ಹಿರಿಯರು, ಅನುಭವಿಗಳು, ಹೊಸ ಮುಖಗಳ ಸಮ್ಮಿಲನ ಈ ವಿಧಾನಸಭೆ
ಯಡಿಯೂರಪ್ಪ , ಈಶ್ವರಪ್ಪ ಸಹಿತ ವಿಪಕ್ಷಗಳಲ್ಲಿ ಪ್ರಮುಖರ ಅನುಪಸ್ಥಿತಿ ಮಾಜಿ ಸ್ಪೀಕರ್ಗಳೂ ಸದನದಲ್ಲಿಲ್ಲ
Team Udayavani, May 23, 2023, 8:40 AM IST
ಬೆಂಗಳೂರು: ಹಿರಿಯರು, ಅನುಭವಿಗಳು, ಹೊಸ ಮುಖಗಳ ಸಮ್ಮಿಲನವೇ 16ನೇ ವಿಧಾನ ಸಭೆಯ ವಿಶೇಷತೆಗಳಲ್ಲಿ ಒಂದು.
ಚುನಾವಣ ಫಲಿತಾಂಶ ಬಂದು ಒಂಬತ್ತು ದಿನಗಳ ಬಳಿಕ ಸೋಮವಾರ ಮೊದಲ ಕಲಾಪ ಸಮಾವೇಶಗೊಂಡಿದ್ದು, ಮೊದಲ ದಿನ 182 ಮಂದಿ ಶಾಸಕರು ಪ್ರಮಾಣ ಸ್ವೀಕರಿಸಿದರು. ಶಾಸಕರು ಭಗವಂತ, ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಬಹುದು. ಆದರೆ ಕೆಲವರು ವ್ಯಕ್ತಿಗಳು, ಮನೆ ದೇವರು, ಊರ ದೇವರು, ಕ್ಷೇತ್ರದ ಜನತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆ ಆಕ್ಷೇಪಿಸಿದರು.
ಸಿಎಂ-ಡಿಸಿಎಂ ಸೇರಿ ನೂತನ ಶಾಸಕರ ಪ್ರಮಾಣ
ಮುಖ್ಯಮಂತ್ರಿ ಸಿದ್ದರಾಮಯ್ಯ ದೇವರ ಹೆಸರಿ ನಲ್ಲಿ ಪ್ರಮಾಣ ಸ್ವೀಕರಿಸಿದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ದೇವರ ಸಮಾನರಾದ ಗಂಗಾಧರ ಅಜ್ಜಯ್ಯನವರ ಹೆಸರಿನಲ್ಲಿ ಪ್ರಮಾಣ ಸ್ವೀಕಾರ ಮಾಡಿದರು. ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಗೈರಾಗಿದ್ದರು.
ಪ್ರಮುಖರೇ ಇಲ್ಲ
ವಿಪಕ್ಷ ಸಾಲಿನಲ್ಲಿ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್. ಕೆ.ಎಸ್. ಈಶ್ವರಪ್ಪ, ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಮುರುಗೇಶ್ ನಿರಾಣಿ, ಸೋಮಣ್ಣ ಅವರಂತಹ ಘಟಾನುಘಟಿಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಅತಿ ಹಿರಿಯ, ಕಿರಿಯ ಶಾಸಕರು
ಸದನದ ಅತ್ಯಂತ ಹಿರಿಯ ಸದಸ್ಯ 93 ವರ್ಷದ ಶಾಮನೂರು ಶಿವಶಂಕರಪ್ಪ ಹಾಗೂ ಕಿರಿಯ ಶಾಸಕ ನಂಜನಗೂಡು ಕ್ಷೇತ್ರದ 28 ವರ್ಷದ ದರ್ಶನ್ ಧ್ರುವನಾರಾಯಣ.
ಸ್ಪೀಕರ್ ಆಗಿದ್ದವರೂ ಇಲ್ಲ
ಸ್ಪೀಕರ್ ಆಗಿದ್ದ ಒಬ್ಬರೂ ಈ ಬಾರಿ ಪುನರಾಯ್ಕೆಯಾಗಿಲ್ಲ. ರಮೇಶ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಜಗದೀಶ್ ಶೆಟ್ಟರ್, ಕೆ.ಜೆ.ಬೋಪಯ್ಯ ಅವರು ಈ ಬಾರಿ ಸದನದಲ್ಲಿಲ್ಲ.
ಮಾಜಿ ಸಿಎಂಗಳ ಪುತ್ರರಿದ್ದಾರೆ
ಹೊಸ ವಿಧಾನಸಭೆಯಲ್ಲಿ ಏಳು ಮಂದಿ ಮಾಜಿ ಮುಖ್ಯಮಂತ್ರಿಗಳ ಪುತ್ರರು ಶಾಸಕರಾಗಿದ್ದಾರೆ. ಮಾಜಿ ಸಿಎಂ ದೇವೇ ಗೌಡರ ಪುತ್ರರಾದ ಕುಮಾರಸ್ವಾಮಿ, ರೇವಣ್ಣ, ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪನವರ ಪುತ್ರ ವಿಜಯೇಂದ್ರ, ಎಸ್.ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ, ಆರ್.ಗುಂಡೂರಾವ್ ಪುತ್ರ ದಿನೇಶ್ ಗುಂಡುರಾವ್, ಧರಂ ಸಿಂಗ್ ಪುತ್ರ ಅಜಯ ಸಿಂಗ್ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
Davanagere; ಮೋದಿ ಯಾಕೆ ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲ್ಲ: ಪ್ರಿಯಾಂಕಾ ಗಾಂಧಿ
H.D. Revanna ಬಂಧಿಸಿದ ಎಸ್ ಐಟಿ; ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್
Prajwal R case: ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿಗೆ SIT ಮನವಿ: ಏನಿದು?
Pendrive; ಪ್ರಜ್ವಲ್ ದೌರ್ಜನ್ಯ ಮಾಡುವಾಗ ಅಪ್ಪ,ಅಮ್ಮ ಕತ್ತೆ ಕಾಯುತ್ತಿದ್ದರೆ..: ಶಿವರಾಮೇಗೌಡ
MUST WATCH
ಹೊಸ ಸೇರ್ಪಡೆ
Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು
H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ
Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