ವೆರ್ನನ್‌ ಫಿಲಾಂಡರ್‌ ನ್ಯೂ ಕ್ಯಾಲಿಸ್‌


Team Udayavani, Jul 19, 2017, 10:03 AM IST

19-SPO-9.gif

ನಾಟಿಂಗಂ: ವೆರ್ನನ್‌ ಫಿಲಾಂಡರ್‌ ದಕ್ಷಿಣ ಆಫ್ರಿಕಾ ತಂಡದ “ನೂತನ ಕ್ಯಾಲಿಸ್‌’ ಆಗುವತ್ತ ಹೆಜ್ಜೆ ಹಾಕುತ್ತಿದ್ದಾರೆ ಎಂದು ನಾಯಕ ಫಾಡು ಪ್ಲೆಸಿಸ್‌ ಹೇಳಿದ್ದಾರೆ. ಆತಿಥೇಯ ಇಂಗ್ಲೆಂಡ್‌ ವಿರುದ್ಧ ನಾಟಿಂಗಂ ಟೆಸ್ಟ್‌ನಲ್ಲಿ ಸಾಧಿಸಿದ 340 ರನ್ನುಗಳ ಅಮೋಘ ಗೆಲುವಿನಲ್ಲಿ ಫಿಲಾಂಡರ್‌ ವಹಿಸಿದ ಆಲ್‌ರೌಂಡರ್‌ ಪಾತ್ರವನ್ನು ಅವರು ಪ್ರಶಂಸಿಸುತ್ತಿದ್ದರು.

ಈ ಪಂದ್ಯದಲ್ಲಿ ಫಿಲಾಂಡರ್‌ 7ನೇ ಕ್ರಮಾಂಕದಲ್ಲಿ ಆಡಲಿಳಿದು ಕ್ರಮವಾಗಿ 54 ಹಾಗೂ 42 ರನ್‌ ಬಾರಿಸುವುದರ ಜತೆಗೆ 5 ವಿಕೆಟ್‌ ಕೂಡ ಉರುಳಿಸಿದ್ದರು. ಜಾಕ್‌ ಕ್ಯಾಲಿಸ್‌ ಅವರ ನಿವೃತ್ತಿಯ ಬಳಿಕ ದಕ್ಷಿಣ ಆಫ್ರಿಕಕ್ಕೆ ಸಮರ್ಥ ಆಲ್‌ ರೌಂಡರ್‌ನ ಕೊರತೆ ಕಾಡುತ್ತಿತ್ತು. ಈ ಸ್ಥಾನ ಫಿಲಾಂಡರ್‌ ತುಂಬಬಲ್ಲ ರೆಂಬುದು ಡು ಪ್ಲೆಸಿಸ್‌ ಆಶಯ.

“ಫಿಲಾಂಡರ್‌ ಬ್ಯಾಟಿಂಗ್‌ ಕಂಡಾಗ ಅವರು ನಮ್ಮ ತಂಡದ ನೂತನ ಜಾಕ್‌ ಕ್ಯಾಲಿಸ್‌ ಆಗುವ ಎಲ್ಲ ಲಕ್ಷಣ ತೋರಿಬರುತ್ತದೆ. ಅವ ರೋರ್ವ ಅದ್ಭುತ ಕ್ರಿಕೆಟಿಗ. ಪಿಚ್‌ನ ಸಂಪೂರ್ಣ ನೆರವು ಪಡೆಯುವ ಜಾಣ್ಮೆ ಫಿಲಾಂಡರ್‌ ಅವರಲ್ಲಿದೆ’ ಎಂದು ಮರಳಿ ತಂಡದ ನೇತೃತ್ವ ವಹಿಸಿದ ಡು ಪ್ಲೆಸಿಸ್‌ ಹೇಳಿದರು. ಮೊದಲ ಮಗುವಿನ ಜನನದ ಹಿನ್ನೆಲೆಯಲ್ಲಿ ಲಾರ್ಡ್ಸ್‌ನ ಪ್ರಥಮ ಟೆಸ್ಟ್‌ ಪಂದ್ಯದಿಂದ ಡು ಪ್ಲೆಸಿಸ್‌ ಹೊರಗುಳಿದಿದ್ದರು. ಈ ಪಂದ್ಯವನ್ನು ದಕ್ಷಿಣ ಆಫ್ರಿಕಾ 211 ರನ್ನುಗಳಿಂದ ಸೋತಿತ್ತು. 3ನೇ ಟೆಸ್ಟ್‌ ಜು. 27ರಿಂದ ಓವಲ್‌ನಲ್ಲಿ ಆರಂಭವಾಗಲಿದೆ.

