ಮೇ 19ರಿಂದ ಮೂರು ದಿನ ಕಾಲ ಧೃತಿ ಉತ್ಸವ; ವಿವಿಧ ತಿನಿಸು, ಉಡುಪು, ಕಲಾಕೃತಿಗಳ ಮಾರಾಟ


Team Udayavani, May 12, 2023, 3:14 PM IST

ಮೇ 19ರಿಂದ ಮೂರು ದಿನ ಕಾಲ ಧೃತಿ ಉತ್ಸವ; ವಿವಿಧ ತಿನಿಸು, ಉಡುಪು, ಕಲಾಕೃತಿಗಳ ಮಾರಾಟ

ಬೆಂಗಳೂರು: ಪ್ರಾದೇಶಿಕ ಸೊಗಡನ್ನು ಪ್ರತಿಬಿಂಬಿಸುವ ಉಪ್ಪಿನ ಕಾಯಿ, ಹಪ್ಪಳ, ಸಂಡಿಗೆ, ಚಟ್ನಿಪುಡಿ, ಕೇಕ್‌ ಸೇರಿದಂತೆ ವಿವಿಧ ಆಹಾರ ಪದಾರ್ಥಗಳು, ನೇಯ್ಗೆ ಸೀರೆ ಉಡುಪುಗಳು, ಕಲಾಕೃತಿಗಳು, ಪೇಂಟಿಂಗ್‌ ಹೀಗೆ ವಿವಿಧ ಗೃಹ ಅಲಂಕಾರಿಕ ವಸ್ತುಗಳು ಒಂದೇ ಸೂರಿನಡಿ ಸಿಗಲಿವೆ.

ಹೌದು! ಅದು ಎಲ್ಲಿ ಅಂತೀರಾ, ಧೃತಿ ಮಹಿಳಾ ಮಾರುಕಟ್ಟೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಸಿಗಲಿವೆ. ಆನ್‌ಲೈನ್‌ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ, ಇದೀಗ ಮೇ 19, 20 ಹಾಗೂ 21ರಂದು ಮೂರು ದಿನಗಳ ಕಾಲ ವಿವಿ ಪುರಂನ ಬಿಐಟಿ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿರುವ ಮೂರನೇ ವಾರ್ಷಿಕ “ಧೃತಿ ಉತ್ಸವ’ ಪ್ರಯುಕ್ತ ಆಫ್
ಲೈನ್‌ ಮಾರಾಟ ಲಭ್ಯವಿರಲಿದೆ.

ಏನಿದು ಧೃತಿ ಮಹಿಳಾ ಮಾರುಕಟ್ಟೆ?: ಕಳೆದ ಎರಡು ವರ್ಷಗಳ ಹಿಂದೆ ಇಡೀ ಜಗತ್ತೇ ಒಮ್ಮೆ ತಿರುಗಿನೋಡುವಂತೆ “ಕೋವಿಡ್‌-19’ಗೆ ಅನೇಕರು ಬಲಿಯಾದರು. ಇನ್ನೂ ಕೆಲವು ಕೆಲಸ ಕಳೆದುಕೊಂಡು
ನಿರುದ್ಯೋಗಿಗಳಾದರು. ಈ ಸಮಯದಲ್ಲಿ ಮಹಿಳಾ ಉದ್ಯಮಿ ಅಪರ್ಣಾ ರಾವ್‌ ಅವರು ಒಂದಿಷ್ಟು ಮಹಿಳೆಯರನ್ನು ಒಗ್ಗೂಡಿಸಿ ಅವರನ್ನು ಸ್ವಾವಲಂಬಿಗಳನ್ನಾಗಿಸಲು 2020ರ ಮೇ 25ರಂದು ಜಾಲತಾಣ ವೇದಿಕೆಯ ಮೂಲಕ ಮಹಿಳಾ ಗುಂಪನ್ನು ಕಟ್ಟಿದರು. ಈ ಗುಂಪಿಗೆ ರಾಜ್ಯಾದ್ಯಂತ ನೂರಾರು ಮಹಿಳೆಯರು ಸೇರಿಕೊಂಡು ಪ್ರಸ್ತುತ 48 ಸಾವಿರಕ್ಕೂ ಹೆಚ್ಚು ಆನ್‌ಲೈನ್‌ ಗ್ರಾಹಕರನ್ನು ಹೊಂದಿದ್ದಾರೆ.

ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಸ್ವಾವಲಂಬಿ ಮಹಿಳೆಯರಾಗುವ ಜತೆಗೆ ಮಾರಾಟಗಾರರಾಗಿ ಮತ್ತು ಗ್ರಾಹಕರಾಗಿಯೂ ಪರಸ್ಪರ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಈ ಗುಂಪಿನ ವಿಶೇಷವಾಗಿದೆ.
ಈ ಗುಂಪಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರು ಇದ್ದರೂ, ಕೊರೊನಾ ಸಮಯದಲ್ಲಿ ಅನೇಕರು ಕೆಲಸ ಕಳೆದುಕೊಂಡರೂ ಧೃತಿಗೆಡದೇ, ಅವರವರ ಕಲೆ ಮತ್ತು ಆಸಕ್ತಿಯ ಮೇಲೆ ಕರಕುಶಲ ವಸ್ತುಗಳ ತಯಾರಿಕೆ, ವಿವಿಧ ಚಟ್ನಿಪುಡಿ, ಚಿಪ್ಸ್‌, ಸಂಡಿಗೆ, ಹಪ್ಪಳ, ಗೃಹ ಅಲಂಕಾರಿಕ ವಸ್ತುಗಳು, ಕುಶಲ ವಿನ್ಯಾಸ,
ಪೇಂಟಿಂಗ್‌ ಮುಂತಾದ ವಸ್ತುಗಳನ್ನು ತಯಾರಿಸಿ, ಮಾರಾಟ ಮಾಡಲು ಪ್ರಾರಂಭಿಸಿದರು. ಇದೀಗ ಯಶಸ್ವಿಗಳಿಸಿದೆ. ಧೃತಿ ಇಂದು ವಾಣಿಜ್ಯೋದ್ಯಮದ ವಹಿವಾಟನ್ನು ಮೀರಿದ ಮಹಿಳೆಯರ ಸಂಘಟಿತ ಶಕ್ತಿಯಾಗಿ ಪರಿವರ್ತನೆಯಾಗಿದೆ.

ಈ ಧೃತಿಯು ಚಿಕ್ಕ-ಚಿಕ್ಕ ಹಳ್ಳಿಯ ಮಹಿಳೆಯನ್ನು ಹೊಂದಿದ್ದು, ಬಹುತೇಕ ಮಹಿಳೆಯರು ಆನ್‌ಲೈನ್‌
ಮಾರಾಟ ವ್ಯವಸ್ಥೆಯ ಮೂಲಕ ಉದ್ಯೋಗದ ಕೌಶಲ್ಯಗಳನ್ನು ಕಲಿಯುತ್ತಾ, ಉತ್ಪನ್ನಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದರಿಂದ ಪ್ಯಾಕಿಂಗ್‌, ಅಂಚೆ ಅಥವಾ ಕೊರಿಯರ್‌ ಸೇವೆ ಮೂಲ ವಸ್ತುಗಳನ್ನು ಗ್ರಾಹಕರಿಗೆ ವ್ಯವಸ್ಥಿತವಾಗಿ ತಲುಪಿಸುವುದರಲ್ಲಿ ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. “ಎಲ್ಲರೂ ಒಟ್ಟಾಗಿ ಬೆಳೆಯೋಣ,
ಬೆಳೆಸೋಣ’ ಎನ್ನುವುದು ಪ್ರತೀ ಉದ್ಯಮಿಗಳ ಘೋಷ ವಾಕ್ಯ ಎಂದು ಧೃತಿ ಮಹಿಳಾ ಮಾರುಕಟ್ಟೆ ಸಂಸ್ಥಾಪಕಿ ಅಪರ್ಣಾ ರಾವ್‌ ತಿಳಿಸುತ್ತಾರೆ. ಈ ಕಾರ್ಯಕ್ರಮವನ್ನು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ. ಎನ್‌ ಮಂಜುನಾಥ್‌
ಉದ್ಘಾಟಿಸಲಿದ್ದು, ಬಿ.ಜೆ. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ. ಪುಟ್ಟ ಸ್ವಾಮಿ ಹಾಗೂ ಪ್ರಾಂಶುಪಾಲರಾದ ಡಾ. ಅಶ್ವಥ್‌ ಎಂ.ಯು. ಭಾಗವಹಿಸಲಿದ್ದಾರೆ.

