ಪಶ್ಚಿಮದಲ್ಲಿ ಮತ್ತೆ ಕಮಲ ಅರಳಿಸಿದ ಪದವೀಧರ; 2ನೇ ಬಾರಿ ಸಂಕನೂರ ಆಯ್ಕೆ

ಅಸಿಂಧು ಮತಗಳೇ ಅತ್ಯಧಿಕ : ಮತಪತ್ರದಲ್ಲಿ ಬೇಡಿಕೆಗಳ ಪಟ್ಟಿ ಬರೆದ ಪದವೀಧರರು

Team Udayavani, Nov 10, 2020, 8:41 PM IST

Dharwad

ಎಸ್.ವಿ.ಸಂಕನೂರ

ಧಾರವಾಡ : ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಸ್.ವಿ.ಸಂಕನೂರ ಎರಡನೇ ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಮಧ್ಯೆ ಏರ್ಪಟ್ಟಿದ್ದ ತ್ರಿಕೋನ ಸ್ಪರ್ಧೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿಯೇ ಅತ್ಯಧಿಕ ಮತಗಳನ್ನು ಪಡೆದುಕೊಳ್ಳುವ ಮೂಲಕ ಎಸ್.ವಿ.ಸಂಕನೂರ ಅವರು ಗೆಲುವಿನ ನಗೆ ಬೀರಿದರು.

ಸತತ ಸೋಲಿನಿಂದ ಕಂಗೆಟ್ಟು ಈ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕುಬೇರಪ್ಪ ಅವರು ಈ ಬಾರಿಯೂ ಸೋಲುಂಡಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಸಂಚಲನ ಸೃಷ್ಠಿಸಿದ್ದ ಬಸವರಾಜ ಗುರಿಕಾರ ಯಾರದೇ ಬೆಂಬಲ ಇಲ್ಲದೇ ಹೋದರೂ ಐದು ಸಾವಿರಕ್ಕೂ ಅಧಿಕ ಮತಗಳನ್ನು ಪಡೆದುಕೊಳ್ಳುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.

ನಾಲ್ಕನೆ ಸುತ್ತಿನಲ್ಲಿ ಎಣಿಕೆಯಾದ ಒಟ್ಟು 52041ಮತಗಳ ಪೈಕಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಸ್.ವಿ.ಸಂಕನೂರ ಅವರು 23,857 ಮತಗಳನ್ನುಗಳನ್ನು ಪಡೆದುಕೊಳ್ಳುವ ಮೂಲಕ ಜಯಭೇರಿ ಬಾರಿಸಿದರು. ಇನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕುಬೇರಪ್ಪ 12,448 ಹಾಗೂ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ 6188 ಮತಗಳನ್ನು ಪಡೆದುಕೊಂಡರು.

ಜೆಡಿಎಸ್‌ನಿಂದ ಮೊದಲು ಕಣಕ್ಕೆ ಇಳಿದಿದ್ದ ಶಿವಶಂಕರ ಕಲ್ಲೂರ 102 ಮತಗಳು, ಕರ್ನಾಟಕ ರಾಷ್ಟ್ರ ಸಮತಿ ಬೆಂಬಲಿತ ಶಿವರಾಜ ಕಾಂಬಳೆ-66, ಶಿವಸೇನೆ ಬೆಂಬಲಿತ ಸೋಮಶೇಖರ ಉಮರಾಣಿ -133, ಪಕ್ಷೇತರರಾದ ದಶರಥ ರಂಗರಡ್ಡಿ-45, ಬಿ.ಡಿ.ಹಿರೇಗೌಡರ-153, ಬಸವರಾಜ ತೇರದಾಳ-71, ನಾಗರಕಟ್ಟಿ ಮಹಮದ ಶಫಿಉದ್ದಿನ್ ಎಸ್.-153, ಶಿವಕುಮಾರ ತಳವಾರ-53 ಮತಗಳನ್ನು ಪಡೆದುಕೊಂಡರು.

