Ranji ಸೆಮಿಫೈನಲ್‌ಗೆ ವೇದಿಕೆ ಸಜ್ಜು : ಮುಂಬಯಿ-ತಮಿಳುನಾಡು ಹೋರಾಟ


Team Udayavani, Mar 2, 2024, 6:00 AM IST

1-weewqeqw

ಮುಂಬಯಿ: ಪ್ರತಿಷ್ಠಿತ ದೇಶೀಯ ಕ್ರಿಕೆಟ್‌ ಪಂದ್ಯಾವಳಿ “ರಣಜಿ ಟ್ರೋಫಿ’ ಉಪಾಂತ್ಯಕ್ಕೆ ಬಂದು ತಲುಪಿದೆ. ಶನಿವಾರ ಮುಂಬಯಿಯಲ್ಲಿ “ರಣಜಿ ಕಿಂಗ್‌’ ಖ್ಯಾತಿಯ ಮುಂಬಯಿ ಮತ್ತು ತಮಿಳು ನಾಡು, ನಾಗ್ಪುರದಲ್ಲಿ ವಿದರ್ಭ ಮತ್ತು ಮಧ್ಯ ಪ್ರದೇಶ ಮುಖಾಮುಖಿ ಆಗಲಿವೆ.

ಇವುಗಳಲ್ಲಿ ಮುಂಬಯಿ-ತಮಿಳುನಾಡು ನಡುವಿನ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರಬಹುದೆಂಬುದು ಕ್ರಿಕೆಟ್‌ ಅಭಿಮಾ ನಿಗಳ ನಿರೀಕ್ಷೆ. ತವರಿನ ಪಂದ್ಯವಾದ ಕಾರಣ ಮುಂಬಯಿಗೆ ಹೆಚ್ಚಿನ ಲಾಭವಾ ದೀತೆಂಬುದು ಮತ್ತೂಂದು ಲೆಕ್ಕಾಚಾರ. ಮುಂಬಯಿ ಕೊನೆಯ ತನಕವೂ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ತಂಡ ಎಂಬುದಕ್ಕೆ ಕ್ವಾರ್ಟರ್‌ ಫೈನಲ್‌ನಲ್ಲಿ ಉತ್ತಮ ನಿದರ್ಶನ ಸಿಕ್ಕಿದೆ. ತನುಷ್‌ ಕೋಟ್ಯಾನ್‌ ಮತ್ತು ತುಷಾರ್‌ ದೇಶಪಾಂಡೆ 10ನೇ, 11ನೇ ಕ್ರಮಾಂಕದಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದರು. ಹಾಗೆಯೇ ಒನ್‌ಡೌನ್‌ ಬ್ಯಾಟರ್‌ ಮುಶೀರ್‌ ಖಾನ್‌ ಅಜೇಯ ದ್ವಿಶತಕ ದಾಖಲಿಸಿದ್ದರು. ಇದು ತಮಿಳುನಾಡು ಪಾಲಿಗೊಂದು ಎಚ್ಚರಿಕೆಯ ಗಂಟೆ.

ತಮಿಳುನಾಡಿನ ಸ್ಪಿನ್‌ ಬಲ
ತಮಿಳುನಾಡಿನ ಕ್ವಾಲಿಟಿ ಸ್ಪಿನ್‌ ಆಕ್ರಮಣ ವನ್ನು ಹೇಗೆ ನಿಭಾಯಿಸೀತು ಎಂಬುದರ ಮೇಲೆ ಮುಂಬಯಿಯ ಭವಿಷ್ಯ ಅಡಗಿದೆ. ಸಾಯಿ ಕಿಶೋರ್‌ (47 ವಿಕೆಟ್‌) ಮತ್ತು ಎಡಗೈ ಸ್ಪಿನ್ನರ್‌ ಎಸ್‌. ಅಜಿತ್‌ ರಾಮ್‌ (41 ವಿಕೆಟ್‌) ತಮಿಳುನಾಡಿನ ಎರಡು ಪ್ರಬಲ ಬೌಲಿಂಗ್‌ ಅಸ್ತ್ರಗಳು. ಈ ಸೀಸನ್‌ನ ಅಗ್ರ ಬೌಲಿಂಗ್‌ ಸಾಧಕರು. ಮುಂಬಯಿಯ ಯಾವುದೇ ಬೌಲರ್‌ ಟಾಪ್‌-10 ಯಾದಿಯಲ್ಲಿಲ್ಲ. 32 ವಿಕೆಟ್‌ ಉರುಳಿಸಿರುವ ಮೋಹಿತ್‌ ಅವಸ್ಥಿ 13ನೇ ಸ್ಥಾನಿಯಾಗಿದ್ದಾರೆ.

ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿರುವ ಶ್ರೇಯಸ್‌ ಅಯ್ಯರ್‌ ಮುಂಬಯಿ ತಂಡಕ್ಕೆ ಮರಳಿದ್ದಾರೆ. ಇವರ ಫಾರ್ಮ್ ನಿರ್ಣಾಯಕ. ಹಾಗೆಯೇ 6 ಪಂದ್ಯಗಳಲ್ಲಿ ಕೇವಲ ಒಂದು ಫಿಫ್ಟಿ ಹೊಡೆದಿರುವ ನಾಯಕ ಅಜಿಂಕ್ಯ ರಹಾನೆ ಕೂಡ ಬ್ಯಾಟಿಂಗ್‌ ಫಾರ್ಮ್ ತೋರಬೇಕಿದೆ. ಓಪನರ್‌ಗಳಾದ ಪೃಥ್ವಿ ಶಾ, ಭೂಪೇನ್‌ ಲಾಲ್ವಾನಿ ಉತ್ತಮ ಅಡಿಪಾಯ ನಿರ್ಮಿಸಬೇಕಾದ ಅಗತ್ಯವಿದೆ.

