ಎಐಸಿಸಿ ಶಿಸ್ತು ಸಮಿತಿ ಸಭೆಗೆ ಪರಮೇಶ್ವರ್ ಹಾಜರು
Team Udayavani, Apr 11, 2022, 12:12 PM IST
ಬೆಂಗಳೂರು: ಎಐಸಿಸಿ ಶಿಸ್ತು ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಸೋಮವಾರ ದಿಲ್ಲಿಗೆ ತೆರಳಿದ್ದಾರೆ.
ಎಐಸಿಸಿ ಶಿಸ್ತು ಸಮಿತಿಗೆ ಕರ್ನಾಟಕದಿಂದ ಏಕೈಕ ಸದಸ್ಯ ಡಾ.ಜಿ.ಪರಮೇಶ್ವರ್. ಇದೇ ಮೊದಲ ಬಾರಿಗೆ ಸಮಿತಿ ಸಭೆ ಸೇರುತ್ತಿದ್ದು ಜಿ23 ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಭೆಯಲ್ಲಿ ಪ್ರಸ್ತಾವನೆ ಮಂಡನೆಯಾಗಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಅಖಿಲೇಶ್ ಜತೆ ಮುನಿಸು; ಸಮಾಜವಾದಿ ಪಕ್ಷಕ್ಕೆ ಅಜಂ ಖಾನ್ ಗುಡ್ ಬೈ, ಸ್ವಂತ ಪಕ್ಷ ರಚನೆ?
ಕೆಪಿಸಿಸಿ ಸಾರಥ್ಯವನ್ನು ಸತತ ಎಂಟು ವರ್ಷಗಳ ಕಾಲ ನಿಭಾಯಿಸಿದ್ದ ಪರಮೇಶ್ವರ್ ಸದ್ಯ ರಾಜ್ಯ ಘಟಕದಲ್ಲಿ ಯಾವುದೇ ಜವಾಬ್ದಾರಿ ಹೊಂದಿಲ್ಲ. ಕೆಲ ತಿಂಗಳು ಹಿಂದೆ ಅವರನ್ನು ಶಿಸ್ತು ಸಮಿತಿ ಸದಸ್ಯರಾಗಿ ನೇಮಕ ಮಾಡಲಾಗಿತ್ತು.