ಬಿಜೆಪಿ ಸತತ ಮುನ್ನಡೆ : ಬೆಳಗ್ಗೆ 8:00 ಗಂಟೆಗೆ ಮತಪೆಟ್ಟಿಗೆಗಳ ಕೊಠಡಿಯಿಂದ ಮತಪತ್ರಗಳು ಎಣಿಕೆ ಕೊಠಡಿ ಸೇರಿದವು. ಅಲ್ಲಿಂದ ಮಧ್ಯಾಹ್ನ 12:00 ಗಂಟೆ ವರೆಗೂ ಅವುಗಳ ಹೊಂದಿಸುವ ಕಾರ್ಯವಾಯಿತು. ಮೊದಲ ಸುತ್ತಿನ ಮತ ಎಣಿಕೆ ಕಾರ್ಯ ಮಧ್ಯಾಹ್ನ 2:30 ಕ್ಕೆ ಪೂರ್ಣಗೊಂಡಿತು. ಇಲ್ಲಿ ಒಟ್ಟು 14 ಸಾವಿರ ಮತಗಳ ಎಣಿಕೆಯಾದಾಗ 11552 ಮತಗಳು ಸಿಂಧುವಾದರೆ 2445 ಮತಗಳೂ ತಿರಸ್ಕೃತಗೊಂಡವು.

ಎಸ್.ವಿ.ಸಂಕನೂರ-6777, ಕುಬೇರಪ್ಪ-2928 ಹಾಗೂ ಬಸವರಾಜ ಗುರಿಕಾರ-1672 ಮತಗಳನ್ನು ಪಡೆದುಕೊಂಡರು. ಈ ಸುತ್ತಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಂಕನೂರ ಅವರು 3849 ಮತಗಳ ಅಂತರ ಕಾಯ್ದುಕೊಂಡರು.

2ನೇ ಸುತ್ತಿನ ಮತ ಎಣಿಕೆ ಕಾರ್ಯ ಸಂಜೆ 5:30 ಕ್ಕೆ ಮುಕ್ತಾಯವಾಯಿತು. ಈ ಸುತ್ತಿನಲ್ಲಿ ಒಟ್ಟು 27998 ಮತಗಳ ಎಣಿಕೆ ಪೂರ್ಣಗೊಂಡಾಗ ಎಸ್.ವಿ.ಸಂಕನೂರ-13293, ಕುಬೇರಪ್ಪ-6111, ಗುರಿಕಾರ-3540 ಮತಗಳನ್ನು ಪಡೆದುಕೊಂಡರು. ಇಲ್ಲಿ ಸಂಕನೂರ ಅವರು 7182 ಮತಗಳ ಭಾರಿ ಮುನ್ನಡೆ ಕಾಯ್ದುಕೊಂಡರು. ಇಲ್ಲಿ 4669 ಮತಗಳು ಅಸಿಂಧುವಾದರೆ 23,329 ಮತಗಳು ಸಿಂಧುವಾದವು.
3ನೇ ಸುತ್ತಿನ ಮತ ಎಣಿಕೆಯಲ್ಲಿ 41,998 ಮತಗಳ ಎಣಿಕೆ ಪೂರ್ಣಗೊಂಡಿದ್ದು ಸಂಜೆ 7:00 ಗಂಟೆಗೆ. ಇಲ್ಲಿ ಸಂಕನೂರ-19565, ಕುಬೇರಪ್ಪ-9449, ಗುರಿಕಾರ-5281 ಮತಗಳನ್ನು ಪಡೆದುಕೊಂಡರು. ಈ ಹಂತದಲ್ಲಿ 7045 ಮತಗಳು ಅಸಿಂಧುವಾಗಿದ್ದವು.

