ಭಾರತವನ್ನು ಸೋಲಿಸಲು ವಿಶ್ವ ಇಲೆವೆನ್‌ನಿಂದ ಮಾತ್ರ ಸಾಧ್ಯ!

ತವರಿನಂಗಳದಲ್ಲಿ ಸತತ 11 ಟೆಸ್ಟ್‌ ಸರಣಿ ಗೆದ್ದ ದಾಖಲೆ ; ಪ್ರವಾಸಿಗರಿಗೆ ಭಾರತದಲ್ಲಿ ಟೆಸ್ಟ್‌ ಗೆಲ್ಲುವುದೇ ಸವಾಲು

Team Udayavani, Oct 27, 2019, 5:34 AM IST

World-XI

ಹೊಸದಿಲ್ಲಿ: ಭಾರತವೀಗ ತವರಿನಲ್ಲಿ ಸತತ 11 ಟೆಸ್ಟ್‌ ಸರಣಿ ಗೆದ್ದು ವಿಶ್ವದಾಖಲೆ ನಿರ್ಮಿಸಿರುವುದು ಇತಿಹಾಸ. ಜಿಂಬಾಬ್ವೆ, ಅಫ್ಘಾನಿಸ್ಥಾನಂಥ ಸಾಮಾನ್ಯ ತಂಡಗಳಿರಲಿ, ಬಲಿಷ್ಠ ಪಡೆಯೆಂದೇ ಗುರುತಿಸಲ್ಪಡುತ್ತಿದ್ದ ದಕ್ಷಿಣ ಆಫ್ರಿಕಾ ಕೂಡ ಮೊನ್ನೆ ವೈಟ್‌ವಾಶ್‌ ಅನು ಭವಿಸಿಕೊಂಡು ತವರಿಗೆ ಮರಳಿತು. ಭಾರತವನ್ನು ಅವರದೇ ಅಂಗಳದಲ್ಲಿ ಮಣಿಸುವುದು, ಸರಣಿ ಗೆಲ್ಲುವುದು ಸುಲಭವಲ್ಲ ಎಂಬುದು ಮತ್ತೂಮ್ಮೆ ಸಾಬೀತಾಯಿತು.

ಭಾರತ ಕೊನೆಯ ಸಲ ತವರಿನಲ್ಲಿ ಟೆಸ್ಟ್‌ ಸರಣಿ ಸೋತದ್ದು 2012-13ರಷ್ಟು ಹಿಂದೆ, ಇಂಗ್ಲೆಂಡ್‌ ವಿರುದ್ಧ. ಅನಂತರ ಆಡಿದ ಎಲ್ಲ 11 ಟೆಸ್ಟ್‌ ಸರಣಿಗಳಲ್ಲೂ ಟೀಮ್‌ ಇಂಡಿಯಾ ಜಯಭೇರಿ ಮೊಳಗಿಸಿದೆ. ಈ ಅವಧಿಯಲ್ಲಿ ಆಡಿದ 32 ಟೆಸ್ಟ್‌ ಪಂದ್ಯಗಳಲ್ಲಿ 26 ಗೆಲುವು ಕಂಡಿದೆ. 5 ಡ್ರಾ ಆಗಿದೆ. ಒಂದರಲ್ಲಷ್ಟೇ ಸೋತಿದೆ.

ಈ 26ರಲ್ಲಿ 10 ಗೆಲುವು ಇನ್ನಿಂಗ್ಸ್‌ ಅಂತರದ್ದಾಗಿದೆ. 150 ಪ್ಲಸ್‌ ರನ್‌ ಅಂತರದಲ್ಲಿ 7 ಗೆಲುವು ಸಾಧಿಸಿದೆ. 8 ಪ್ಲಸ್‌ ವಿಕೆಟ್‌ ಅಂತರದ 4 ಜಯ ಒಲಿದಿದೆ. ಇದು ತವರಿನಲ್ಲಿ ಭಾರತದ ಟೆಸ್ಟ್‌ ಪ್ರಭುತ್ವಕ್ಕೆ ಸಾಕ್ಷಿ. ಇಂಗ್ಲೆಂಡ್‌, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌, ವೆಸ್ಟ್‌ ಇಂಡೀಸ್‌, ಶ್ರೀಲಂಕಾ, ಬಾಂಗ್ಲಾದೇಶ… ಎಲ್ಲ ತಂಡಗಳೂ ಭಾರತದ ಕೈಯಲ್ಲಿ ಹೊಡೆತ ತಿಂದೇ ಹೋಗಿವೆ. ಹಾಗಾದರೆ ಭಾರತವನ್ನು ಮಣಿಸುವ ಸಾಮರ್ಥ್ಯ ಹೊಂದಿರುವ ತಂಡವಾದರೂ ಯಾವುದು? ಬಹುಶಃ ಇದಕ್ಕೆ ಉತ್ತರವಿಲ್ಲ.

