ಸರಣಿ ಗೆಲುವಿನ ಹೊಸ್ತಿಲಲ್ಲಿ ಭಾರತ


Team Udayavani, Feb 10, 2018, 6:45 AM IST

India—South-Africa-4th-OD.jpg

ಜೊಹಾನ್ಸ್‌ಬರ್ಗ್‌: ವಿರಾಟ್‌ ಕೊಹ್ಲಿ ನೇತೃತ್ವದ ಭಾರತೀಯ ಏಕದಿನ ತಂಡ ದಕ್ಷಿಣ ಆಫ್ರಿಕಾ ನೆಲದಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಪ್ರಚಂಡ ನಿರ್ವಹಣೆ ನೀಡುತ್ತಿದೆ. ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ 3-0 ಮುನ್ನಡೆ ಸಾಧಿಸಿರುವ ಟೀಮ್‌ ಇಂಡಿಯಾ ಶನಿವಾರ ನಡೆಯುವ ನಾಲ್ಕನೇ ಪಂದ್ಯದಲ್ಲೂ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಮಣಿಸಿ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಲು ಹಾತೊರೆಯುತ್ತಿದೆ. ಆದರೆ ಎಬಿ ಡಿ’ವಿಲಿಯರ್ ಆಗಮನದಿಂದ ದಕ್ಷಿಣ ಆಫ್ರಿಕಾ ತಿರುಗಿ ಬೀಳುವ ಸಾಧ್ಯತೆಯಿದೆ.

ಆರಂಭದ ಮೂರು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ ಭಾರತ ಸರಣಿ ಗೆಲುವಿನ ಐತಿಹಾಸಿಕ ಕ್ಷಣವನ್ನು ಎದುರು ನೋಡುತ್ತಿದೆ. ಸರಣಿ ಗೆಲುವಿನ ಸಾಮರ್ಥ್ಯ ಕೂಡ ಭಾರತಕ್ಕೆ ಇದೆ. ಆದರೆ ಬಹಳಷ್ಟು ಎಚ್ಚರಿಕೆಯಿಂದ ಆಡುವುದು ಅತೀ ಮುಖ್ಯವಾಗಿದೆ. ಸರಣಿಯ ಇನ್ನುಳಿದ ಪಂದ್ಯಗಳಲ್ಲಿ ಒಂದನ್ನು ಗೆದ್ದರೆ ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಬಾರಿ ಸರಣಿ ಗೆಲ್ಲಲಿದೆ.

ಭಾರತ ಈ ಹಿಂದೆ 2010-11ರಲ್ಲಿ ಸರಣಿ ಗೆಲುವಿನ ಸನಿಹಕ್ಕೆ ಬಂದಿತ್ತು. ಎಂಎಸ್‌ ಧೋನಿ ನೇತೃತ್ವದ ಭಾರತೀಯ ತಂಡ 2-1 ಮುನ್ನಡೆ ಪಡೆದ ಬಳಿಕ ಐದು ಪಂದ್ಯಗಳ ಸರಣಿಯನ್ನು 2-3ರಿಂದ ಸೋತಿತ್ತು. ಈ ಬಾರಿ ಗಾಯದ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾ ಬಳಲುತ್ತಿರುವ ಕಾರಣ ಭಾರತಕ್ಕೆ ಸರಣಿ ಗೆಲ್ಲುವ ಅವಕಾಶ ಉಜ್ವಲವಾಗಿದೆ.