ಫ್ಯಾಶನ್‌ ಶೋ, ಅಡುಗೆ ಸಡಗರ ಜತೆಗೆ ವಿವಿಧ ಸ್ಪರ್ಧೆ
ಧೃತಿ ಮಹಿಳಾ ಮಾರುಕಟ್ಟೆ ಪ್ರಾರಂಭವಾಗಿ 3 ವರ್ಷಗಳು ಕಳೆದ ಹಿನ್ನೆಲೆ ನಗರದ ವಿವಿಪುರಂನ ಬೆಂಗಳೂರು ತಾಂತ್ರಿಕ ಶಿಕ್ಷಣ ಸಂಸ್ಥೆ(ಬಿಐಟಿ) ಕ್ಯಾಂಪಸ್‌ನಲ್ಲಿ ಮೇ.19, 20 ಹಾಗೂ 21 ಮೂರು ದಿನಗಳ ಕಾಲ “ಧೃತಿ ಉತ್ಸವ’ವನ್ನು ಆಯೋಜಿಸಲಾಗಿದ್ದು, ಧೃತಿ ಮಹಿಳೆಯರು ತಯಾರಿಸಿದ ವಸ್ತುಗಳ ಪ್ರದರ್ಶನ ಹಾಗೂ
ಮಾರಾಟ ಮೇಳ ನಡೆಯಲಿದೆ. ಅಷ್ಟೇ ಅಲ್ಲದೇ, ಧೃತಿ ಮಹಿಳೆಯರೇ ನಿರ್ದೇಶಿಸಿ, ತಯಾರಿಸಿದ ವಸ್ತುಗಳನ್ನು ಪ್ರದರ್ಶಿಸಲು “ಧೃತಿ- ಸಾಮಾನ್ಯ ಮಹಿಳೆ’ ಫ್ಯಾಶನ್‌ ಶೋ ಕೂಡ ಇರಲಿದೆ. ಈ ಬಾರಿ, ಆಹಾರ ಪದ್ಧತಿಗಳ ಬಗ್ಗೆ ಮಾಹಿತಿ, ಅನುಭವ ಮುಂತಾದ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಲು “ಅಡುಗೆ ಸಡಗರ’ ಎಂಬ ವಿಶೇಷ ವೇದಿಕೆಯನ್ನು ಸಿದ್ಧಪಡಿಸಲಾಗಿದೆ.

ಧೃತಿ ಉತ್ಸವದಲ್ಲಿ ನೂರಕ್ಕೂ ಹೆಚ್ಚು ವಿಶಿಷ್ಟ ವಸ್ತುಗಳ ಮಾರಾಟ ಮಳಿಗೆಗಳು ಇರುವುದಷ್ಟೇ ಅಲ್ಲದೆ, ಪ್ರಾದೇಶಿಕ ಆಟಗಳು, ಯುವ ಮನೋರಂಜನಾ ಕಾರ್ಯಕ್ರಮ, ಮಣ್ಣಿನ ಆಕೃತಿ, ಮಡಿಕೆ ತಯಾರಿಕಾ ಶಿಬಿರ, ವಾಣಿಜ್ಯೋದ್ಯಮ
ಅಭಿವೃದ್ಧಿ ತರಬೇತಿ ಶಿಬಿರ, ಅಡುಗೆ ಸ್ಪರ್ಧೆ, ವಿನೂತನ ಗೃಹೋದ್ಯಮ ಸ್ಪರ್ಧೆ ಮುಂತಾದವುಗಳನ್ನು ಆಯೋಜಿಸಲಾಗಿದೆ.

ಧೃತಿ ಮಹಿಳಾ ಮಾರುಕಟ್ಟೆಯ ಹೆಚ್ಚಿನ ಮಾಹಿತಿಗಾಗಿ dhrutimahilamarukatte.com / https://facebook.com/
dhruti-mahila- marukatte / 9082015664 ಸಂಪರ್ಕಿಸಬಹುದಾಗಿದೆ.

 

ಟಾಪ್ ನ್ಯೂಸ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.