆ. ನಾಯ್ಡು ಅಂಡರ್-23′ ಪಂದ್ಯಾವಳಿಯಲ್ಲಿ ಎದುರಾಳಿ ಮಣಿಪುರ ತಂಡದ ಎಲ್ಲ 10 ವಿಕೆಟ್ಗಳನ್ನು ಕಿತ್ತು ಸುದ್ದಿಯಾಗಿದ್ದಾರೆ.
ಪುದುಚೇರಿಯ “ಸಿಎಪಿ ಸೀಶೆಮ್ ಗ್ರೌಂಡ್’ನಲ್ಲಿ ನಡೆದ ಪಂದ್ಯದಲ್ಲಿ ಸಿದಾಕ್ ಈ ಸಾಧನೆಗೈದರು. ಅವರ ಬೌಲಿಂಗ್ ಫಿಗರ್ ಹೀಗಿದೆ: 17.5-7-31-10.
ಈ ಸಾಧನೆಯ ಮೂಲಕ ಸಿದಾಕ್ ಸಿಂಗ್ ಭಾರತದ ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ಸಾಹಸವನ್ನು ನೆನಪಿಸಿದರು. ಪಾಕಿಸ್ಥಾನ ವಿರುದ್ಧದ 1999ರ ಹೊಸದಿಲ್ಲಿ ಟೆಸ್ಟ್ನಲ್ಲಿ ಕುಂಬ್ಳೆ ಈ ಪರಾಕ್ರಮಗೈದಿದ್ದರು.
ಭಾರತದ ಸ್ಪಿನ್ ಚತುಷ್ಟಯರಲ್ಲಿ ಒಬ್ಬರಾಗಿದ್ದ ಬಿಷನ್ ಸಿಂಗ್ ಬೇಡಿ ಅವರ ಬೌಲಿಂಗ್ ಶೈಲಿಯನ್ನು ಹೋಲುವ ಸಿದಾಕ್ ಸಿಂಗ್ ಇದಕ್ಕೂ ಮುನ್ನ ಮುಂಬಯಿ ತಂಡವನ್ನು ಪ್ರತಿನಿಧಿಸುತ್ತಿದ್ದರು. ಮುಂಬಯಿ ಪರ 7 ಟಿ20 ಪಂದ್ಯಗಳನ್ನಾಡಿದ್ದಾರೆ. 2015ರಲ್ಲಿ ಪಶ್ಚಿಮ ವಲಯ ಟಿ20 ಚಾಂಪಿಯನ್ಶಿಪ್ಗಾಗಿ ಮುಂಬಯಿ ಅಂಡರ್-15 ತಂಡಕ್ಕೆ ಆಯ್ಕೆ ಆಗುವುದರೊಂದಿಗೆ ಸಿದಾಕ್ ಅವರ ಅದೃಷ್ಟ ಖುಲಾಯಿಸುತ್ತ ಹೋಯಿತು. ಮುಂಬಯಿ ತಂಡಕ್ಕೆ ಸೇರ್ಪಡೆಗೊಂಡ 2ನೇ ಅತೀ ಕಿರಿಯ ಕ್ರಿಕೆಟಿಗನೆಂಬ ಹೆಗ್ಗಳಿಕೆಯೂ ಅವರಿಗೆ ಒಲಿಯಿತು. ಮೊದಲಿಗನೆಂದರೆ ಸಚಿನ್ ತೆಂಡುಲ್ಕರ್!
ಆದರೆ ಸಂಶಯಾಸ್ಪದ ಬೌಲಿಂಗ್ ಶೈಲಿ ಎನ್ನುವುದು ಸಿದಾಕ್ ಪಾಲಿಗೆ ಭಾರೀ ಹಿನ್ನಡೆಯಾಗಿ ಪರಿಣಮಿಸಿತು. ಈಗ ಬೌಲಿಂಗ್ ಶೈಲಿ ಬದಲಿಸಿಕೊಂಡು ಬಂದ ಸಿದಾಕ್ ಪುದುಚೇರಿ ತಂಡವನ್ನು ಪ್ರತಿನಿಧಿಸಿ ವಿಶಿಷ್ಟ ಸಾಧನೆಯೊಂದಿಗೆ ಗುರುತಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.