1992-93ರಲ್ಲಿ ಭಾರತ ಇಲ್ಲಿಗೆ ಪ್ರವಾಸಗೈದ ಬಳಿಕ ಇಷ್ಟರವರೆಗೆ ಸರಣಿಯೊಂದರಲ್ಲಿ ಮೂರು ಪಂದ್ಯ ಗೆದ್ದದ್ದಿಲ್ಲ. ಆದರೆ ನ್ಯೂಲ್ಯಾಂಡ್‌ನ‌ಲ್ಲಿ ನಡೆದ ಈ ಸರಣಿಯ ಮೂರನೇ ಪಂದ್ಯ ಗೆಲ್ಲುವ ಮೂಲಕ ಭಾರತ ದ್ವಿಪಕ್ಷೀಯ ಸರಣಿಯಲ್ಲಿ ಮೂರು ಪಂದ್ಯ ಗೆದ್ದ ಸಂಭ್ರಮ ಆಚರಿಸಿತು. ಇದೀಗ ಸತತ ನಾಲ್ಕನೇ ಗೆಲುವಿನ ಸನಿಹದಲ್ಲಿ ಭಾರತವಿದೆ. ಒಂದು ವೇಳೆ ಇದರಲ್ಲಿ ಭಾರತ ಯಶಸ್ವಿಯಾದರೆ ನೂತನ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂಬರ್‌ ವನ್‌ ಸ್ಥಾನ ಪಡೆಯಲಿದೆ.

ಗೆಲುವಿಗಾಗಿ ಪ್ರಯತ್ನ
ಸರಣಿಯ ಎಲ್ಲ ಪಂದ್ಯಗಳನ್ನು ಗೆಲ್ಲಲು ಭಾರತ ಬಯಸುತ್ತದೆ ಎಂದು ಮೂರನೇ ಏಕದಿನದ ಮೊದಲು ಶಿಖರ್‌ ಧವನ್‌ ಹೇಳಿದ್ದರು. ಡ್ರೆಸ್ಸಿಂಗ್‌ ರೂಂನಲ್ಲಿಯೂ ಎಲ್ಲರೂ ಇದರ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಟೆಸ್ಟ್‌ ಸರಣಿಯಲ್ಲಿ ಮೂರನೇ ಪಂದ್ಯ ಗೆದ್ದ ಬಳಿಕ ಭಾರತ ಉತ್ತಮ ಆಟದ ಪ್ರದರ್ಶನ ನೀಡುತ್ತಿದೆ. ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 34ನೇ ಶತಕ ಸಿಡಿಸುವ ಮೂಲಕ ಭಾರತಕ್ಕೆ ಇನ್ನೊಂದು ಗೆಲುವು ತಂದುಕೊಟ್ಟಿದ್ದರು. ಇನ್ನೆರಡು ಪಂದ್ಯಗಳು ಬಾಕಿ ಇರುವಾಗಲೇ ಸರಣಿ ಗೆಲ್ಲಲು ನಾವು ಕಠಿನ ಪ್ರಯತ್ನ ನಡೆಸಲಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ.

ಕೊಹ್ಲಿಯ ಜತೆ ಕುಲದೀಪ್‌ ಯಾದವ್‌ ಮತ್ತು ಯಜುವೇಂದ್ರ ಚಾಹಲ್‌ ಅವರ ಅಮೋಘ ನಿರ್ವಹಣೆಯಿಂದ ಭಾರತ ಸರಣಿ ಗೆಲ್ಲಲು ಒಳ್ಳೆಯ ಅವಕಾಶವಿದೆ. ಈ ಸರಣಿಯಲ್ಲಿ ಕುಲದೀಪ್‌ 21 ಮತ್ತು ಚಾಹಲ್‌ 30 ವಿಕೆಟ್‌ ಪಡೆದಿದ್ದಾರೆ.

