![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ವನಿತಾ ಟಿ20: ಮಂಧನಾ ಮಿಂಚಿನ ಆಟ
Team Udayavani, May 7, 2019, 6:00 AM IST
![Smriti-Mandhana](https://www.udayavani.com/wp-content/uploads/2019/05/Smriti-Mandhana-620x465.jpg)
ಜೈಪುರ: ವನಿತಾ ಟಿ20 ಚಾಲೆಂಜ್ ಸರಣಿಯ ಮೊದಲ ಪಂದ್ಯದಲ್ಲಿ ಸ್ಮತಿ ಮಂಧನಾ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇವರ 90 ರನ್ ಸಾಹಸದಿಂದ ಸೂಪರ್ನೊàವಾಸ್ ತಂಡದ ವಿರುದ್ಧ ಟ್ರೈಬ್ಲೇಝರ್ 5 ವಿಕೆಟಿಗೆ 140 ರನ್ ಪೇರಿಸಿದೆ.
ಸೋಮವಾರ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಟಾಸ್ ಸೋತ ಟ್ರೈಬ್ಲೇಝರ್ ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟಿತ್ತು. ಖ್ಯಾತ ಆಟಗಾರ್ತಿ ಸುಝೀ ಬೇಟ್ಸ್ ಕೇವಲ ಒಂದು ರನ್ನಿಗೆ ಔಟಾದಾಗ ತಂಡ ಆತಂಕಕ್ಕೆ ಸಿಲುಕಿತು. ಆಗ ನಾಯಕಿ ಮಂಧನಾ ಮತ್ತು ಹಲೀìನ್ ದೇವಲ್ ಸೇರಿಕೊಂಡು ಆಸರೆಯಾದರು. ದ್ವಿತೀಯ ವಿಕೆಟಿಗೆ 119 ರನ್ ಪೇರಿಸಿ ಮೆರೆದರು.
ಪ್ರಚಂಡ ಫಾರ್ಮ್ನಲ್ಲಿದ್ದ ಮಂಧನಾ ಆಕ್ರಮಣಕಾರಿ ಆಟದ ಮೂಲಕ ಶತಕದ ನಿರೀಕ್ಷೆ ಹುಟ್ಟಿಸಿದರು. ಆದರೆ ಅಂತಿಮ ಓವರ್ನಲ್ಲಿ ರಾಧಾ ಯಾದವ್ ಇದಕ್ಕೆ ಅಡ್ಡಿಯಾದರು. ಮಂಧನಾ 90 ರನ್ ಮಾಡಿ ವಾಪಸಾಗಬೇಕಾಯಿತು. 67 ಎಸೆತಗಳ ಈ ಸೊಗಸಾದ ಆಟದ ವೇಳೆ ಮಂಧನಾ 10 ಬೌಂಡರಿ, 3 ಸಿಕ್ಸರ್ ಬಾರಿಸಿ ಮೆರೆದರು.
ಹಲೀìನ್ ದೇವಲ್ ಗಳಿಕೆ 36 ರನ್ (44 ಎಸೆತ, 3 ಸಿಕ್ಸರ್). ಇವರಿಬ್ಬರನ್ನು ಹೊರತುಪಡಿಸಿದರೆ ಉಳಿದವರ್ಯಾರೂ ಎರಡಂಕಿಯ ಗಡಿ ತಲುಪಲಿಲ್ಲ.
ಟ್ರೈಬ್ಲೇಝರ್ ಕೊನೆಯ 10 ಎಸೆತಗಳಲ್ಲಿ 4 ವಿಕೆಟ್ ಕಳೆದುಕೊಂಡಿತು. 28 ರನ್ನಿಗೆ 2 ವಿಕೆಟ್ ಕಿತ್ತ ರಾಧಾ ಯಾದವ್ ಹೆಚ್ಚಿನ ಯಶಸ್ಸು ಸಾಧಿಸಿದರು.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.