ಜಿಎಸ್‌ಟಿ: ಬೆಲೆ ಇಳಿಸದ 194 ವರ್ತಕರ ವಿರುದ್ಧ ಪ್ರಕರಣ


Team Udayavani, Dec 8, 2017, 11:15 AM IST

08-6.jpg

ಬೆಂಗಳೂರು: ಜನ ಸಾಮಾನ್ಯರು ಬಳಸುವ ಆಯ್ದ ವಸ್ತುಗಳಿಗೆ ಜಿಎಸ್‌ಟಿಯಡಿ ವಿಧಿಸಿದ್ದ ತೆರಿಗೆ ಪ್ರಮಾಣ ಇತ್ತೀಚೆಗೆ ಇಳಿಕೆಯಾದರೂ ಅದರ ಲಾಭ ವನ್ನು ಗ್ರಾಹಕರಿಗೆ ವರ್ಗಾಯಿಸದೆ ದುಬಾರಿ ಬೆಲೆಯಲ್ಲೇ ಮಾರಾಟ ಮಾಡುತ್ತಿದ್ದ 194 ವರ್ತಕರ
ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆ ಬಿಸಿ ಮುಟ್ಟಿಸಿದೆ.

ನವೆಂಬರ್‌ನಲ್ಲಿ 4 ದಿನ ವಿಶೇಷ ಅಭಿಯಾನದಡಿ ರಾಜ್ಯಾದ್ಯಂತ ದಿಢೀರ್‌ ತಪಾಸಣೆ ನಡೆಸಿದ ಇಲಾಖೆ ಅಧಿಕಾರಿಗಳು ಜಿಎಸ್‌ಟಿ ತೆರಿಗೆ ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದ ವರ್ತಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರಾಜ್ಯಾದ್ಯಂತ ದಾಖಲಾದ 194 ಪ್ರಕರಣಗಳ ಪೈಕಿ 102 ಪ್ರಕರಣ ಬೆಂಗಳೂರಿನಲ್ಲೇ ದಾಖಲಾಗಿವೆ. ವರ್ತಕರು ಮಾತ್ರವಲ್ಲದೆ ಉತ್ಪಾದಕರು, ವಿತರಕರ ಪಾತ್ರವೂ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಜರುಗಿಸಲು ಇಲಾಖೆ ಸಿದ್ಧತೆ ನಡೆಸಿದೆ.

ದೇಶಾದ್ಯಂತ ಜುಲೈ 1ರಿಂದ ಜಿಎಸ್‌ಟಿ ವ್ಯವಸ್ಥೆ ಜಾರಿಯಾಗಿದ್ದು, ಸರಕು, ಸೇವೆಗಳಿಗೆ ಕನಿಷ್ಠ ಶೇ.5 ರಿಂದ ಗರಿಷ್ಠ ಶೇ.28ರವರೆಗೆ ಒಟ್ಟು ನಾಲ್ಕು ಹಂತದ ತೆರಿಗೆ ವಿಧಿಸಿತ್ತು. ಆದರೆ ಆಯ್ದ ಸರಕುಗಳ ತೆರಿಗೆ ದುಬಾರಿಯಾಗಿದ್ದು, ಇಳಿಕೆ ಮಾಡುವಂತೆ ಸಾರ್ವಜನಿಕರು ಸೇರಿದಂತೆ ಉತ್ಪಾದನಾ, ವಿತರಣಾ ವಲಯದಿಂದ ನಿರಂತರವಾಗಿ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ನವೆಂಬರ್‌ನಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ 177 ವಸ್ತುಗಳ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಸಿತ್ತು. ಇದರಲ್ಲಿ “ವೇಗವಾಗಿ ಮಾರಾಟವಾಗುವ ಗ್ರಾಹಕ ವಸ್ತು’ಗಳೇ (ಎಫ್ಎಂಸಿಜಿ) ಹೆಚ್ಚಾಗಿದ್ದವು. ಬಹಳಷ್ಟು ವಸ್ತುಗಳ ತೆರಿಗೆ ಪ್ರಮಾಣವನ್ನು ಶೇ.28ರಿಂದ ಶೇ.18ಕ್ಕೆ ಹಾಗೂ ಶೇ.18 ಇದ್ದ ಆಯ್ದ ವಸ್ತುಗಳ ತೆರಿಗೆಯನ್ನು ಶೇ.12ಕ್ಕೆ ಇಳಿಕೆ ಮಾಡಲಾಗಿತ್ತು. ಹಾಗೆಯೇ ಕೆಲವೊಂದು ವಸ್ತುಗಳ ತೆರಿಗೆ ಶೇ.12ರಿಂದ ಶೇ.5ಕ್ಕೂ ಇಳಿಕೆಯಾಗಿದ್ದು, ಜನರಲ್ಲೂ ಹರ್ಷ ಮೂಡಿಸಿತ್ತು.