ಡಿ’ವಿಲಿಯರ್ ಸೇರ್ಪಡೆ
ನ್ಯೂಲ್ಯಾಂಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರು ಐವರು ಸ್ಪಿನ್ನರ್‌ಗಳ ಜತೆ ಕಠಿನ ಅಭ್ಯಾಸ ನಡೆಸಿದರೂ ಅವರ ಬ್ಯಾಟಿಂಗ್‌ ಪ್ರಗತಿ ಕಾಣಲಿಲ್ಲ. ಆದರೆ ಡಿ’ವಿಲಿಯರ್ ತಂಡಕ್ಕೆ ಸೇರ್ಪಡೆಯಾಗಿದ್ದರಿಂದ ತಂಡದ ಬಲ ಹೆಚ್ಚಾಗಿದೆ. ಅವರ ಉಪಸ್ಥಿತಿಯಿಂದ ತಂಡ ಏನಾದರೂ ಮ್ಯಾಜಿಕ್‌ ಮಾಡುತ್ತದೆಯೇ ನೋಡಬೇಕಾಗಿದೆ. ಬೆರಳ ಗಾಯದಿಂದ ಡಿ’ವಿಲಿಯರ್ ಮೊದಲ ಮೂರು ಪಂದ್ಯಗಳಲ್ಲಿ ಆಡಿರಲಿಲ್ಲ. ಒಂದು ವೇಳೆ ಡಿ’ವಿಲಿಯರ್ ಆಡಿದರೆ ಅವರು ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಡ್ಯುಮಿನಿ ನಾಲ್ಕನೇ ಕ್ರಮಾಂಕಕ್ಕೆ ಜಾರಲಿದ್ದಾರೆ. ಮಿಲ್ಲರ್‌ ಅಥವಾ ಜೊಂಡೊ ಅವರಲ್ಲಿ ಒಬ್ಬರು ತಂಡದಿಂದ ಹೊರಗುಳಿಯಲಿದ್ದಾರೆ. ತಂಡವನ್ನು ಐಡೆನ್‌ ಮಾರ್ಕ್‌ರಮ್‌ ಮುನ್ನಡೆಸಲಿದ್ದಾರೆ.

ಪಿಂಕ್‌ ಏಕದಿನ
ಸ್ತನ ಕ್ಯಾನ್ಸರ್‌ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಈ ರೋಗದಿಂದ ಬಳಲುತ್ತಿರುವ ಮಂದಿಗೆ ನೆರವಾಗಲು ಈ ಪಂದ್ಯವನ್ನು “ಪಿಂಕ್‌ ಏಕದಿನ’ವನ್ನಾಗಿ ಆಡಿಸಲಾಗುತ್ತದೆ. ಇಂತಹ ಪಂದ್ಯ 2011ರಲ್ಲಿ ಮೊದಲ ಬಾರಿ ಆಡಿಸಲಾಗಿತ್ತು. ಇದು ಆರನೇ ಪಂದ್ಯವಾಗಿದೆ. ಪಿಂಕ್‌ ಜರ್ಸಿಯಲ್ಲಿ ಆಡುತ್ತಿರುವ ವೇಳೆ ದಕ್ಷಿಣ ಆಫ್ರಿಕಾ ಒಮ್ಮೆಯೂ ಸೋತದ್ದಿಲ್ಲ.  ಪಿಂಕ್‌ ಏಕದಿನದಲ್ಲಿ ಡಿ’ವಿಲಿಯರ್ ಉತ್ತಮ ನಿರ್ವಹಣೆ ದಾಖಲಿಸಿದ್ದಾರೆ. 2015ರಲ್ಲಿ ಅವರು ವೆಸ್ಟ್‌ಇಂಡೀಸ್‌ ವಿರುದ್ದ ಕೇವಲ 44 ಎಸೆತಗಳಲ್ಲಿ 149 ರನ್‌ ಹೊಡೆದಿದ್ದರು. 2013ರಲ್ಲಿ ಭಾರತ ಮೊದಲ ಬಾರಿ ಪಿಂಕ್‌ ಏಕದಿನದಲ್ಲಿ ಆಡಿದಾಗ ಡಿ’ವಿಲಿಯರ್ 47 ಎಸೆತಗಳಿಂದ 77 ರನ್‌ ಹೊಡೆದಿದ್ದರು.

ಸಂಭಾವ್ಯ ತಂಡಗಳು
ಭಾರ
ತ: ರೋಹಿತ್‌ ಶರ್ಮ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಎಂಎಸ್‌ ಧೋನಿ, ಕೇದಾರ್‌ ಜಾಧವ್‌, ಹಾರ್ದಿಕ್‌  ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಕುಲದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಯುಜುವೇಂದ್ರ ಚಾಹಲ್‌

