ದೈವಾರಾಧನೆ ಜನರ ನಂಬಿಕೆ; ಹಗುರ ಮಾತು ಬೇಡ : ಸಚಿವೆ ಶೋಭಾ ಕರಂದ್ಲಾಜೆ
Team Udayavani, Oct 22, 2022, 2:11 PM IST
ಹುಬ್ಬಳ್ಳಿ: ಭೂತಾರಾಧನೆ, ದೈವಾರಾಧನೆ ಕರಾವಳಿ ಜನರ ನಂಬಿಕೆ, ಪದ್ಧತಿಯಾಗಿದ್ದು ನಮ್ಮ ಭಾವನೆ, ಪದ್ಧತಿ ಬಗ್ಗೆ ಯಾರು ಹಗುರವಾಗಿ ಮಾತನಾಡಬಾರದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂತಾರ’ ಸಿನೆಮಾ ಬಗ್ಗೆ ಏನಾದರೂ ವಿಮರ್ಶೆ ಮಾಡಲಿ ಆದರೆ, ಕರಾವಳಿ, ಕೇರಳದಲ್ಲಿ ಆಚರಣೆ ಮಾಡುವ ಭೂತಾರಾಧನೆ, ದೈವಾರಾಧನೆ ಪ್ರಶ್ನಿಸುವ, ಹಗುರವಾಗಿ ಮಾತನಡುವುದು ಸರಿಯಲ್ಲ ಎಂದರು.
ರಾಹುಲ್ ಗಾಂಧಿ ಅವರ ‘ಭಾರತ ಜೋಡೋ’ ಯಾತ್ರೆ ದೇಶದಲ್ಲಿ ಅಲ್ಲ, ಕಾಂಗ್ರೆಸ್ ಕಾರಣದಿಂದಾಗಿ ದೇಶದ ಭಾಗ ಪಾಕಿಸ್ಥಾನ, ಚೀನಾದ ಪಾಲಾಗಿದೆಯೋ ಅಲ್ಲಿ ಹೋಗಿ ಯಾತ್ರೆ ಮಾಡಲಿ. ದೇಶ ವಿಭಜನೆಗೂ ಕಾಂಗ್ರೆಸ್ ನೀತಿ ಕಾರಣ ಎಂದು ಆರೋಪಿಸಿದರು.
ಚಿತ್ರ ನಟ ಚೇತನ್ ಅಹಿಂಸಾ ‘ದೈವಾರಾಧನೆ ಹಿಂದೂ ಸಂಸ್ಕೃತಿಯ ಭಾಗವಲ್ಲ’ ಎಂದು ಹೇಳಿಕೆ ನೀಡಿ ಭಾರಿ ಚರ್ಚೆಗೆ ಅವಕಾಶ ಮಾಡಿದ್ದರು. ಈ ಬಗ್ಗೆ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ಈ ಕುರಿತು ಸಚಿವೆ ಶೋಭಾ ಪ್ರತಿಕ್ರಿಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್