ಅಂಗನವಾಡಿ ಸಿಬಂದಿಗೆ ಸಮವಸ್ತ್ರ ಬಣ್ಣ ನಿಗದಿ
Team Udayavani, Sep 20, 2022, 6:35 AM IST
ದಾವಣಗೆರೆ: ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಮುಂದಿನ ವರ್ಷದಿಂದ ಸಮವಸ್ತ್ರ ಧಾರಣೆಗೆ ಪೂರಕವಾಗಿ ರಾಜ್ಯ ಸರಕಾರ ಸೀರೆಯ ಬಣ್ಣ ನಿಗದಿಗೊಳಿಸಿದೆ.
ಮುಂದಿನ ಆರ್ಥಿಕ ವರ್ಷದಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಯರು ಮೆಂತೆಕಾಳಿನ (ಗೋಲ್ಡನ್ ಯೆಲ್ಲೊ) ಬಣ್ಣದ ಸಮವಸ್ತ್ರದ ಸೀರೆ ಉಡಲಿದ್ದಾರೆ.
ಅಂಗನವಾಡಿ ಸಹಾಯಕಿಯರು ಕೆಂದುಗಂಪು (ಮೆರೂನ್) ಬಣ್ಣದ ಸೀರೆ ಧರಿಸುವರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಂಧಿಸಿ ಆಕಾಶನೀಲಿ ಬಣ್ಣದ ಸಮವಸ್ತ್ರ ಖರೀದಿ ಪ್ರಕ್ರಿಯೆ ಆರಂಭಿಸಿದಲ್ಲಿ ಅವರು ಈ ಆ ಬಣ್ಣದ ಸೀರೆಯನ್ನೇ ಧರಿಸಬೇಕು. ಇನ್ನೂ ಖರೀದಿ ಪ್ರಕ್ರಿಯೆ ನಡೆಯದಿದ್ದಲ್ಲಿ ಮೆಂತೆ (ಗೋಲ್ಡನ್ ಯಲ್ಲೋ) ಬಣ್ಣದ ಸಮವಸ್ತ್ರದ ಸೀರೆ ಖರೀದಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ನಗದು ವರ್ಗಾವಣೆ
ನಿಗದಿಗೊಳಿಸಿದ ಸಮವಸ್ತ್ರದ ಎರಡು ಸೀರೆಗಳ ಖರೀದಿಗೆ 800 ರೂ.ಗಳನ್ನು ಅವರವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಇಲಾಖೆಯಿಂದಲೇ ಸೀರೆಗಳನ್ನು ವಿತರಿಸಲಾಗುತ್ತಿತ್ತು.
ಸಂಘಟನೆಗಳೊಂದಿಗೆ ಚರ್ಚೆ
ಇಲಾಖೆ ವಿತರಿಸುತ್ತಿರುವ ಸೀರೆ ಗುಣಮಟ್ಟ ಚೆನ್ನಾಗಿಲ್ಲ. ಆಯ್ಕೆ ಮಾಡಿದ ಬಣ್ಣವೂ ಎಲ್ಲರಿಗೂ ಒಪ್ಪುವಂತಿಲ್ಲ. ಜಾಹೀರಾತು ಮುದ್ರಿಸಿದ ಸೀರೆ ಧರಿಸಲು ಕಾರ್ಯಕರ್ತೆಯರಿಗೆ ಮುಜುಗರವಾಗುತ್ತದೆ. ಆದ್ದರಿಂದ ಸೀರೆಗಳಲ್ಲಿ ಜಾಹೀರಾತು ಮುದ್ರಿಸಬಾರದು. ಸಮವಸ್ತ್ರದ ಸೀರೆಗಾಗಿ ಎಲ್ಲರಿಗೂ ಒಪ್ಪುವ ಬಣ್ಣ ಆಯ್ಕೆ ಮಾಡಬೇಕು. ಇಲಾಖೆಯಿಂದ ಸೀರೆ ವಿತರಿಸದೆ ಹಣವನ್ನೇ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘಟನೆಗಳು ಹೋರಾಟ ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಸಂಘಟನೆ ಪದಾಧಿಕಾರಿಗಳೊಂದಿಗೆ ಎರಡು ಸುತ್ತಿನ ಸಭೆ ನಡೆಸಿದ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮುಂದಿನ ವರ್ಷದಿಂದ ರಾಜ್ಯಾದ್ಯಂತ ಏಕರೂಪ ಸಮವಸ್ತ್ರ ಜಾರಿಗೊಳಿಸಲು ಇಲಾಖೆ ಈ ವರ್ಷವೇ ಬಣ್ಣ ನಿಗದಿಗೊಳಿಸಿ ಖರೀದಿಗೆ ಹಣವನ್ನೂ ಅವರವರ ಖಾತೆಗೆ ಹಾಕಲಾಗಿದೆ.
– ವಾಸಂತಿ ಉಪ್ಪಾರ್,
ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದಾವಣಗೆರೆ
– ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