8772 ಮತ ಅಸಿಂಧು : ಪದವೀಧರ ಕ್ಷೇತ್ರದ ಈ ಚುನಾವಣೆಯಲ್ಲಿ ಶಿಕ್ಷಣ ಪಡೆದ ವಿದ್ಯಾವಂತರೇ ಮತದಾರರಿದ್ದರೂ, ಅಸಿಂಧುಗೊಂಡ ಮತಗಳನ್ನು ನೋಡಿದಾಗ ಬೇಸರವಾಗುತ್ತದೆ. ಕೆಲವಷ್ಟು ಜನರು ತಪ್ಪು ತಪ್ಪಾಗಿ ಅಂಕಿಗಳನ್ನು ಬರೆದು ಮತ ಅಸಿಂಧುವಾಗುವಂತೆ ಮಾಡಿದ್ದರೆ, ಇನ್ನಷ್ಟು ಮತದಾರರು ಬೇಕಾಬಿಟ್ಟಿ ಸಂಗತಿಗಳನ್ನೇ ಮತಪತ್ರದಲ್ಲಿ ಬರೆದು ಮತ ಚಲಾಯಿಸಿದ್ದಾರೆ. ಹೀಗಾಗಿ 8772 ಮತಗಳು ತಿರಸ್ಕೃತಗೊಂಡಿವೆ.

ಹಳೆ ಪಿಂಚಿಣಿ ಯೋಜನೆಯನ್ನೇ ಮುಂದುವರೆಸಿ, ಹೊಸ ಪಿಂಚಿಣಿ ಯೋಜನೆ ಬೇಡವೇ ಬೇಡ ಎನ್ನುವ ವಾಕ್ಯಗಳು ಮತ ಪತ್ರದಲ್ಲಿ ಬರೆಯಲಾಗಿದೆ. ಇನ್ನು ಕೆಲವರು ಸರಿ ತಪ್ಪು ಸಂಕೇತಗಳನ್ನು ಬಳಸಿದ್ದಾರೆ. ಕೆಲವಷ್ಟು ಜನರು ಎಲ್ಲ ಅಭ್ಯರ್ಥಿಗಳಿಗೂ ಒಂದೇ ಪ್ರಾಶಸ್ತ್ಯದ ಮತಗಳನ್ನು ನಮೂದು ಮಾಡಿದ್ದಾರೆ. ಕೆಲವರು ರಂಗೋಲಿ ಬಿಡಿಸಿದ್ದರೆ, ಇನ್ನಷ್ಟು ಮತಪತ್ರಗಳಲ್ಲಿ ಇಂಗ್ಲಿಷ ಅಕ್ಷರಗಳಲ್ಲಿ ಒನ್,ಟೂ ಎಂದು ನಮೂದು ಮಾಡಲಾಗಿದೆ. ಹೀಗಾಗಿ ಮತಪತ್ರಗಳಲ್ಲಿ ಮತದಾರರು ಮಾಡಿದ ಅವಾಂತರಗಳಿಂದಾಗಿ ಅತೀ ಹೆಚ್ಚು ಮತಗಳು ತಿರಸ್ಕೃತಗೊಂಡಿವೆ.

ಸರಳ ವಿಜಯೋತ್ಸವ : ಮತ ಎಣಿಕೆ ಕೇಂದ್ರ ಕೃಷಿ ವಿವಿಯಲ್ಲಿ ಯಾವುದೇ ಪಕ್ಷದ ಕಾರ್ಯಕರ್ತರ ಜಮಾವಣೆಯಾಗಿರಲಿಲ್ಲ. ಗೆಲುವಿನ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರು ಆವರಣದಲ್ಲಿ ಸುಳಿಯಲಿಲ್ಲ. ಆದರೆ ಬಿಹಾರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ನಗರದಲ್ಲಿರುವ ಬಿಜೆಪಿ ಕಚೇರಿಗೆ ಬಂದು ವಿಜಯೋತ್ಸವ ಆಚರಿಸಿದರು.

ಟಾಪ್ ನ್ಯೂಸ್

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.