ದಕ್ಷಿಣ ಆಫ್ರಿಕಾ: ಹಾಶಿಮ್‌ ಆಮ್ಲ, ಐಡೆನ್‌ ಮಾರ್ಕ್‌ರಾಮ್‌ (ನಾಯಕ), ಜೀನ್‌ಪಾಲ್‌ ಡ್ಯುಮಿನಿ, ಖಾಯ ಝೊಂಡೊ, ಡೇವಿಡ್‌ ಮಿಲ್ಲರ್‌, ಫ‌ರ್ಹಾನ್‌ ಬೆಹರ್ಡಿನ್‌, ಹೆನ್ರಿಚ್‌ ಕ್ಲಾಸೆನ್‌, ಕ್ರಿಸ್‌ ಮೊರಿಸ್‌, ಕಾಗಿಸೊ ರಬಾಡ, ಮಾರ್ನೆ ಮಾರ್ಕೆಲ್‌, ಇಮ್ರಾನ್‌ ತಾಹಿರ್‌
ಪಂದ್ಯ ಆರಂಭ: ಸಂಜೆ 4.30
ಪ್ರಸಾರ: ಸೋನಿ ಟೆನ್‌ ನೆಟ್‌ವರ್ಕ್‌

ಪಿಚ್‌ ಹೀಗಿದೆ
ಟೆಸ್ಟ್‌ ಸರಣಿಗೆ ಸೂಕ್ತವಾದ ನ್ಯೂಲ್ಯಾಂಡ್ಸ್‌ ಪಿಚ್‌ ದಕ್ಷಿಣ ಆಫ್ರಿಕಾ ಪಾಲಿಗೆ ಶುಭದಾಯಕ ಎನಿಸಿಕೊಂಡಿದೆ. ಸೀಮ್‌ ಬೌಲರ್‌ಗಳಿಗೆ ಸ್ವಲ್ಪಮಟ್ಟಿಗೆ ನೆರವಾಗುವ ಸಾಧ್ಯತೆಯಿದ್ದರೂ ಈ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತಿದೆ. ಕಳೆದ ಆರು ಏಕದಿನ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ತಂಡ ಸರಾಸರಿಯಾಗಿ 300 ಪ್ಲಸ್‌ ರನ್‌ ಗಳಿಸಿದೆ. ದಿನವಿಡೀ ಬಿಸಿಲು ಇರಲಿದ್ದು ಮಧ್ಯಾಹ್ನ 30 ಡಿಗ್ರಿ ತಾಪಮಾನ ಇರಲಿದೆ.
ಅಂಕಿ ಅಂಶ
* ನ್ಯೂಲ್ಯಾಂಡ್ಸ್‌ ದಕ್ಷಿಣ ಆಫ್ರಿಕಾದ ನೆಚ್ಚಿನ ತಾಣವಾಗಿದೆ. ಇಲ್ಲಿ ಆಡಿದ 33 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ 28 ಪಂದ್ಯಗಳಲ್ಲಿ ಗೆದ್ದಿದೆ.
* ದ್ವಿಪಕ್ಷೀಯ ಏಕನಿರ ಸರಣಿಯಲ್ಲಿ ಭಾರತ ಈ ಹಿಂದೆ ದಕ್ಷಿಣ ಆಫ್ರಿಕಾವನ್ನು 2010ರ ಫೆಬ್ರವರಿಯಲ್ಲಿ ನಡೆದ ಪಂದ್ಯದಲ್ಲಿ ಸೋಲಿಸಿತ್ತು.
* ಸದ್ಯದ ದಕ್ಷಿಣ ಆಫ್ರಿಕಾ ತಂಡದಲ್ಲಿ ಡ್ಯುಮಿನಿ ಈ ಪಿಚ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ್ದಾರೆ. ಆಡಿದ 8 ಪಂದ್ಯಗಳಲ್ಲಿ ಅವರು ಮೂರು ಅರ್ಧಶತಕ ಸಹಿತ 301 ರನ್‌ ಹೊಡೆದಿದ್ದಾರೆ. ಹಾಶಿಮ್‌ ಆಮ್ಲ ಆರು ಪಂದ್ಯವನ್ನಾಡಿದ್ದು ಎರಡು ಅರ್ಧಶತಕ ಸಹಿತ 190 ರನ್‌ ಗಳಿಸಿದ್ದಾರೆ.

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.