ಪದವಿ ವಿದ್ಯಾರ್ಥಿಗಳ ಆಂತರಿಕ ಅಂಕ ಹೆಚ್ಚಳ; ಕುಲಪತಿಗಳಲ್ಲಿ ಪರ-ವಿರೋಧ ನಿಲುವು
Team Udayavani, Oct 6, 2021, 6:30 AM IST
ಬೆಂಗಳೂರು: ಪದವಿ ಪರೀಕ್ಷೆಯ ಅಂಕ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆ ತರಲು ರಾಜ್ಯ ಸರಕಾರ ನಿರ್ಧರಿಸಿದೆ. ಇನ್ನು ಮುಂದೆ ಥಿಯರಿಗೆ 40 ಮತ್ತು ಪ್ರಾಯೋಗಿಕ ವಿಷಯದಲ್ಲಿ 50ರಷ್ಟು ಗರಿಷ್ಠ ಆಂತರಿಕ ಅಂಕ ನೀಡಲು ನಿರ್ಧರಿಸಲಾಗಿದೆ.
ಪ್ರಸಕ್ತ ಸಾಲಿನಲ್ಲೇ ಈ ಬದಲಾವಣೆ ಜಾರಿಗೊಳ್ಳಲಿದೆ. ಶೀಘ್ರವೇ ವಿಶ್ವವಿದ್ಯಾನಿಲಯಗಳಿಗೆ ಈ ಸಂಬಂಧ ನಿರ್ದೇಶನ ಕಳುಹಿಸಲಿದೆ.
ಪರ-ವಿರೋಧ
ಆಂತರಿಕ ಅಂಕ ಹೆಚ್ಚಳಕ್ಕೆ ವಿ.ವಿ.ಗಳ ಕುಲಪತಿಗಳ ಪರ, ವಿರುದ್ಧ ನಿಲುವು ವ್ಯಕ್ತವಾಗಿದೆ. ಕೆಲವು ವಿ.ವಿ.ಗಳ ಕುಲಪತಿಗಳು ಥಿಯರಿಯಲ್ಲಿ 50 ಆಂತರಿಕ ಅಂಕ ಮತ್ತು 50ರಷ್ಟು ಪರೀಕ್ಷಾ ಅಂಕ ನಿಗದಿ ಮಾಡಬೇಕು ಎಂದಿದ್ದಾರೆ. ಕೆಲವು ಕುಲಪತಿಗಳು ಅಂತರಿಕ ಅಂಕದಲ್ಲಿ ಸ್ವಲ್ಪ ಏರಿಕೆ ಮಾಡಬೇಕು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಆಂತರಿಕ ಅಂಕವನ್ನು ಈಗಿರುವ ಗರಿಷ್ಠ 30ರಿಂದ 40ಕ್ಕೆ ಏರಿಸುವ ಅಂತಿಮ ನಿರ್ಧಾರ ತೆಗೆದುಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಪರಿಣಾಮವೇನು?
ಆಂತರಿಕ ಅಂಕ ಹೆಚ್ಚಳದಿಂದ ವಿದ್ಯಾರ್ಥಿಗಳಿಗೆ ಅನುಕೂಲ ಮತ್ತು ಅನನುಕೂಲ ಎರಡೂ ಇವೆ. ಪ್ರಾಧ್ಯಾಪಕರು ಮೆಚ್ಚಿನ ವಿದ್ಯಾರ್ಥಿಗಳಿಗೆ ಹೆಚ್ಚು ಆಂತರಿಕ ಅಂಕ ನೀಡುವ ಸಾಧ್ಯತೆ ಇದೆ. ಆಂತರಿಕ ಅಂಕಗಳಲ್ಲಿ 30ಕ್ಕೆ 30 ಪಡೆಯಲು ಅವಕಾಶವಿದೆ. ಹಾಗೆಯೇ ತೇರ್ಗಡೆಗೆ ಕನಿಷ್ಠ ಆಂತರಿಕ ಅಂಕ ಪಡೆಯಲೇ ಬೇಕು. ಹೀಗಾಗಿ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ಆಂತರಿಕ ಅಂಕ ಕಡಿಮೆಯಾಗಬಹುದು. ಅಂತರಿಕ ಅಂಕ ಚೆನ್ನಾಗಿ ಪಡೆದ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರಬಹುದು.
ಇದನ್ನೂ ಓದಿ:ವಾಹನ ನೋಂದಣಿ ನವೀಕರಣಕ್ಕೆ 8 ಪಟ್ಟು ಹೆಚ್ಚು ಶುಲ್ಕ
ಥಿಯರಿ ವಿಷಯದಲ್ಲಿ 40 ಆಂತರಿಕ ಅಂಕ ಮತ್ತು 60 ಪರೀಕ್ಷೆ ಅಂಕ ಇರಲಿದೆ. ಹಾಗೆಯೇ ಪ್ರಾಯೋಗಿಕ ವಿಷಯಗಳಲ್ಲಿ ಆಂತರಿಕ ಅಂಕ ಮತ್ತು ಪರೀಕ್ಷಾ ಅಂಕ ತಲಾ 50 ಇರಲಿವೆ.
-ಪ್ರೊ| ಬಿ. ತಿಮ್ಮೇಗೌಡ,ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ
ವಿದ್ಯಾರ್ಥಿಗಳಿಗೆ ತಾರತಮ್ಯ ಆಗಬಾರದು. ಹೆಚ್ಚುವರಿ ವಿಷಯ ಕಲಿಕೆಯ ಆಧಾರದಲ್ಲಿ ಆಂತರಿಕ ಅಂಕ ನೀಡಲು ನಿರ್ದಿಷ್ಟ ಮಾನದಂಡ ನಿಗದಿಪಡಿಸಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ.
-ಪ್ರೊ| ವೇಣುಗೋಪಾಲ್,
ಬೆಂಗಳೂರು ವಿ.ವಿ. ಕುಲಪತಿ
-ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