ವಿಶ್ವ ಇಲೆವೆನ್‌ ಪರಿಕಲ್ಪನೆ
ವಿಶ್ವದ ಎಲ್ಲ ತಂಡಗಳಿಗೂ ಭಾರತದಲ್ಲಿ ಗೆಲುವು ಮರೀಚಿಕೆಯಾಗಿರುವ ಈ ಹೊತ್ತಿನಲ್ಲಿ “ಕ್ರಿಕೆಟ್‌ ವೆಬ್‌ಸೈಟ್‌’ ಒಂದು ವಿಭಿನ್ನ ರೀತಿಯಲ್ಲಿ ಆಲೋಚಿಸಿದೆ. ಹೊಸ ಯೋಜನೆಯೊಂದನ್ನು ರೂಪಿಸಿದೆ. ಆದರೆ ಇದು ಕೇವಲ ಕಾಲ್ಪನಿಕ. ವಿಶ್ವದ ಎಲ್ಲ ಟೆಸ್ಟ್‌ ತಂಡಗಳ ಸರ್ವಶ್ರೇಷ್ಠ ಆಟಗಾರರ ತಂಡವೊಂದನ್ನು ರಚಿಸಿ ಭಾರತದಲ್ಲಿ ಆಡಿಸಿದರಷ್ಟೇ ಅದಕ್ಕೆ ಗೆಲುವು ಒಲಿಯಬಹುದು ಎಂಬುದೊಂದು ಇಲ್ಲಿನ ಲೆಕ್ಕಾಚಾರ. ಹಾಗಾದರೆ ಈ ಆಟಗಾರರ ಪಡೆ ಹೇಗಿರಬಹುದು? ಇಲ್ಲಿ ಯಾರೆಲ್ಲ ಸ್ಥಾನ ಸಂಪಾದಿಸಬಹುದು? ಕುತೂಹಲ ಸಹಜ.

ಕ್ರಿಕೆಟಿಗರ ಇತ್ತೀಚಿನ ಫಾರ್ಮ್, ಭಾರತದಲ್ಲಿ ಆಡಿದ ಅನುಭವ, ಭಾರತೀಯ ಉಪಖಂಡದಲ್ಲಿ ಇವರ ಸಾಧನೆಯನ್ನೆಲ್ಲ ಅವಲೋಕಿಸಿ ವಿಶ್ವ ಇಲೆವೆನ್‌ ಒಂದನ್ನು ರಚಿಸಲಾಗಿದೆ.

ಇಲ್ಲಿ ಆರಂಭಿಕರಾಗಿ ಆಯ್ಕೆಯಾದವರು ಶ್ರೀಲಂಕಾದ ದಿಮುತ್‌ ಕರುಣರತ್ನೆ ಮತ್ತು ನ್ಯೂಜಿಲ್ಯಾಂಡಿನ ಟಾಮ್‌ ಲ್ಯಾಥಂ. ಇವರಲ್ಲಿ ಲ್ಯಾಥಂ ವಿಕೆಟ್‌ ಕೀಪರ್‌ ಕೂಡ ಆಗಿದ್ದಾರೆ. ಹಾಗೆಯೇ ಡೇವಿಡ್‌ ವಾರ್ನರ್‌, ಅಜರ್‌ ಅಲಿ, ತಮಿಮ್‌ ಇಕ್ಬಾಲ್‌, ಡೀನ್‌ ಎಲ್ಗರ್‌ ಇತರ ಓಪನಿಂಗ್‌ ಆಯ್ಕೆಗಳಾಗಿವೆ.

