ಕಾವೇರಿ ನಿವಾಸದಲ್ಲಿ ನೂತನ ಕಚೇರಿ ಉದ್ಘಾಟನೆ
Team Udayavani, Nov 4, 2023, 12:57 PM IST
ಬೆಂಗಳೂರು: ಮುಖ್ಯಮಂತ್ರಿಗಳ ಗೃಹ ಕಚೇರಿ ಕಾವೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಕಚೇರಿಯನ್ನು ಇಂದು ಉದ್ಘಾಟಿಸಲಾಯಿತು. ಇದೇ ಕಚೇರಿಯಲ್ಲಿ ಸಚಿವರ ಸಭೆಯೂ ನಡೆಸಲಾಗಿದೆ.
ತಮ್ಮ ನಿವಾಸ ಕಾವೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸಭಾಂಗಣವನ್ನು ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರಿಂದ ಶನಿವಾರ ಉದ್ಘಾಟನೆ ಮಾಡಿಸಿದರು.
ಸಚಿವರಾದ ಡಾ ಜಿ ಪರಮೇಶ್ವರ, ಕೆ ಎನ್ ರಾಜಣ್ಣ, ಎಂ ಬಿ ಪಾಟೀಲ್, ಮಹದೇವಪ್ಪ, ದಿನೇಶ್ ಗುಂಡೂರಾವ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತಿತರರು ಇದ್ದರು.
ಇದೇ ಕಚೇರಿಯಲ್ಲಿ ಸಿಎಂ, ಡಿಸಿಎಂ ಅವರು ಮಂತ್ರಿಗಳ ಸಭೆ ನಡೆಸಿದರು.