ಆಡದ ಭಾರತಕ್ಕೆ ವಿಶ್ವಕಪ್‌ ಕಿಮ್ಮತ್ತು!


Team Udayavani, Jun 12, 2018, 6:00 AM IST

x-20.jpg

ಈ ಬಾರಿಯ ವಿಶ್ವಕಪ್‌ ಪಂದ್ಯಗಳ “ಕಿಕ್‌ ಆಫ್ ಟೈಮ್‌’ ನಿಗದಿಪಡಿಸುವಾಗ “ಇಂಡಿಯನ್‌ ಸ್ಟಾಂಡರ್ಡ್‌ ಟೈಮ್‌’ (ಐಎಸ್‌ಟಿ) ಗಣನೆಗೆ ಬಂದಿದೆ. ಭಾರತದವರು ನಿದ್ದೆಗೆಟ್ಟು ಕಾಲ್ಚೆಂಡಾಟ ನೋಡುವುದನ್ನು ತಪ್ಪಿಸಿ ಪಂದ್ಯದ ಸಮಯವನ್ನು ನಿಗದಿಪಡಿಸಲಾಗಿದೆ. ಭಾರತೀಯರ ಫ‌ುಟ್‌ಬಾಲ್‌ ಕ್ರೇಜ್‌ ಹಾಗೂ ಇಲ್ಲಿನ ಮಾರುಕಟ್ಟೆಯನ್ನು ಫಿಫಾ ಚೆನ್ನಾಗಿ ಎನ್‌ಕ್ಯಾಶ್‌ ಮಾಡಿಕೊಂಡಿದೆ. ನಮ್ಮ ಫ‌ುಟ್‌ಬಾಲ್‌ ಪ್ರೀತಿ ಈ ಮೂಲಕವೂ ವೃದ್ಧಿಸಲಿ!

ವಿಶ್ವದ 234ಕ್ಕೂ ಹೆಚ್ಚಿನ ದೇಶಗಳು ಆಡುವ ಫ‌ುಟಬಾಲ್‌ನಲ್ಲಿ ಭಾರತಕ್ಕೆ 97ನೇ ಶ್ರೇಯಾಂಕ. ಈ ಬಾರಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿರುವ 32 ದೇಶಗಳಲ್ಲಿ ಭಾರತದ ಹೆಸರಿಲ್ಲ. ಭಾರತ ಅರ್ಹತೆಯ ಹತ್ತಿರ ಹತ್ತಿರವೂ ಬಂದಿಲ್ಲ. ಆದರೇನಂತೆ, ಈ ಬಾರಿಯ ವಿಶ್ವಕಪ್‌ ಪಂದ್ಯಗಳ “ಕಿಕ್‌ ಆಫ್ ಟೈಮ್‌’ ನಿಗದಿಪಡಿಸುವಾಗ “ಇಂಡಿಯನ್‌ ಸ್ಟಾಂಡರ್ಡ್‌ ಟೈಮ್‌’ (ಐಎಸ್‌ಟಿ) ಗಣನೆಗೆ ಬಂದಿದೆ. ಭಾರತದವರು ನಿದ್ದೆಗೆಟ್ಟು ಕಾಲ್ಚೆಂಡಾಟ ನೋಡುವುದನ್ನು ತಪ್ಪಿಸಿ ಪಂದ್ಯದ ಸಮಯವನ್ನು ನಿಗದಿಪಡಿಸಲಾಗಿದೆ.

ಪ್ರಸಾರ ಮಾಧ್ಯಮಗಳ ಕೇಂದ್ರ
ಭಾರತದ ಜನಸಂಖ್ಯೆ ಪ್ರಸಾರ ಮಾಧ್ಯಮ ಗಳಿಗೆ ವಿಶೇಷ ಆಕರ್ಷಣೆ. 2010ರಲ್ಲಿ ದಕ್ಷಿಣ ಆಪ್ರಿಕಾದಲ್ಲಿ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿ ನಡೆದಾಗ ಅಲ್ಲಿನ ನೇರಪ್ರಸಾರದ ಸಮಯ ಭಾರತದ ವೀಕ್ಷಕರಿಗೆ ಅನುಕೂಲಕರವಾಗಿದ್ದರಿಂದ ಟಿಆರ್‌ಪಿ ಏರಿತ್ತು. ಅದೇ 2014ರಲ್ಲಿ ಬ್ರಝಿಲ್‌ನಲ್ಲಿ ವಿಶ್ವಕಪ್‌ ನಡೆದಾಗ 3.2 ಬಿಲಿಯನ್‌ ವೀಕ್ಷಕರನ್ನು ತಲುಪಿಯೂ ಏಶ್ಯದ ವೀಕ್ಷಕರ ಸಂಖ್ಯೆಯ ಶೇಕಡಾವಾರು ತಗ್ಗಿತ್ತು.

