ತೊಗರಿ ಸಾಗಣೆಯಲ್ಲಿ ಇಳಿಮುಖ
Team Udayavani, Sep 3, 2017, 12:35 PM IST
ಕಲಬುರಗಿ: ದರ ಕುಸಿತದಿಂದ ನಲುಗಿದ ತೊಗರಿ ಕಣಜಕ್ಕೆ ಜಿಎಸ್ಟಿ ಮತ್ತೂಂದು ನಿಟ್ಟಿನಲ್ಲಿ ಹೊಡೆತ ನೀಡಲಾರಂಭಿಸಿದೆ. ತೊಗರಿ ಮಾರಾಟ-ಖರೀದಿ ಹಾಗೂ ಬೇಳೆ ಮಾಡುವ ಪ್ರಕ್ರಿಯೆಗೆ ಜಿಎಸ್ಟಿ ಇಲ್ಲದಿದ್ದರೂ ಬೇಳೆ ಸಾಗಾಣಿಕೆಗೆ ತೆರಿಗೆ ಅನ್ವಯಿಸುತ್ತಿರುವುದು ಸಾಗಾಣಿಕೆ ಮೇಲೆ ಪರಿಣಾಮ ಬೀರಿದೆ.
ಕಲಬುರಗಿಯ ತೊಗರಿ ಬೇಳೆ ಇಡೀ ದೇಶದಲ್ಲಿಯೇ ಅತ್ಯುತ್ತಮ ಎಂಬುದಾಗಿ ಹೆಸರು ಪಡೆದಿದೆ. ಇಲ್ಲಿಯ ತೊಗರಿ ಬೇಳೆ ತಮಿಳುನಾಡು, ಪುದುಚೇರಿಯಲ್ಲದೆ ರಾಜ್ಯದ ದಕ್ಷಿಣ ಕರ್ನಾಟಕ ಭಾಗಕ್ಕೂ ಸರಬರಾಜಾಗುತ್ತದೆ. ಆದರೆ ಈ ಸಾಗಾಣಿಕೆ ಮೇಲೆ ಶೇ.5ರಷ್ಟು ಜಿಎಸ್ಟಿ ವಿಧಿಸಿರುವುದು ಸಾಗಾಣಿಕೆ ಇಳಿಮುಖವಾಗಲು ಕಾರಣವಾಗಿದೆ. ಕಳೆದ ವರ್ಷ 2016ರ ಏಪ್ರಿಲ್ದಿಂದ ಆಗಸ್ಟ್ ವರೆಗೆ ಕಲಬುರಗಿಯಿಂದಲೇ 4.73 ಲಕ್ಷ ಕ್ವಿಂಟಲ್ ತೊಗರಿ ಬೇಳೆ ಸರಬರಾಜು ಆಗಿತ್ತು. ಪ್ರಸಕ್ತ 3.64 ಕ್ವಿಂಟಲ್ ಮಾತ್ರ ಸರಬರಾಜು ಆಗಿದೆ.
ಇದಕ್ಕೆ ಸಾಗಾಣಿಕೆ ಮೇಲೆ ಶೇ.5ರಷ್ಟು ತೆರಿಗೆ ವಿಧಿಸಿರುವುದೇ ಕಾರಣ ಎಂದು ದ್ವಿದಳ ಧಾನ್ಯ ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಜಿಎಸ್ಟಿ ಜಾರಿ ಮುಂಚೆ ಬೆಂಗಳೂರಿಗೆ ಒಂದು ಕ್ವಿಂಟಲ್ ತೊಗರಿ ಬೇಳೆಗೆ 140 ರೂ.ದಿಂದ 150 ರೂ. ಸಾಗಾಣಿಕೆ ವೆಚ್ಚವಾಗುತ್ತಿತ್ತು. ಜಿಎಸ್ಟಿ ಜಾರಿ ಆದಾಗಿನಿಂದ 180 ರಿಂದ 190ರೂ. ಆಗುತ್ತಿದೆ. ಅಂದರೆ ಒಂದು ಲಾರಿಯಲ್ಲಿ ಬೇಳೆ ಸರಬರಾಜು ಆಗಿದ್ದರೆ ಈ ಮುಂಚೆ 18,000 ರೂ.ಸಾಗಾಣಿಕೆ ವೆಚ್ಚವಾಗುತ್ತಿತ್ತು. ಈಗ ಶೇ.5ರಷ್ಟು ಜಿಎಸ್ಟಿಯಿಂದ ಒಂದು ಲಾರಿ ಸಾಗಾಣಿಕೆಗೆ 1000ರೂ.ದಿಂದ 1100 ಹೆಚ್ಚಳವಾಗುತ್ತಿದೆ.