“ಇಬ್ಬರು ಆಲ್‌ರೌಂಡರ್‌ಗಳಿಗಾಗಿ ನಾವು ಓರ್ವ ಬ್ಯಾಟ್ಸ್‌ ಮನ್‌ನನ್ನು ಹೊರಗಿಟ್ಟು ತಂಡವನ್ನು ಸಂಯೋಜಿಸಿದ್ದೆವು. ಇದು ಯಶಸ್ವಿ ಯಾಯಿತು…’ ಎಂಬುದಾಗಿ ಡು ಪ್ಲೆಸಿಸ್‌ ಹೇಳಿದರು. ತಂಡದಲ್ಲಿದ್ದ ಮತ್ತೂಬ್ಬ ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌.

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಇಂಗ್ಲೆಂಡ್‌ ಈ ಪಂದ್ಯದಲ್ಲಿ ಒಟ್ಟು 96.1 ಓವರ್‌ಗಳನ್ನಷ್ಟೇ ಎದುರಿಸಿತು. ಅದು ತವರಿನ ಟೆಸ್ಟ್‌ ಪಂದ್ಯದಲ್ಲಿ ನೂರಕ್ಕೂ ಕಡಿಮೆ ಓವರ್‌ ಎದುರಿಸಿದ್ದು ಇದು 7ನೇ ಸಲವಾದರೆ, ದ್ವಿತೀಯ ಮಹಾಯುದ್ಧದ ಬಳಿಕ ಕೇವಲ 5ನೇ ಸಲ.

* ದಕ್ಷಿಣ ಆಫ್ರಿಕಾ ರನ್‌ ಅಂತರದಲ್ಲಿ 4ನೇ ಅತೀ ದೊಡ್ಡ ಗೆಲುವು ಸಾಧಿಸಿತು (340 ರನ್‌). ಇದು ತವರಿನಾಚೆ ಆಫ್ರಿಕಾ ದಾಖಲಿಸಿದ 2ನೇ ದೊಡ್ಡ ಗೆಲುವು. 1994ರ ಲಾರ್ಡ್ಸ್‌ ಟೆಸ್ಟ್‌ನಲ್ಲಿ 356 ರನ್‌ ಜಯಭೇರಿ ಮೊಳಗಿಸಿದ್ದು ದಾಖಲೆ.

* ಟ್ರೆಂಟ್‌ಬ್ರಿಜ್‌ನಲ್ಲಿ ಇಂಗ್ಲೆಂಡ್‌ ಸತತ 7 ಟೆಸ್ಟ್‌ಗಳ ಬಳಿಕ ಮೊದಲ ಸೋಲುಂಡಿತು. ಅದು ಇಲ್ಲಿ ಕೊನೆಯ ಸೋಲನುಭವಿಸಿದ್ದು ಭಾರತದ ವಿರುದ್ಧ, 2007ರಲ್ಲಿ. ಅನಂತರ 6 ಟೆಸ್ಟ್‌ ಜಯಿಸಿದ ಇಂಗ್ಲೆಂಡ್‌, ಒಂದನ್ನು ಡ್ರಾ ಮಾಡಿಕೊಂಡಿತ್ತು.

* ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪುನರ್‌ ಪ್ರವೇಶ ಪಡೆದ ಬಳಿಕ ಟ್ರೆಂಟ್‌ಬ್ರಿಜ್‌ನಲ್ಲಿ ಆಡಲಾದ 3 ಟೆಸ್ಟ್‌ಗಳಲ್ಲಿ ದಕ್ಷಿಣ ಆಫ್ರಿಕಾ ಮೊದಲ ಜಯ ಸಾಧಿಸಿತು. 1998 ಹಾಗೂ 2003ರಲ್ಲಿ ಸೋಲನುಭವಿಸಿತ್ತು.

* ಇಂಗ್ಲೆಂಡ್‌ 11 ರನ್‌ ಅಂತರದಲ್ಲಿ ಕೊನೆಯ 5 ವಿಕೆಟ್‌ ಕಳೆದುಕೊಂಡಿತು. 5ಕ್ಕೆ 122 ರನ್‌ ಮಾಡಿದ್ದ ಆಂಗ್ಲ ಪಡೆ ಐದೇ ಓವರ್‌ಗಳಲ್ಲಿ 133ಕ್ಕೆ ಆಲೌಟ್‌ ಆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ತನ್ನ ಕೊನೆಯ 4 ವಿಕೆಟ್‌ಗಳನ್ನು 6 ರನ್‌ ಅಂತರದಲ್ಲಿ ಕಳೆದುಕೊಂಡಿತ್ತು.

* ವೆರ್ನನ್‌ ಫಿಲಾಂಡರ್‌ 6ನೇ ಸಲ, 2013ರ ಬಳಿಕ ಮೊದಲ ಸಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಟಾಪ್ ನ್ಯೂಸ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.