ಮೇಲ್ದರ್ಜೆಗೇರಿದ ಕಂಠೀರವ ಕ್ರೀಡಾಂಗಣ: ಬಾಸ್ಕೆಟ್ಬಾಲ್ ಆಡಿದ ಸಿಎಂ
Team Udayavani, Jul 21, 2017, 9:11 AM IST
ಬೆಂಗಳೂರು: ಉದ್ಯಾನನಗರಿ ಕಂಠೀರವ ಒಳಾಂಗಣ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಉನ್ನತೀಕರಿಸಲಾಗಿದ್ದು ಸಿಎಂ ಸಿದ್ದರಾಮಯ್ಯ ಗುರುವಾರ ಕ್ರೀಡಾಂಗಣ ಪರಿಶೀಲನೆ ನಡೆಸಿದರು. ಕಳೆದ ವರ್ಷ ಮಳೆ ನೀರು ನುಗ್ಗಿದ್ದ ಪರಿಣಾಮ ಕ್ರೀಡಾಂಗಣ ಸಂಪೂರ್ಣವಾಗಿ ಹಾನಿಗೊಂಡಿತ್ತು. ಇದಾದ ಬಳಿಕ ಯುವಸಬಲೀಕರಣ ಕ್ರೀಡಾ ಇಲಾಖೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿತ್ತು.
ಅನುಮೋದನೆ ದೊರೆತ ಬಳಿಕ ಕೆಲಸ ಆರಂಭವಾಗಿತ್ತು.
ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಂಗಣವನ್ನು ಉನ್ನತೀಕರಿಸಲಾಗಿದೆ. ಮೇಪಲ್ ಮರದ ನೆಲಹಾಸು, ಎಲ್ ಇಡಿ ವಿದ್ಯುತ್ ದೀಪದ ವ್ಯವಸ್ಥೆ, 5 ಸಾವಿರ ಆಸನಗಳ ವ್ಯವಸ್ಥೆ, ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ, ಮಾಧ್ಯಮ ಮತ್ತು ಪ್ರಸಾರ ಕೊಠಡಿ ಹಾಗೂ ಕ್ರೀಡಾಪಟುಗಳ ಕೊಠಡಿಯನ್ನು ಒಳಗೊಂಡಿದೆ. ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ.ಜಾರ್ಜ್ ಮತ್ತಿತರರು ಉಪಸ್ಥಿತರಿದ್ದರು.