ಜೆಡಿಎಸ್ನ ಫರೂಕ್ ಹೆಚ್ಚು ಶ್ರೀಮಂತ
Team Udayavani, Mar 14, 2018, 8:15 AM IST
ಬೆಂಗಳೂರು: ರಾಜ್ಯಸಭೆಗೆ ಸ್ಪರ್ಧಿಸಿರುವ ಅಭ್ಯಥಿಗಳಲ್ಲಿ ಎಲ್ಲರೂ ಕೋಟ್ಯಧಿಪತಿಗಳೇ ಆಗಿದ್ದಾರೆ. ಆ ಪೈಕಿ, ಜೆಡಿಎಸ್ ಅಭ್ಯರ್ಥಿ
ಉದ್ಯಮಿ ಬಿ.ಎಂ.ಫರೂಕ್ ಅತಿ ಹೆಚ್ಚು 767 ಕೋಟಿ ರೂ. ಮೊತ್ತದ ಆಸ್ತಿಪಾಸ್ತಿ ಹೊಂದಿದ್ದರೆ, ಬಿಜೆಪಿ ಅಭ್ಯರ್ಥಿ, ಉದ್ಯಮಿ ರಾಜೀವ್
ಚಂದ್ರಶೇಖರ್ 28 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಎಲ್ ಹನುಮಂತಯ್ಯ ಹಾಗೂ
ಜಿ.ಸಿ.ಚಂದ್ರಶೇಖರ ಬಳಿ ಸ್ವಂತ ಕಾರಿಲ್ಲ. ನಾಸಿರ್ ಹುಸೇನ್ ಬಳಿ ಇನೋವಾ ಕಾರು ಹಾಗೂ ಒಂದು ಹೊಂಡಾ ಆಕ್ಟೀವಾ ಸ್ಕೂಟಿ ಇದೆ. ಮೂವರೂ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ. ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಆಸ್ತಿವಿವರದಲ್ಲಿ ಈ
ವಿವರ ನೀಡಿದ್ದಾರೆ.
ಫರೂಕ್ ಆಸ್ತಿ 767 ಕೋಟಿ: ಜೆಡಿಎಸ್ನ ಬಿ. ಎಂ.ಫರೂಕ್ ಕುಟುಂಬದ ಒಟ್ಟು ಆಸ್ತಿಯ ಮೌಲ್ಯ 767 ಕೋಟಿ ರೂ.ಗಿಂತ ಅಧಿಕ. ಎರಡು ವರ್ಷದ ಹಿಂದೆ ಅವರ ಆಸ್ತಿ 737 ಕೋಟಿ ರೂ. ಆಗಿತ್ತು. ಇದೀಗ 30 ಕೋಟಿ ರೂ. ಹೆಚ್ಚಳವಾಗಿದೆ. ಅವರ ವಾರ್ಷಿಕ ಆದಾಯ
10.19 ಕೋಟಿ, ಪತ್ನಿಯ ವಾರ್ಷಿಕ ಆದಾಯ 59.9 ಲಕ್ಷ ರೂ. ಫರೂಕ್ ಅವರ ಚರಾಸ್ತಿ ಮೌಲ್ಯ 87.27 ಕೋಟಿ, ಸ್ಥಿರಾಸ್ತಿ ಮೌಲ್ಯ
591.33 ಕೋಟಿ ರೂ.
ರಾಜೀವ್ ಚಂದ್ರಶೇಖರ್ ಆಸ್ತಿ 28 ಕೋಟಿ: ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರ ಒಟ್ಟು ಆಸ್ತಿ 28 ಕೋಟಿ. 1942ನೇ
ಮಾಡೆಲ್ನ ಇಂಡಿಯನ್ ಸ್ಕೌಟ್ ಮೋಟಾರು ಬೈಕ್ ಬಿಟ್ಟರೆ ಅವರ ಬಳಿ ಯಾವುದೇ ವಾಹನಗಳಿಲ್ಲ. ಅವರ ಬಳಿ 27.98 ಕೊಟಿ, ಪತ್ನಿ ಬಳಿ 9.41 ಕೋಟಿ, ಮಕ್ಕಳ ಬಳಿ ಕ್ರಮವಾಗಿ 7.78 ಕೋಟಿ, ಹಾಗೂ 6.47 ಕೋಟಿ ರೂ. ಮೌಲ್ಯದ ಆಸ್ತಿಯಿದೆ. ಕೋರಮಂಗಲ 3ನೇ ಬ್ಲಾಕ್ನಲ್ಲಿ 9600 ಚದರ ಅಡಿಯ ಕೃಷಿಯೇತರ ಭೂಮಿ ಹೊಂದಿದ್ದಾರೆ.