ಸ್ವಾರಸ್ಯವೆಂದರೆ, ಆಗಲೂ ಭಾರತದ ವೀಕ್ಷಕರ ಸಂಖ್ಯೆ ವೃದ್ಧಿಸಿತ್ತು. 2010ರಲ್ಲಿ 44.9 ಮಿಲಿಯನ್‌ ಇದ್ದರೆ 4 ವರ್ಷ ಕಳೆದಾಗ ಇದು 85.7 ಮಿಲಿಯನ್‌ಗೆ ಏರಿತ್ತು. ಈ ಹಂತದಲ್ಲಿ ಆತಿಥೇಯ ರಶ್ಯ ವಿಭಿನ್ನವಾಗಿ ಚಿಂತಿಸಿದೆ. ಅನುಕೂಲವಲ್ಲದ ಸಮಯದಲ್ಲಿಯೇ ವೀಕ್ಷಕರ ಸಂಖ್ಯೆ ಸರಿಸುಮಾರು ಇಮ್ಮಡಿಸಿರುವಾಗ, ಸೂಕ್ತವಾದ ಮುಹೂರ್ತವಿರಿಸಿದರೆ 100 ಮಿಲಿಯನ್‌ ವೀಕ್ಷಕರನ್ನು ದಾಟಬಹುದಲ್ಲವೇ ಎಂಬ ಲೆಕ್ಕಾಚಾರ ಹಾಕಿಕೊಂಡಿತು ಈ ಲೆಕ್ಕಾಚಾರದಲ್ಲಿ ಜೂನ್‌ 16ರಂದು ಫ್ರಾನ್ಸ್‌-ಆಸ್ಟ್ರೇಲಿಯ ಪಂದ್ಯ ಮಧ್ಯಾಹ್ನ 3.30ಕ್ಕೆ ಶುರು. ಬಹುತೇಕ ಪಂದ್ಯಗಳು ಅಬ್ಬಬ್ಟಾ ಎಂದರೂ ರಾತ್ರಿ 11.30ಕ್ಕೆ ಆರಂಭವಾಗುತ್ತವೆೆ. ಜೂನ್‌ 14ರ ಆರಂಭಿಕ ಪಂದ್ಯ 8.30ಕ್ಕೆ, ಹಾಗೇ ಜುಲೈ 15ರಂದು ಅಂತಿಮ ಪಂದ್ಯ ಕೂಡ ಇದೇ ಸಮಯಕ್ಕೆ ಆರಂಭವಾಗುತ್ತದೆ. ಭಾರತದ ಪಾಲಿಗೆ ತೀರಾ ತಡವಾಗಿ ಆರಂಭವಾಗುವ ಏಕೈಕ ಪಂದ್ಯ ಜೂನ್‌ 17ರಂದು ಮಧ್ಯರಾತ್ರಿ 12.30ಕ್ಕೆ ಕ್ರೊವೇಶಿಯಾ-ನೈಜೀರಿಯಾ ನಡುವೆ ಆಯೋಜನೆಯಾಗಿದೆ. ಮೂರೂವರೆ, ಐದೂವರೆ, ಎಂಟೂವರೆ, ಒಂಬತ್ತೂವರೆ…. ಫಿಫಾ ಪಂದ್ಯಗಳ ಈ ಸಮಯ ಭಾರತೀಯರನ್ನು ನಿದ್ದೆಗೆಡುವುದರಿಂದ ಬಚಾಯಿಸುತ್ತದೆ.

ಫಿಫಾ ಮೇಲೆ ಸೋನಿ ಪ್ರಭಾವ
ಈ ವರ್ಷದ ಪ್ರಸಾರದ ಹಕ್ಕನ್ನು ಹೊಂದಿರುವ ಸೋನಿ ಪಿಕ್ಚರ್ ನೆಟ್‌ವರ್ಕ್‌, ವೀಡಿಯೋ ಆನ್‌ ಡಿಮಾಂಡ್‌ ಸೌಲಭ್ಯದ ಸೋನಿ ಲೈವ್‌ನಲ್ಲೂ ಪಂದ್ಯಗಳನ್ನು ನೇರ ಪ್ರಸಾರ ಮಾಡುತ್ತದೆ. ಅದು ಹೆಚ್ಚು ವೀಕ್ಷಕರನ್ನು ಕಾಣಲು ಭಾರತದ ಪ್ರçಮ್‌ ಟೈಮ್‌ಗೆ ಆಟದ ವೇಳಾಪಟ್ಟಿ ನಿಗದಿಗೊಳಿಸಲು ತನ್ನ ಪ್ರಭಾವ ಬೀರಿದೆ. ಇದನ್ನು ಫಿಫಾ ಸ್ವೀಕರಿಸಿದೆ!  ನೋಡುತ್ತಲೇ ಆಟದ ಪರಿಣತಿಯನ್ನು ಪಡೆಯುವುದಕ್ಕೆ ಸಾಧ್ಯವಾಗಲಿಕ್ಕಿಲ್ಲ, ಆದರೆ ಈ ಸ್ಫೂರ್ತಿ ಫ‌ುಟಬಾಲ್‌ನಲ್ಲೂ ಭಾರತವನ್ನು ಗಾವುದ ದೂರ ಮುಂದೆ ತರಬಲ್ಲದು. ಭಾರತೀಯರ ಫ‌ುಟ್‌ಬಾಲ್‌ ಪ್ರೀತಿ ಹೆಚ್ಚಲು ಇಂಥ ಒಂದೊಂದು ನಿರ್ಧಾರಗಳೂ ಸ್ವಾಗತಾರ್ಹ!

ಮಾವೆಂಸ ಪ್ರಸಾದ್‌

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.