ನಕ್ಸಲರ ನೆಂಟರಿಗೆ ಆಶ್ರಯ ಕೊಟ್ಟು ದ. ಕ.ದ ನೆಮ್ಮದಿ ಕಿತ್ತುಕೊಂಡಿರಿ
ಸಿಎಂಗೆ ಸುನಿಲ್ ತಿರುಗೇಟು
Team Udayavani, Apr 15, 2024, 10:43 PM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಯವರು ದಕ್ಷಿಣ ಕನ್ನಡಕ್ಕೆ ಕೊಟ್ಟ ಕೊಡುಗೆ ಏನು ಎಂದು ಪ್ರಶ್ನಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ತಿರುಗೇಟು ನೀಡಿದ್ದು, ನಾವು ನಿಗ್ರಹಿಸಿ ಮಟ್ಟ ಹಾಕಿದ್ದ ನಕ್ಸಲರ ನೆಂಟರಿಗೆ ನಿಮ್ಮ ಕಚೇರಿಯ ಸುತ್ತಮುತ್ತ ಆಶ್ರಯಕೊಟ್ಟು ದಕ್ಷಿಣ ಕನ್ನಡದ ಶಾಂತಿ – ಸುವ್ಯವಸ್ಥೆಯನ್ನೇ ಕಿತ್ತುಕೊಂಡಿರಿ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯನವರ ಹೇಳಿಕೆಗೆ “ಎಕ್ಸ್’ ಖಾತೆಯಲ್ಲಿ ಸುದೀರ್ಘ ಉತ್ತರ ನೀಡಿರುವ ಸುನಿಲ್ ಕುಮಾರ್, ದಕ್ಷಿಣ ಕನ್ನಡಕ್ಕೆ ಮೋದಿ ಏನು ಕೊಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಕೊಡಲು ನಾವು ಸಿದ್ದ. ಆದರೆ ಕರಾವಳಿ ಜಿಲ್ಲೆಗೆ ನಾವು ಕೊಟ್ಟಿದ್ದರ ಪೈಕಿ ನೀವು ಕಿತ್ತುಕೊಂಡ ಪಟ್ಟಿ ಎಷ್ಟು ದೊಡ್ಡದಿದೆ ಗೊತ್ತೇ? ಕಾಗಕ್ಕ, ಗುಬ್ಬಕ್ಕನ ಕತೆ ಹೇಳಿ ಎಷ್ಟು ದಿನ ಜನರ ದಾರಿ ತಪ್ಪಿಸುತ್ತೀರಿ? ದಕ್ಷಿಣ ಕನ್ನಡ ಜಿಲ್ಲೆ ಸಹಿತ ಸಮಗ್ರ ಕರಾವಳಿ ಜಿಲ್ಲೆಗಳು ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಕಂಡದ್ದು ಬಿಜೆಪಿ ಕಾಲದಲ್ಲಿ ಎಂದು ಎದೆ ತಟ್ಟಿ ಹೇಳುತ್ತೇನೆ. ಈ ಬಗ್ಗೆ ಬಹಿರಂಗ ಚರ್ಚೆಗೂ ಸಿದ್ದ ಎಂದಿದ್ದಾರೆ.
ಪಶ್ಚಿಮ ವಾಹಿನಿ ಯೋಜನೆಗೆ ಬಿಜೆಪಿ ಸರಕಾರ ಕೊಟ್ಟ 500 ಕೋಟಿ ರೂ.ಯನ್ನು ಕಿತ್ತುಕೊಂಡಿರಿ, ಜಲಜೀವನ್ ಮಿಷಿನ್ ಯೋಜನೆಗೆ ಕೇಂದ್ರ ಸರಕಾರ ಕೊಡುತ್ತಿದ್ದ ಅನುದಾನದ ಮ್ಯಾಚಿಂಗ್ ಗ್ರ್ಯಾಂಟ್ ಕಿತ್ತುಕೊಂಡಿರಿ, ಬ್ರಹ್ಮರ್ಷಿ ನಾರಾಯಣ ಗುರು ಅಭಿವೃದ್ಧಿ ಮಂಡಳಿಗೆ ನಮ್ಮ ಸರಕಾರ ಕೊಟ್ಟ ಹಣವನ್ನು ಕಿತ್ತುಕೊಂಡಿರಿ, ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತೇವೆಂಬ ಮಾತು ಕೊಟ್ಟು ಕಿತ್ತುಕೊಂಡಿರಿ, ಬಂದರು ಅಭಿವೃದ್ಧಿಯ ಕನಸು ಕಿತ್ತುಕೊಂಡಿರಿ ಎಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್