ಕಾವೇರಿ ಹೋರಾಟಗಾರರಿಗೆ ಮತ್ತೆ ಕಾನೂನು ಸಂಕಷ್ಟ
Team Udayavani, May 18, 2017, 10:57 AM IST
ಮಂಡ್ಯ: ಶತಮಾನಗಳಿಂದ ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಿದ್ದರೂ ನ್ಯಾಯ ಸಿಗಲಿಲ್ಲ. ಕಾವೇರಿ ನೀರನ್ನೂ ಉಳಿಸಿಕೊಳ್ಳಲಾಗಲಿಲ್ಲ. ಜೀವ ಜಲಕ್ಕಾಗಿ ಚಳವಳಿ ನಡೆಸುತ್ತಲೇ ಬಂದಿರುವ ಹೋರಾಟಗಾರರಿಗೆ ಕಾನೂನು ಹೋರಾಟದಿಂದ ಮುಕ್ತಿ ದೊರಕಿಲ್ಲ. ಇದರ ನಡುವೆಯೇ ಚಳವಳಿಗಾರರಿಗೆ ಮತ್ತೂಂದು ಕಾನೂನು ಸಂಕಷ್ಟ ಎದುರಾಗಿದೆ.
2015-16, 2016 -17ನೇ ಸಾಲಿನಲ್ಲಿ ಸತತ ಬರಗಾಲದಿಂದ ಕಂಗೆಟ್ಟ ಸಂಕಷ್ಟ ಪರಿಸ್ಥಿತಿಯಲ್ಲಿ ಕಾವೇರಿ ನೀರನ್ನು ಬಿಟ್ಟ ಸರ್ಕಾರದ ಧೋರಣೆ ಖಂಡಿಸಿ ಬೀದಿಗಿಳಿದು ಹೋರಾಟ ನಡೆಸಿದ ಕಾವೇರಿ ಹಾಗೂ ಕನ್ನಡ ಪರ ಸಂಘಟನೆಗಳ ಹೋರಾಟಗಾರರ ವಿರುದ್ಧ ಹೂಡಲಾಗಿರುವ ಮೊಕದ್ದಮೆಗಳಿಗೆ ಸರ್ಕಾರವೇ ಮರುಜೀವ ಕೊಡುತ್ತಿದೆ. ಕಾವೇರಿ ಹೋರಾಟಗಾರರ ವಿರುದ್ಧ 2012ಕ್ಕೂ ಮೊದಲು ಇದ್ದ ಎಲ್ಲ ಮೊಕದ್ದಮೆಗಳನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಆದರೆ, 2012ರ ನಂತರದ ಕಾವೇರಿ ಪ್ರತಿಭಟನೆಗಳ ಪ್ರಕರಣಗಳಿಗೆ ಜೀವ ಕೊಡುವುದರೊಂದಿಗೆ ಹೋರಾಟಗಾರರನ್ನು
ಬಂಧಿಸುವ ಬಗ್ಗೆ ಚಿಂತನೆಗಳು ಸರ್ಕಾರದ ವಲಯಗಳಲ್ಲಿ ಆರಂಭವಾಗಿವೆ.
ಪಾಂಡವಪುರದಲ್ಲಿ ಹೆಚ್ಚು ಪ್ರಕರಣ: ಜಿಲ್ಲೆಯಲ್ಲಿ 2015 ರಿಂದ ಇಲ್ಲಿಯವರೆಗೆ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡ 300 ಮಂದಿ ವಿರುದ್ಧ ಒಟ್ಟು 60 ಪ್ರಕರಣಗಳನ್ನು ದಾಖಲಿಸಲಾಗಿದೆ. ಪಾಂಡವಪುರದಲ್ಲಿ ಅತಿ ಹೆಚ್ಚು ಪ್ರಕರಣಗಳು
ದಾಖಲಾಗಿವೆ. 60 ಪ್ರಕರಣಗಳಿಗೆ ಈಗಾಗಲೇ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರಾಗದಿರುವ ಹೋರಾಟಗಾರರಿಗೆ ವಾರೆಂಟ್ ಜಾರಿಗೊಳಿಸಲಾಗಿದೆ.
ಹೋರಾಟಗಾರರು ರೌಡಿಶೀಟರ್ ಪಟ್ಟಿಗೆ?:
ಕಾವೇರಿ ಗಲಾಟೆ ವೇಳೆಯಲ್ಲಿ ಪಾಂಡವಪುರದಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ಪಾಲ್ಗೊಂಡಿದ್ದರೆಂದು ಹೇಳಲಾದ ಕೆಲವರ ವಿರುದ್ಧ ರೌಡಿಶೀಟರ್ ಎಂದು ಗುರುತಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ವ್ಯಕ್ತಿಗಳನ್ನು ಬುಧವಾರ ಪಾಂಡವಪುರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಮಾಡಿ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಈ ನಡುವೆ ಸರ್ಕಾರ 2012ರ ನಂತರ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡ ಎಲ್ಲ ಹೋರಾಟ ಗಾರರ
ವಿರುದ್ಧ ಹೂಡಲಾದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಜಿಲ್ಲಾ ಪೊಲೀಸರಿಂದ ಮಾಹಿತಿ ಪಡೆದು ಕೊಂಡಿದೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ರೈತರ ಮೇಲಿನ ಪ್ರಕರಣಗಳು ಈಗಲೂ ಮುಂದುವರಿದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್