![Rahul Gandhi resfused to take Leader of Opposition post In Lok Sabha](https://www.udayavani.com/wp-content/uploads/2024/06/rahul-14-415x229.jpg)
T20;ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದ ವಿಂಡೀಸ್
Team Udayavani, May 27, 2024, 12:22 AM IST
![1-wi](https://www.udayavani.com/wp-content/uploads/2024/05/1-wi-620x349.jpg)
ಕಿಂಗ್ಸ್ಟನ್ (ಜಮೈಕಾ): ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ದ್ವಿತೀಯ ಟಿ20 ಪಂದ್ಯವನ್ನು 16 ರನ್ನುಗಳಿಂದ ಗೆದ್ದ ವೆಸ್ಟ್ ಇಂಡೀಸ್ ಸರಣಿಯನ್ನು ವಶಪಡಿಸಿಕೊಂಡಿದೆ. ವಿಶ್ವಕಪ್ಗೆ ಹೊಸ ಹುರುಪಿನಿಂದ ಸಜ್ಜುಗೊಂಡಿದೆ.
“ಸಬೀನಾ ಪಾರ್ಕ್’ನಲ್ಲಿ ನಡೆದ ಮುಖಾ ಮುಖೀಯಲ್ಲಿ ವೆಸ್ಟ್ ಇಂಡೀಸ್ 7 ವಿಕೆಟಿಗೆ 207 ರನ್ ರಾಶಿ ಹಾಕಿದರೆ, ದಕ್ಷಿಣ ಆಫ್ರಿಕಾ 7 ವಿಕೆಟಿಗೆ 191ರ ತನಕ ಬಂದು ಶರಣಾಯಿತು. ಮೊದಲ ಪಂದ್ಯವನ್ನು ಕೆರಿಬಿಯನ್ ಪಡೆ 28 ರನ್ನುಗಳಿಂದ ಗೆದ್ದಿತ್ತು.
ರೋಸ್ಟನ್ ಚೇಸ್ ಅವರ ಆಲ್ರೌಂಡ್ ಪ್ರದರ್ಶನ ವಿಂಡೀಸ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಸರ್ವಾಧಿಕ 67 ರನ್ (38 ಎಸೆತ, 7 ಬೌಂಡರಿ, 2 ಸಿಕ್ಸರ್) ಬಾರಿಸಿದ ಚೇಸ್, ಬಳಿಕ ದಕ್ಷಿಣ ಆಫ್ರಿಕಾದ ಆರಂಭಕಾರ ರೀಝ ಹೆಂಡ್ರಿಕ್ಸ್ ಅವರನ್ನು ಬೌಲ್ಡ್ ಮಾಡಿ ತಂಡದ ಕುಸಿತಕ್ಕೆ ಕಾರಣರಾದರು. ಹೆಂಡ್ರಿಕ್ಸ್ (34) ಮತ್ತು ಡಿ ಕಾಕ್ (41) ಆರಂಭಿಕ ವಿಕೆಟಿಗೆ ಕೇವಲ 5 ಓವರ್ಗಳಿಂದ 81 ರನ್ ಪೇರಿಸಿ ಸಿಡಿದು ನಿಂತಿದ್ದರು.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-7 ವಿಕೆಟಿಗೆ 207 (ಚೇಸ್ ಔಟಾಗದೆ 67, ಕಿಂಗ್ 36, ಮೇಯರ್ 32, ಫ್ಲೆಚರ್ 29, ಪೀಟರ್ 32ಕ್ಕೆ 2, ಎನ್ಗಿಡಿ 41ಕ್ಕೆ 2). ದಕ್ಷಿಣ ಆಫ್ರಿಕಾ-7 ವಿಕೆಟಿಗೆ 191 (ಡಿ ಕಾಕ್ 41, ಹೆಂಡ್ರಿಕ್ಸ್ 34, ಡುಸೆನ್ 34, ಮೋಟಿ 22ಕ್ಕೆ 3).
ಟಾಪ್ ನ್ಯೂಸ್
![Rahul Gandhi resfused to take Leader of Opposition post In Lok Sabha](https://www.udayavani.com/wp-content/uploads/2024/06/rahul-14-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Rahul Gandhi resfused to take Leader of Opposition post In Lok Sabha](https://www.udayavani.com/wp-content/uploads/2024/06/rahul-14-150x83.jpg)
Lok Sabha; ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಬಹುತೇಕ ಅಂತಿಮ; ಹುದ್ದೆ ಬೇಡ ಎಂದ ರಾಹುಲ್
![Goa Calangute Beach: ಮೊಬೈಲ್,ಬ್ಯಾಗ್ ಕಳ್ಳತನ; ಮೂವರ ಬಂಧನ](https://www.udayavani.com/wp-content/uploads/2024/06/GOA-A-150x81.jpg)
Goa Calangute Beach: ಮೊಬೈಲ್,ಬ್ಯಾಗ್ ಕಳ್ಳತನ; ಮೂವರ ಬಂಧನ
![ಬಾಗಲಕೋಟೆ: ಇಳಕಲ್ಲ ಸೀರೆಯುಟ್ಟು ಓಡಿದ 1500 ನಾರಿಯರು !](https://www.udayavani.com/wp-content/uploads/2024/06/Bagalkot-150x73.jpg)
ಬಾಗಲಕೋಟೆ: ಇಳಕಲ್ಲ ಸೀರೆಯುಟ್ಟು ಓಡಿದ 1500 ನಾರಿಯರು !
![ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/06/maski-150x90.jpg)
ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು
![ಪಂಪ್ವೆಲ್-ಪಡೀಲ್ ಚತುಷ್ಪಥ ಕಾಮಗಾರಿ: ಸಂಚಾರಕ್ಕೆ ಸಂಕಷ್ಟ](https://www.udayavani.com/wp-content/uploads/2024/06/Pump-150x76.jpg)
ಪಂಪ್ವೆಲ್-ಪಡೀಲ್ ಚತುಷ್ಪಥ ಕಾಮಗಾರಿ: ಸಂಚಾರಕ್ಕೆ ಸಂಕಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.