ಭಾರತೀಯ ಆ್ಯತ್ಲೀಟ್ಗಳ ದ್ರವ್ಯ ಪರೀಕ್ಷೆ
Team Udayavani, Apr 4, 2018, 7:00 AM IST
ಗೋಲ್ಡ್ಕೋಸ್ಟ್: ಭಾರತೀಯ ಆ್ಯತ್ಲೀಟ್ಗಳ ಕೊಠಡಿಯಲ್ಲಿ ಸಿರಿಂಜ್ ಪತ್ತೆಯಾದ ಬಳಿಕ ಕಾಮನ್ವೆಲ್ತ್ ಗೇಮ್ಸ್ ಸಂಘಟಕರು ದ್ರವ್ಯ ಪರೀಕ್ಷೆಯನ್ನು ತೀವ್ರಗೊಳಿಸಿದ್ದಾರೆ. ಗೇಮ್ಸ್ ಆರಂಭಕ್ಕೆ ಮೊದಲೇ ಸಂಘಟಕರು ಸಮೂಹವಾಗಿ ಭಾರತೀಯ ಆ್ಯತ್ಲೀಟ್ಗಳ ದ್ರವ್ಯ ಪರೀಕ್ಷೆಗೆ ಮುಂದಾಗಿದ್ದಾರೆ.
ಆರಂಭದಲ್ಲಿ ದ್ರವ್ಯ ಪರೀಕ್ಷೆಗಾಗಿ ಮೂತ್ರದ ಸ್ಯಾಂಪಲ್ ನೀಡುವಂತೆ ಭಾರತದ ಎಲ್ಲ ಬಾಕ್ಸರ್ಗಳಲ್ಲಿ ಕೇಳಿಕೊಳ್ಳಲಾಯಿತು. ಆಬಳಿಕ ಆಸ್ಟ್ರೇಲಿಯನ್ ನ್ಪೋರ್ಟ್ಸ್ ಆ್ಯಂಟಿ ಡೋಪಿಂಗ್ ಏಜೆನ್ಸಿ (ಎಎಸ್ಎಡಿಎ)ಭಾರತದ ಜಿಮ್ನಾಸ್ಟ್ ಮತ್ತು ಈಜುಪಟುಗಳು ಕ್ರೀಡಾಗ್ರಾಮಕ್ಕೆ ಆಗಮಿಸುವ ಮೊದಲೇ ತಮ್ಮ ಮೂತ್ರದ ಸ್ಯಾಂಪಲ್ ನೀಡುವಂತೆ ಕೇಳಿಕೊಂಡಿದೆ. ಭಾರತೀಯರನ್ನು ಗುರುತಿಸಿ ಮತ್ತು ಪರೀಕ್ಷಿಸಿ ಎಂಬುದು ಎಎಸ್ಎಡಿಎಯ ಆದೇಶವಾಗಿತ್ತು.
ಭಾರತೀಯ ಆ್ಯತ್ಲೀಟ್ಗಳನ್ನು ಈ ರೀತಿಯಾಗಿ ದ್ರವ್ಯಪರೀಕ್ಷೆಗೆ ಒಳಪಡಿಸುತ್ತಿರುವುದು ಇದು ಸತತ ಮೂರನೇ ಗೇಮ್ಸ್ ಆಗಿದೆ. 2014ರ ಗ್ಲಾಸ್ಕೋ ಮತ್ತು 2016ರ ರಿಯೋದಲ್ಲಿ ಕೂಡ ಭಾರತೀಯ ಆ್ಯತ್ಲೀಟ್ಗಳನ್ನು ಸಮೂಹವಾಗಿ ದ್ರವ್ಯ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