27ರಿಂದ ಗೋವಾದಲ್ಲಿ ಹಿಂದೂ ಅಧಿವೇಶನ
Team Udayavani, May 14, 2019, 3:00 AM IST
ಬೆಂಗಳೂರು: ಹಿಂದೂ ರಾಷ್ಟ್ರ ಸ್ಥಾಪನೆ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮೇ 27 ರಿಂದ ಜೂನ್ 8ರವರೆಗೆ ಗೋವಾದಲ್ಲಿ 8ನೇ “ಅಖಿಲ ಭಾರತೀಯ ಹಿಂದೂ ಅಧಿವೇಶನ’ ಹಮ್ಮಿಕೊಳ್ಳಲಾಗಿದೆ.
ಅಧಿವೇಶನದಲ್ಲಿ ಹಿಂದೂ ಸಂಘಟನೆಗಳು ಮತ್ತು ಸಂಪ್ರದಾಯದವರು ರಾಷ್ಟ್ರಹಿತ ಮತ್ತು ಧರ್ಮಹಿತಕ್ಕಾಗಿ ಯೋಗದಾನ ನೀಡುವುದು, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಸೇರಿ ಇತ್ಯಾದಿ ವಿಚಾರಗಳ ಚರ್ಚೆ, ಮುಂದಿನ ದಿನಗಳಲ್ಲಿ ಪ್ರಾಂತ್ಯವಾರು ನಡೆಯಬೇಕಾದ ಅಧಿವೇಶನಗಳು ಹಾಗೂ ಹಿಂದೂಹಿತ ನಿರ್ಧಾರಗಳಿಗೆ ಸಮ್ಮತಿಸುವ ಚಟುವಟಿಕೆಗಳು ನಡೆಯಲಿವೆ.
ಅಧಿವೇಶನದ ಭಾಗವಾಗಿ ಮೇ 27, 28 ರಂದು ಧರ್ಮಪ್ರೇಮಿ ನ್ಯಾಯವಾದಿಗಳ ಅಧಿವೇಶನ, 28ರಂದು ಉದ್ಯಮಿಗಳ ಅಧಿವೇಶನ ಹಾಗೂ ಮೇ 29 ರಿಂದ ಜೂನ್ 4ರವರೆಗೆ ಅಖಿಲ ಭಾರತ ಹಿಂದೂ ಅಧಿವೇಶನ, ಜೂನ್ 5ರಿಂದ 8ರವರೆಗೆ ಹಿಂದೂ ರಾಷ್ಟ್ರ ಸಂಘಟಕರ ಪ್ರಶಿಕ್ಷಣ ಮತ್ತು ಅಧಿವೇಶನ ನಡೆಯಲಿದೆ.
ಈ ಹಿಂದಿನ ಏಳು ಅಧಿವೇಶನಗಳಲ್ಲಿ ಸಾಕಷ್ಟು ಬೆಂಬಲ, ಪ್ರೋತ್ಸಹ ದೊರಕಿತ್ತಲ್ಲದೇ ದೇಶದ ವಿವಿಧ ರಾಜ್ಯಗಳ ನೂರಾರು ಹಿಂದು ಸಂಘಟನೆಗಳು, ಸಾವಿರಾರು ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಬಾರಿ ಅಧಿವೇಶನದ ವ್ಯಾಪ್ತಿಯು ವಿಸ್ತಾರಗೊಂಡಿದ್ದು, ವಿಶೇಷವಾಗಿ ನೆರೆಯ ರಾಷ್ಟ್ರಗಳಾದ ನೇಪಾಳ, ಶ್ರೀಲಂಕಾ, ಮಲೇಶಿಯಾ, ಬಾಂಗ್ಲಾ ದೇಶಗಳಿಂದಲೂ ಹಿಂದೂ ಸಂಘಟನೆಗಳು, ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
“ಈ ಹಿಂದಿನ ಅಧಿವೇಶನಗಳು ಸಾಕಷ್ಟು ಉಪಯುಕ್ತವಾಗಿದ್ದು, ಅದರ ಪ್ರೇರಣೆಯಿಂದ 96 ಪ್ರಾಂತೀಯ ಹಿಂದೂ ಅಧಿವೇಶನಗಳು ನಡೆದಿವೆ. ಹಿಂದೂ ರಾಷ್ಟ್ರ ಹಾಗೂ ಧರ್ಮದ ಅಪಮಾನ, ಅವಹೇಳನ ಕೃತ್ಯಗಳ ವಿರುದ್ಧ ವ್ಯಾಪಕ ಜಾಗೃತಿ ಉಂಟಾಗಿದೆ.
ಉದ್ಯಮಿಗಳ ಪರಿಷತ್ತಿನ ಸ್ಥಾಪನೆ ಅದರಡಿ ವಿವಿಧ ಶಿಬಿರಗಳು, ರಾಷ್ಟ್ರೀಯ ಪತ್ರಕರ್ತರ ಪೀಠ, ಆರೋಗ್ಯ ಸಹಾಯ ಸಮಿತಿ ಸ್ಥಾಪನೆ, ಮಧ್ಯಪ್ರದೇಶದಲ್ಲಿ ಭೋಜಶಾಲಾ ಮುಕ್ತಿ ಆಂದೋಲನ, ತಿರುಪತಿ ಪಾವಿತ್ರತೆ ರಕ್ಷಣೆಯ ಆಂದೋಲನದ ರಾಷ್ಟ್ರೀಕರಣ, ಬಾಂಗ್ಲಾ ದೇಶದಲ್ಲಾಗುತ್ತಿರುವ ಗೋ ಕಳ್ಳಸಾಗಣೆಗೆ ವಿರೋಧ, ಉತ್ತರಾಖಂಡ, ನೇಪಾಳದ ನೆರೆಪೀಡಿತ,
ಭೂಕಂಪನ ಪ್ರದೇಶದಲ್ಲಿ ಸಹಾಯ ಕಾರ್ಯಕ್ರಮ, ನಿರಾಶ್ರಿತ ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ “ಏಕ ಭಾರತ ಅಭಿಯಾನ್ – ಕಾಶ್ಮೀರ ಕಿ ಓರ್’ ಸಭೆಗಳು, ಮಹಾನ್ ಹಿಂದು ನಾಯಕರ ತ್ತೈಮಾಸಿಕ ಸಭೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ಈ ಬಾರಿಯ ಗೋವಾ ಅಧಿವೇಶನ ಆಯೋಜಕ ನಾಗೇಶ ಗಾಡೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