ಗ್ರಾಹಕರಿಗೆ ಸಿಗದ ಲಾಭ: ನವೆಂಬರ್‌ನಲ್ಲಿ 177 ವಸ್ತುಗಳ ಜಿಎಸ್‌ಟಿ ತೆರಿಗೆ ಪ್ರಮಾಣ ಇಳಿಕೆ ಮಾಡಿದ ಕೇಂದ್ರ ಸರ್ಕಾರವು ಪರಿಷ್ಕೃತ ತೆರಿಗೆ ಮೊತ್ತವನ್ನು ನ.15ರಿಂದ ಜಾರಿಗೊಳಿಸಿತ್ತು. ಅದ ರಂತೆ ತೆರಿಗೆ ಇಳಿಕೆಯಾದ ವಸ್ತುಗಳ ಬೆಲೆ ನ.15ರಿಂದಲೇ ಪರಿಷ್ಕರಣೆಯಾಗಿ ಗ್ರಾಹಕರಿಗೆ ಅದರ ಲಾಭ ಸಿಗಬೇಕಿತ್ತು. ಆದರೆ ಬಹಳಷ್ಟು ಕಡೆ ಗ್ರಾಹಕರಿಗೆ ತೆರಿಗೆ ಇಳಿಕೆ ಲಾಭ ಸಿಗದಿರುವುದು
ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆ ನಡೆಸಿದ ತಪಾಸಣೆಯಿಂದ ಬಯಲಾಗಿದೆ.

ಎಂಆರ್‌ಪಿಯೇ ಇಲ್ಲ!: ತೆರಿಗೆ ಇಳಿಕೆ ಪ್ರಮಾಣಕ್ಕೆ ಪೂರಕವಾಗಿ ದರ ಪರಷ್ಕರಿಸಿ ಹೊಸ ದರ ಪಟ್ಟಿ ಮುದ್ರಿಸಿ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಹಳೆಯ ದುಬಾರಿ ದರದಲ್ಲೇ ಮಾರಾಟ ಮಾಡುವುದು ನಿಯಮಬಾಹಿರ. ಆದರೆ ಹಲವೆಡೆ ಬೆಲೆ ಇಳಿಸಿ ಪರಿಷ್ಕೃತ ದರ ಪಟ್ಟಿ ನಮೂದಿಸದಿರುವುದು ಕಂಡುಬಂದರೆ ಬಹಳಷ್ಟು ವಸ್ತುಗಳಿಗೆ ಗರಿಷ್ಠ ಮಾರಾಟ ದರ ಪಟ್ಟಿಯನ್ನೇ (ಎಂಆರ್‌ಪಿ) ನಮೂದಿ ಸದಿರುವುದು ಬೆಳಕಿಗೆ ಬಂದಿದೆ. ಆ ಹಿನ್ನೆಲೆಯಲ್ಲಿ ಒಟ್ಟು 194 ಮಳಿಗೆದಾರರ ವಿರುದ್ಧ ಇಲಾಖೆಯು ಕಾನೂನು
ಮಾಪನಶಾಸ್ತ್ರ (ಪ್ಯಾಕೇಜ್ಡ್ ಕಮಾಡಿಟಿ) ನಿಯಮ 18 (3)ರಡಿ ಪ್ರಕರಣ ದಾಖಲಿಸಿದೆ. 

ದಂಡದ ಜತೆಗೆ ಜೈಲು ಶಿಕ್ಷೆ
ಜಿಎಸ್‌ಟಿ ತೆರಿಗೆ ಇಳಿಕೆ ಹಿನ್ನೆಲೆಯಲ್ಲಿ ತೆರಿಗೆ ಇಳಿಕೆ ಲಾಭ ಗ್ರಾಹಕರಿಗೆ ಸಿಗುತ್ತಿದೆಯೇ ಎಂಬುದರ ಪರಿಶೀಲನೆಗೆ ನವೆಂಬರ್‌ನಲ್ಲಿ ನಾಲ್ಕು ದಿನ ರಾಜ್ಯಾದ್ಯಂತ ವಿಶೇಷ ಅಭಿಯಾನ ನಡೆಸಲಾಯಿತು. ಈ ವೇಳೆ ತೆರಿಗೆ ಇಳಿಕೆಯಂತೆ ದರ ಇಳಿಕೆ ಮಾಡದೆ ಹಳೆಯ ದರದಲ್ಲೇ ಮಾರಾಟ ಮಾಡುತ್ತಿದ್ದ 194 ವರ್ತಕರ ವಿರುದ್ಧ ಪ್ರಕರಣ ದಾಖಲಾಗಿದೆ. ಮೊದಲ ಬಾರಿ ನಿಯಮ ಉಲ್ಲಂಘನೆಗೆ 2,500 ರೂ. ದಂಡ ವಿಧಿಸಲಾಗುತ್ತದೆ. 2ನೇಬಾರಿ ನಿಯಮ ಉಲ್ಲಂಘನೆಗೆ ದಂಡದ ಜತೆಗೆ ಜೈಲು ಶಿಕ್ಷೆ ವಿಧಿಸಲು  ಅವಕಾಶವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾರ್ವಜನಿಕರು ದೂರು ನೀಡಬಹುದು
ರಾಜ್ಯದಲ್ಲಿ ಯಾವುದೇ ಪ್ಯಾಕೇಜ್ಡ್ ಕಮಾಡಿಟಿಯ ಮೇಲೆ ಎಂಆರ್‌ಪಿ ಮುದ್ರಿಸದಿರುವುದು, ಜಿಎಸ್‌ಟಿ ತೆರಿಗೆಗಿಂತಲೂ ಹೆಚ್ಚು ತೆರಿಗೆ
ವಿಧಿಸಿ ಗ್ರಾಹಕರನ್ನು ಶೋಷಿಸುತ್ತಿ ದ್ದರೆ ಆ ಬಗ್ಗೆ ಇಲಾಖೆಯ ಇ-ಮೇಲ್‌ ವಿಳಾಸಕ್ಕೆ ದೂರು ನೀಡಿದರೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಜರುಗಿಸಲಿದ್ದಾರೆ. ಇ-ಮೇಲ್‌ ವಿಳಾಸ: [email protected]

 ಎಂ.ಕೀರ್ತಿಪ್ರಸಾದ್‌

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.