ಕರ್ನಾಟಕದ ಇಬ್ಬರಿಗೆ ಸಿಗಲಿದೆ ಸ್ವಾಮಿತ್ವ ದಾಖಲೆ
ಶೇ.40 ದೇಶದ ಒಟ್ಟು ಕೋರ್ಟ್ ಕೇಸುಗಳ ಪೈಕಿ ಭೂವ್ಯಾಜ್ಯದ ಪಾಲು
Team Udayavani, Oct 9, 2020, 6:12 AM IST
ಹೊಸದಿಲ್ಲಿ: ಕರ್ನಾಟಕದ ಇಬ್ಬರು ಸೇರಿದಂತೆ ದೇಶದ 1.32 ಲಕ್ಷ ಮಂದಿ ಭೂಮಾಲಕರು ಜಮೀನಿಗೆ ಆಧಾರ್ ಮಾದರಿಯ ಮಾಲಕತ್ವ ದಾಖಲೆಗಳನ್ನು ಖುದ್ದು ನರೇಂದ್ರ ಮೋದಿಯವರಿಂದಲೇ ರವಿವಾರ ಪಡೆಯಲಿದ್ದಾರೆ. ಮೊದಲ ಬಾರಿಗೆ ದೇಶದ 763 ಗ್ರಾಮಗಳಲ್ಲಿ ಡ್ರೋನ್ ಆಧಾರಿತ ಭೂಮಾಪನ ಪರೀಕ್ಷೆ ಪೂರ್ತಿಗೊಳಿಸಿ ಈ ಮಾಲಕತ್ವ ದಾಖಲೆಗಳನ್ನು ಸಿದ್ಧಪಡಿಸಲಾಗಿದೆ. . “ಸ್ವಾಮಿತ್ವ’ ಎಂಬ ಹೆಸರಿನ ಈ ಯೋಜನೆಗೆ ಪ್ರಧಾನಿಯವರು ಆ.24ರಂದು ಚಾಲನೆ ನೀಡಿದ್ದರು.
ಹರಿಯಾಣದಿಂದ 221, ಕರ್ನಾಟಕದಿಂದ ಇಬ್ಬರು, ಮಹಾರಾಷ್ಟ್ರದಿಂದ 100, ಮಧ್ಯ ಪ್ರದೇಶದಿಂದ 44, ಉತ್ತರ ಪ್ರದೇಶದಿಂದ 346, ಉತ್ತರಾಖಂಡದ 50 ಮಂದಿ ಜಮೀನು ಮಾಲಕರು ಪ್ರಧಾನಿಗಳಿಂದ “ಸ್ವಾಮಿತ್ವ’ (ಸರ್ವೆ ಆಫ್ ವಿಲೇಜಸ್ ಆ್ಯಂಡ್ ಮ್ಯಾಪಿಂಗ್ ವಿದ್ ಇಂಪ್ರೂವೈಸ್ಡ್ ಟೆಕ್ನಾಲಜಿ ಇನ್ ವಿಲೇಜ್ ಏರಿಯಾಸ್) ಯೋಜನೆಯಡಿ ಡಿಜಿಟಲ್ ಆಸ್ತಿ ದಾಖಲೆಗಳನ್ನು ಸ್ವೀಕರಿಸಲಿದ್ದಾರೆ. 2024ರ ಒಳಗಾಗಿ ದೇಶದ 6.40 ಗ್ರಾಮಗಳಲ್ಲಿ ಈ ಯೋಜನೆ ಜಾರಿಗೆ ಬರಬೇಕು ಎಂದು ಕೇಂದ್ರ ಸರಕಾರ ಗುರಿ ಹಾಕಿಕೊಂಡಿದೆ.
ಹೇಗೆ ನಡೆಸಲಾಗುತ್ತದೆ?
ಸ್ಥಳೀಯರ ಉಪಸ್ಥಿತಿಯಲ್ಲಿಯೇ ಕಂದಾಯ ಇಲಾಖೆಯ ಸ್ಥಳೀಯ ಪ್ರತಿ ನಿಧಿ ಆಯಾ ಜಮೀನಿನ ಮಾಲಕತ್ವದ ಬಗ್ಗೆ ಮಾಹಿತಿ ಪಡೆಯುತ್ತಾರೆ.
ಏನಿದು ಯೋಜನೆ?
ಗ್ರಾಮೀಣ ಪ್ರದೇಶದಲ್ಲಿ ಸೂಕ್ತ ರೀತಿ ಯಲ್ಲಿ ಜಮೀನಿನ ದಾಖಲೆಗಳನ್ನು ಇಡಲಾಗುತ್ತಿಲ್ಲ. ಹೀಗಾಗಿ ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ಇರಿಸಲು ಸಹಕಾರಿ.
ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳ ಪ್ರದೇಶಗಳಲ್ಲಿ ಸೂಕ್ತ ರೀತಿ ಜಮೀನು ಅಳತೆ ಮಾಡಿ, ಅದರ ಮಾಲಕತ್ವ ದೃಢೀಕರಣಕ್ಕೆ ಇದು ಸಹಕಾರಿ.
ದೇಶದ 6.4 ಲಕ್ಷ ಗ್ರಾಮಗಳ ಹೆಚ್ಚು ಜನಸಂಖ್ಯೆ ಇರುವ (ಅಬಾಡಿ ಪ್ರದೇಶ) ಜಮೀನಿನ ಸಮೀಕ್ಷೆ
ಅನುಕೂಲತೆಗಳೇನು?
ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿ ಜಮೀನಿನ ಅಳತೆ
ಗ್ರಾಮೀಣ ಪ್ರದೇಶದಲ್ಲಿರುವ ಭೂಮಾಲಕರಿಗೆ ತಮ್ಮ ಜಮೀನು, ಮನೆಗಳ ಮೂಲಕ ಅಗತ್ಯ ಬಿದ್ದರೆ ಸಾಲ ಪಡೆಯಲೂ ಸಹಕಾರಿ.
ಭೂವ್ಯಾಜ್ಯಗಳ ಪ್ರಮಾಣ ತಗ್ಗಿಸಲು ಅನುಕೂಲ.
ಸರಕಾರದ ಬೊಕ್ಕಸಕ್ಕೆ ಸರಿಯಾದ ರೀತಿ ಭೂಕಂದಾಯ ಪಡೆಯಲು ಅನುಕೂಲ
ಜಮೀನು ಒತ್ತುವರಿ/ಭೂಗಳ್ಳತನ ತಪ್ಪಿಸಲು ಸಾಧ್ಯ.
ಗ್ರಾಮೀಣ ಭಾಗದ ಬಡವರ ಆರ್ಥಿಕ ಸ್ಥಿತಿ ಸುಧಾರಿಸಲು ಇದರಿಂದ ನೆರವು.
ಜಾರಿ ಸಂಸ್ಥೆ
ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದಿಂದ ಅದನ್ನು ಜಾರಿ ಮಾಡುತ್ತಿದೆ. ವಿವಿಧ ರಾಜ್ಯಗಳ ಕಂದಾಯ ಖಾತೆಗಳು, ಸರ್ವೇ ಆಫ್ ಇಂಡಿಯಾ ನೆರವು ನೀಡುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ
MUST WATCH
ಹೊಸ ಸೇರ್ಪಡೆ
ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ರಜಿನಿಕಾಂತ್ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ
Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