ತಮಿಳುನಾಡಿನ ಬ್ಯಾಟಿಂಗ್‌ ಸರದಿ ಕೂಡ ಬಲಿಷ್ಠ. ಒಂದು ತ್ರಿಶತಕ (321), ಒಂದು ದ್ವಿಶತಕ (ಅಜೇಯ 245) ಸೇರಿದಂತೆ 821 ರನ್‌ ಪೇರಿಸಿರುವ ಎನ್‌. ಜಗದೀಶನ್‌ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಬಾಬಾ ಇಂದ್ರಜಿತ್‌ ಕಳೆದ 3 ಪಂದ್ಯಗಳಲ್ಲಿ 80, 187, 98 ಮತ್ತು 48 ರನ್‌ ಹೊಡೆದ ಬ್ಯಾಟಿಂಗ್‌ ಫಾರ್ಮ್ ತೆರೆದಿರಿಸಿದ್ದಾರೆ.

ಮಧ್ಯ ಪ್ರದೇಶಕ್ಕೆ ವಿದರ್ಭ ಸವಾಲು
ನಾಗ್ಪುರ: ಇನ್ನೊಂದು ರಣಜಿ ಸೆಮಿಫೈನಲ್‌ನಲ್ಲಿ ಎರಡು ಬಾರಿಯ ಚಾಂಪಿಯನ್‌ ವಿದರ್ಭ ತವರಿನಂಗಳದಲ್ಲಿ ಮಧ್ಯ ಪ್ರದೇಶ ವಿರುದ್ಧ ಸೆಣಸಲಿದೆ. ಪ್ರಸಕ್ತ ಋತುವಿನಲ್ಲಿ “ವಿಸಿಎ’ಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ವಿದರ್ಭ ಮೂರನ್ನು ಗೆದ್ದಿದೆ. ಸೌರಾಷ್ಟ್ರ ವಿರುದ್ಧ ಸೋಲನುಭವಿಸಿದೆ.

ಬ್ಯಾಟರ್‌ಗಳ ಸಾಂಘಿ ಕ ಆಟ ವಿದರ್ಭದ ಹೆಚ್ಚುಗಾರಿಕೆ. ಕರ್ನಾಟಕವನ್ನು ತೊರೆದು ಹೋದ ಕರುಣ್‌ ನಾಯರ್‌ (515), ದಿಲ್ಲಿಯಿಂದ ಬಂದ ಧ್ರುವ ಶೋರಿ (496 ರನ್‌), ಓಪನರ್‌ ಅಥರ್ವ ತೈಡೆ (488 ರನ್‌), ನಾಯಕ ಅಕ್ಷಯ್‌ ವಾಡ್ಕರ್‌ (452 ರನ್‌) ಬೇರೆ ಬೇರೆ ಸಂದರ್ಭಗಳಲ್ಲಿ ಕ್ರೀಸ್‌ ಆಕ್ರಮಿಸಿಕೊಂಡು ತಂಡದ ರಕ್ಷಣೆಗೆ ನಿಂತಿದ್ದಾರೆ.
ನಾಗ್ಪುರ ಪಿಚ್‌ ವಿದರ್ಭದ ಪೇಸರ್‌ ಆದಿತ್ಯ ಠಾಕರೆ, ಎಡಗೈ ಸ್ಪಿನ್ನರ್‌ ಆದಿತ್ಯ ಸರ್ವಟೆ ಅವರಿಗೆ ಭಾರೀ ನೆರವು ನೀಡುವ ಸಾಧ್ಯತೆ ಇದೆ.

ಎಂಪಿ ಅದೃಷ್ಟಶಾಲಿ ತಂಡ
2022ರ ಚಾಂಪಿಯನ್‌ ಮಧ್ಯ ಪ್ರದೇಶ ಇಲ್ಲಿಯ ತನಕ ಬಂದದ್ದೇ ಅದೃಷ್ಟದ ಬಲದಿಂದ. ಆಂಧ್ರ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ ಇನ್ನೇನು ಸೋತೇ ಹೋಯಿತು ಎನ್ನುವಾಗ 4 ರನ್ನುಗಳ ರೋಚಕ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.

ವೆಂಕಟೇಶ್‌ ಅಯ್ಯರ್‌ (528 ರನ್‌), ಹಿಮಾಂಶು ಮಂತ್ರಿ (513), ಯಶ್‌ ದುಬೆ (510 ರನ್‌) ಮಧ್ಯ ಪ್ರದೇಶದ ಪ್ರಮುಖ ಬ್ಯಾಟರ್. ಆದರೆ ರಜತ್‌ ಪಾಟಿದಾರ್‌ ಟೆಸ್ಟ್‌ ತಂಡದಲ್ಲಿರುವ ಕಾರಣ ಲಭ್ಯರಿರುವುದಿಲ್ಲ.
ಎಡಗೈ ಸ್ಪಿನ್ನರ್‌ ಕುಮಾರ ಕಾರ್ತಿಕೇಯ (38 ವಿಕೆಟ್‌), ಹಿರಿಯ ಆಫ್ಸ್ಪಿನ್ನರ್‌ ಸಾರಾಂಶ್‌ ಜೈನ್‌ (27 ವಿಕೆಟ್‌), ಎಡಗೈ ಪೇಸ್‌ ಬೌಲರ್‌ ಕುಲ್ವಂತ್‌ ಖೆಜೊÅàಲಿಯ (26 ವಿಕೆಟ್‌) ತಂಡದ ಬೌಲಿಂಗ್‌ ಪ್ರಮುಖರು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.