ಡಾ.ಎಲ್. ಹನುಮಂತಯ್ಯ: ಇವರ ಚರಾಸ್ತಿ ಮೌಲ್ಯ 1.24 ಕೋಟಿ ರೂ. ಸ್ವಂತ ವಾಹನ ಇಲ್ಲ, ಬಂಗಾರದ ಆಭರಣ ಇಲ್ಲ. ದೊಡ್ಡಬಳ್ಳಾಪುರ ರಾಮೇಶ್ವರ ಹಳ್ಳಿಯಲ್ಲಿ 4.10 ಎಕರೆ ಜಮೀನು, ಭೂಪಸಂದ್ರದಲ್ಲಿ ಒಂದು ಹಾಗೂ ನಂದಿನಿ ಲೇಔಟ್ನಲ್ಲಿ 2 ಸೈಟ್ ಇದ್ದು, ಇವುಗಳ ಮಾರುಕಟ್ಟೆ ಮೌಲ್ಯ 3.48 ಕೋಟಿ.
ಜಿ.ಸಿ.ಚಂದ್ರಶೇಖರ್: ಚರಾಸ್ತಿ ಮೌಲ್ಯ 45.75 ಲಕ್ಷ ರೂ. ಸ್ವಂತ ಕಾರಿಲ್ಲ, ಬಂಗಾರದ ಆಭರಣ ಇಲ್ಲ. ವೆಸ್ಟ್ ಆಫ್ ಕಾರ್ಡ್ ರೋಡ್ನಲ್ಲಿ 3.5 ಕೋಟಿ ಮೌಲ್ಯದ ಸ್ವಂತ ಮನೆ ಇದೆ. ಪತ್ನಿ ಡಾ. ಸುಧಾ ಚಂದ್ರಶೇಖರ್ ಬಳಿ ಒಟ್ಟು 1.6 ಕೋಟಿ. ಜೆಪಿನಗರ ಮೈಸೂರು, ಯಲಚೇನಹಳ್ಳಿಗಳಲ್ಲಿ ಮನೆಯಿದ್ದು ಸದ್ಯದ ಮಾರುಕಟ್ಟೆ ಬೆಲೆ 8 ಕೋಟಿ ರೂ.
ನಾಸೀರ್ ಹುಸೇನ್: ಚರಾಸ್ತಿ ಮೌಲ್ಯ 18.28 ಕೋಟಿ ರೂ. ಸ್ತಿರಾಸ್ತಿ ಮೌಲ್ಯ 1.12 ಕೋಟಿ. (1.4 ಎಕರೆ ಜಮೀನು, ಕೊಳಗಾಲು ಗ್ರಾಮ, ಬೆಂಗಳೂರು ಸಾರಿಗೆ ನಗರದಲ್ಲಿ ಸೈಟ್, ಚಿತ್ರದುರ್ಗದಲ್ಲಿ ವಾಣಿಜ್ಯ ಕಟ್ಟಡ, ಬಳ್ಳಾರಿಯಲ್ಲಿ ಸ್ವಂತ ಮನೆ). ಪತ್ನಿ ಮೆಹನಾಝ್ ಅನ್ಸಾರಿ ಬಳಿ 42.41 ಲಕ್ಷ ರೂ. ಮೌಲ್ಯದ ಆಸ್ತಿಯಿದೆ. ಇವರಿಗೆ ಇರುವ ಒಟ್ಟು ಸಾಲ 5.77 ಲಕ್ಷ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್