ದರ ಕುಸಿತ ಹಾಗೂ ಇಳುವರಿ ಕುಂಠಿತ ನಡುವೆ 2016ರ ಏಪ್ರಿಲ್ 1ರಿಂದ 2017ರ ಮಾರ್ಚ್ 31ರವರೆಗೆ 9.68 ಲಕ್ಷ ಕ್ವಿಂಟಲ್ ತೊಗರಿ ಬೇಳೆ ಕಲಬುರಗಿಯಿಂದ ಸಾಗಾಣಿಕೆಯಾಗಿತ್ತು. ಅದರ ಹಿಂದಿನ ವರ್ಷಗಳಲ್ಲಿ 15ರಿಂದ 20 ಲಕ್ಷ ಕ್ವಿಂಟಲ್ ವರೆಗೂ ಸಾಗಾಣಿಕೆಯಾಗಿರುವ ದಾಖಲೆಯಿದೆ.
ಬ್ರಾÂಂಡೆಡ್ ತೊಗರಿ ಬೇಳೆ ಹಿಂತೆಗೆತ:
ಪ್ಯಾಕ್ಡ್ ಹಾಗೂ ನೋಂದಾಯಿತ ತೊಗರಿ ಬೇಳೆ ಮೇಲೆ ಶೇ.5ರಷ್ಟು ಜಿಎಸ್ಟಿ ವಿಧಿಸಿದ್ದರಿಂದ ತೆರಿಗೆಯಿಂದ ಪಾರಾಗಲು ವ್ಯಾಪಾರಿಗಳು ತಮ್ಮ ನೋಂದಣಿಯನ್ನೇ ವಾಪಸ್ ಪಡೆದಿದ್ದಾರೆ. ಕಲಬುರಗಿಯ 250 ದಾಲ್ಮಿಲ್ಗಳಲ್ಲಿ 6 ವ್ಯಾಪಾರಿಗಳು ಪ್ಯಾಕ್ಡ್ ಹಾಗೂ ನೋಂದಾಯಿತ ತೊಗರಿ ಬ್ರಾÂಂಡೆಡ್ ಹೊಂದಿದ್ದರು. ಈ ಆರು ವ್ಯಾಪಾರಿಗಳು ನೋಂದಣಿ ಸಂಖ್ಯೆಯನ್ನು ವಾಪಸ್ಸು ಪಡೆದಿದ್ದಾರೆ.
ಹೀಗಾಗಿ ಬ್ರಾÂಂಡೆಡ್ ನೋಂದಾಯಿತ ತೊಗರಿ ಮಾರಾಟ ನಿಂತು ಹೋಗಿದೆ. ಶೇ.5ರಷ್ಟು ಜಿಎಸ್ಟಿಯಿಂದ ಪಾರಾಗಲು ತಮ್ಮ ನೋಂದಣಿಯನ್ನೇ ವಾಪಸ್ ಪಡೆದಿರುವುದಾಗಿ ವ್ಯಾಪಾರಿ ಚಂದ್ರಶೇಖರ ನಡಾರ್ ತಿಳಿಸಿದ್ದು, ಇವರ ಡೋವೋ ಪ್ಯಾಕ್ಡ್ ನೋಂದಾಯಿತ ತೊಗರಿ ಬೇಳೆ ಮಾರಾಟ ನಿಂತು ಹೋಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ
Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ
MUST WATCH
ಹೊಸ ಸೇರ್ಪಡೆ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
IPL; ಬೌಲರ್ಗಳನ್ನು ಕಾಪಾಡಿ: ಅಶ್ವಿನ್ ವಿನಂತಿ!
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