ರೈಲಿಗೆ ಹಾರಿ ಮೃತಪಟ್ಟವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್
Team Udayavani, May 2, 2019, 3:00 AM IST
ಹೊನ್ನಾವರ: ಎಸ್ಎಸ್ಎಲ್ಸಿ ಫಲಿತಾಂಶಕ್ಕೆ ಹೆದರಿ ಚಲಿಸುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದಾನೆ.
ಹಳದೀಪುರದ ಕುದಬೈಲ್ ನಿವಾಸಿ, ಕರ್ಕಿ ಗುರುಕುಲ ಪ್ರೌಢಶಾಲೆಯ ವಿದ್ಯಾರ್ಥಿ ವಿಜೇತ ರಾಮದಾಸ ನಾಯ್ಕ (16) ಮಂಗಳವಾರ ಕುಮಟಾದಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ ಎರ್ನಾಕುಲಂ ರೈಲಿಗೆ ಹಳದೀಪುರ ಬಳಿ ಹಾರಿದ್ದ.
ಹೀಗೆ ಹಾರಿದವನು ಮುಂಭಾಗದ ಎಂಜಿನ್ಗೆ ಸಿಲುಕಿದ ಪರಿಣಾಮ ತಲೆಯ ಹಿಂಬದಿಗೆ ರೈಲಿನ ಕಬ್ಬಣದ ರಾಡ್ ತಗುಲಿ ಬಾಯಿಂದ ಹೊರ ಬಂದಿತ್ತು. ಎರಡೂ ಕಾಲುಗಳು ತುಂಡಾಗಿದ್ದವು.
ಸುಮಾರು ಎರಡು ಕಿಲೋಮೀಟರ್ ದೂರ ಎಳೆದು ತಂದಿದ್ದ ರೈಲು ಹೊನ್ನಾವರ ನಿಲ್ದಾಣಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. “ಸೆಲ್ಫಿ ತಗೆಯಲು ನಿಂತಾಗ ಎಳೆದು ತಂದ ಟ್ರೈನು’ ಎಂಬ ಒಕ್ಕಣೆಯನ್ನೂ ನೀಡಲಾಗಿದೆ.