ವಿಲಿಯಮ್ಸನ್‌ ನಾಯಕ
ಮಧ್ಯಮ ಕ್ರಮಾಂಕದ ಹುರಿಯಾಳುಗಳೆಂದರೆ ಕೇನ್‌ ವಿಲಿಯಮ್ಸನ್‌, ಸ್ಟೀವನ್‌ ಸ್ಮಿತ್‌ ಮತ್ತು ಜೋ ರೂಟ್‌. ಇವರಲ್ಲಿ ವಿಲಿಯಮ್ಸನ್‌ಗೆ ನಾಯಕತ್ವ ನೀಡಲಾಗಿದೆ. ಮಿಡ್ಲ್ ಆರ್ಡರ್‌ನ ಬದಲಿ ಕ್ರಿಕೆಟಿಗರನ್ನಾಗಿ ಮುಶ್ಫಿಕರ್‌ ರಹೀಂ, ಬಾಬರ್‌ ಆಜಂ ಅವರನ್ನು ಗುರುತಿಸಲಾಗಿದೆ.

ಪರಿಪೂರ್ಣ ಆಲ್‌ರೌಂಡರ್‌ಗಳಾಗಿ ಕಣಕ್ಕಿಳಿಯಲು ಬೆನ್‌ ಸ್ಟೋಕ್ಸ್‌, ಶಕಿಬ್‌ ಅಲ್‌ ಹಸನ್‌ ಅವರಿಗಿಂತ ಉತ್ತಮ ಆಯ್ಕೆ ಇಲ್ಲ.

ಸ್ಟ್ರೈಕ್‌ ಬೌಲರ್‌ಗಳಿಗೆ ಬಹಳಷ್ಟು ಆಯ್ಕೆಗಳಿವೆ. ಆದರೆ ಪ್ಯಾಟ್‌ ಕಮಿನ್ಸ್‌ ಮತ್ತು ಜೋಫ‌Å ಆರ್ಚರ್‌ ಅವರಿಗೆ ಮೊದಲ ಆದ್ಯತೆ ನೀಡಲಾಗಿದೆ. ರೇಸ್‌ನಲ್ಲಿರುವ ಉಳಿದವರೆಂದರೆ ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಝಲ್‌ವುಡ್‌, ಕಾಗಿಸೊ ರಬಾಡ, ಜಾಸನ್‌ ಹೋಲ್ಡರ್‌.

ಭಾರತದ್ದು ಟರ್ನಿಂಗ್‌ ಟ್ರ್ಯಾಕ್‌ ಆಗಿರುವ ಕಾರಣ ಸ್ಪಿನ್ನರ್‌ಗಳ ಆಯ್ಕೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಇಲ್ಲಿ ಅವಕಾಶ ಪಡೆದವರು ನಥನ್‌ ಲಿಯೋನ್‌, ರಶೀದ್‌ ಖಾನ್‌.

ತಾಕತ್ತಿದ್ದರೆ ಈ ವಿಶ್ವ ಇಲೆವೆನ್‌ ಭಾರತದಲ್ಲಿ ಟೆಸ್ಟ್‌ ಆಡಲು ಬರಲಿ, ಅವರನ್ನೂ ಬಗ್ಗುಬಡಿ ಯುತ್ತೇವೆ ಎಂದು ಕೊಹ್ಲಿ ಟೀಮ್‌ ಸವಾಲೆಸೆದರೆ ಅಚ್ಚರಿ ಇಲ್ಲ!

ವಿಶ್ವ ಟೆಸ್ಟ್‌ ಇಲೆವೆನ್‌
ದಿಮುತ್‌ ಕರುಣರತ್ನೆ, ಟಾಮ್‌ ಲ್ಯಾಥಂ (ವಿ.ಕೀ.), ಕೇನ್‌ ವಿಲಿಯಮ್ಸನ್‌ (ನಾಯಕ), ಸ್ಟೀವನ್‌ ಸ್ಮಿತ್‌, ಜೋ ರೂಟ್‌, ಬೆನ್‌ ಸ್ಟೋಕ್ಸ್‌, ಶಕಿಬ್‌ ಅಲ್‌ ಹಸನ್‌, ಪ್ಯಾಟ್‌ ಕಮಿನ್ಸ್‌, ಜೋಫ‌Å ಆರ್ಚರ್‌, ನಥನ್‌ ಲಿಯೋನ್‌, ರಶೀದ್‌ ಖಾನ್‌.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.