ವಾರಕ್ಕೆರಡು ಹಮ್ಸಫರ್ ರೈಲು ಸಂಚಾರ
Team Udayavani, May 25, 2018, 11:52 AM IST
ಹುಬ್ಬಳ್ಳಿ: ವಾರಕ್ಕೊಮ್ಮೆ ಸಂಚರಿಸುತ್ತಿದ್ದ ಅಗರ್ತಲಾ-ಬೆಂಗಳೂರು ಕಂಟೋನ್ಮೆಂಟ್ ಹಮ್ಸಫರ್ ಎಕ್ಸ್ಪ್ರೆಸ್ (12504/12503) ರೈಲನ್ನು ಮೇ 29ರಿಂದ ವಾರಕ್ಕೆರಡು ಬಾರಿ ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ. ಬೆಂಗಳೂರು ಕಂಟೋನ್ಮೆಂಟ್ನಿಂದ ಶುಕ್ರವಾರ ಹಾಗೂ ಮಂಗಳವಾರ ಬೆಳಗ್ಗೆ 10:15ಕ್ಕೆ ಹೊರಡುವ ರೈಲು ಕ್ರಮವಾಗಿ ಸೋಮವಾರ ಹಾಗೂ ಶುಕ್ರವಾರ ನಸುಕಿನಲ್ಲಿ 3:45ಕ್ಕೆ ಅಗರ್ತಲಾ ತಲುಪಲಿದೆ.
ಅದೇ ರೀತಿ, ಅಗರ್ತಲಾದಿಂದ ಪ್ರತಿ ಮಂಗಳವಾರ ಹಾಗೂ ಶನಿವಾರ ನಸುಕಿನಲ್ಲಿ 5 ಗಂಟೆಗೆ ಹೊರಡುವ ರೈಲು ಕ್ರಮವಾಗಿ ಗುರುವಾರ ಹಾಗೂ ಸೋಮವಾರ ರಾತ್ರಿ 11:15ಕ್ಕೆ ಬೆಂಗಳೂರು ಕಂಟೋನ್ಮೆಂಟ್ಗೆ ಬಂದು ಸೇರಲಿದೆ.
ರೈಲು ಸೇವೆ ಮುಂದುವರಿಕೆ: ಈ ಮಧ್ಯೆ, ನೈರುತ್ಯ ರೈಲ್ವೆ, ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಜೂನ್ 1ರಿಂದ ಜುಲೈ 29 ಜುಲೈವರೆಗೆ ಯಶವಂತಪುರ-ವಿಶಾಖಪಟ್ಟಣಂ ವಾರದ ಎಕ್ಸ್ಪ್ರೆಸ್ ತತ್ಕಾಲ್ ಎಕ್ಸ್ಪ್ರೆಸ್ ಸ್ಪೇಷಲ್ (06579/06580) ರೈಲು ಸೇವೆಯನ್ನು ಮುಂದುವರಿಸಲು ತೀರ್ಮಾನಿಸಿದೆ.
ರೈಲು ಯಶವಂತಪುರದಿಂದ ಪ್ರತಿ ಶುಕ್ರವಾರ ಸಂಜೆ 6:35ಕ್ಕೆ ಪ್ರಯಾಣ ಬೆಳೆಸಿ ಶನಿವಾರ ಮಧ್ಯಾಹ್ನ 2:35ಕ್ಕೆ ವಿಶಾಖಪಟ್ಟಣಂಗೆ ಬಂದು ಸೇರಲಿದೆ. ಅದೇ ರೀತಿ, ವಿಶಾಖಪಟ್ಟಣಂನಿಂದ ಪ್ರತಿ ಭಾನುವಾರ ಮಧ್ಯಾಹ್ನ 1:45ಕ್ಕೆ ಹೊರಡುವ ರೈಲು ಯಶವಂತಪುರಕ್ಕೆ ಸೋಮವಾರ ಬೆಳಗ್ಗೆ 9:05ಕ್ಕೆ ಆಗಮಿಸಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