ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ 44 ಜೀವರಕ್ಷಕ ಔಷಧಗಳ ಕೊರತೆ!

ಟೆಂಡರ್‌ ಪ್ರಕ್ರಿಯೆ ಮುಗಿಯದೇ ಔಷಧಗಳ ಅಭಾವ ; ಕೆಎಸ್‌ಎಂಎಸ್‌ಸಿಎಲ್‌ನಿಂದ ಹತ್ತಾರು ಕೋಟಿ ರೂ. ಬಿಲ್‌ ಬಾಕಿ

Team Udayavani, Nov 9, 2022, 7:40 AM IST

ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ 44 ಜೀವರಕ್ಷಕ ಔಷಧಗಳ ಕೊರತೆ!

ಬೆಂಗಳೂರು: ರಾಜ್ಯದ ಸರ ಕಾರಿ ಆಸ್ಪತ್ರೆಗಳಲ್ಲಿ ಬರೊಬ್ಬರಿ 44 ಜೀವ ರಕ್ಷಕ ಔಷಧಗಳ ಕೊರತೆ ಉಂಟಾಗಿದೆ.
ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ(ಕೆ.ಎಸ್‌.ಎಂ.ಎಸ್‌.ಸಿ.ಎಲ್) ನಿರ್ಲಕ್ಷ್ಯದಿಂದ 2020-21ನೇ ಸಾಲಿನ ಟೆಂಡರ್‌ಗಳ ಅಂತಿಮ ಪ್ರಕ್ರಿಯೆ ಮುಗಿಯದ ಹಿನ್ನೆಲೆಯಲ್ಲಿ ಈ ಸಮಸ್ಯೆ ಉದ್ಭವಿಸಿದೆ.

ರಾಜ್ಯದಲ್ಲಿರುವ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಗಂಭೀರ ಕಾಯಿಲೆ ನಿವಾರಣೆಗಿರುವ ಜೀವ ರಕ್ಷಕ ಔಷಧಗಳ ಕೊರತೆ ಪ್ರತಿ ವರ್ಷವೂ ಮರುಕಳಿಸುತ್ತಲೇ ಇದೆ. ಇದೀಗ 44 ಜೀವ ರಕ್ಷಕ ಔಷಧಿಗಳ ಅಭಾವದಿಂದ ರೋಗಿಗಳು ಪರದಾಡುವಂತಾಗಿದೆ.

2020-21ನೇ ಸಾಲಿನ ರಾಜ್ಯದ ಆರೋಗ್ಯ ಕೇಂದ್ರಗಳ ಬೇಡಿಕೆಗೆ ಅನುಗುಣವಾಗಿ 445 ಔಷಧಗಳ ಪೈಕಿ 210 ಔಷಧಗಳಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಅರ್ಹ ಬಿಡ್‌ದಾರರ ಕೈಗೆ ಖರೀದಿ ಆದೇಶ ಪತ್ರವೂ ಸಿಕ್ಕಿದೆ. ಉಳಿದ 235 ಔಷಧಗಳಲ್ಲಿ 98 ಔಷಧಗಳ ಖರೀದಿ ಮತ್ತು ಸರಬರಾಜಿಗೆ 3ನೇ ಬಾರಿ ಆಹ್ವಾನಿಸಿದ ಟೆಂಡರ್‌ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದೆ. 83 ಔಷಧಗಳಿಗೆ ಆಹ್ವಾನಿಸಿದ ಟೆಂಡರ್‌ ಅಂಗೀಕಾರ ಪ್ರಾಧಿಕಾರದ ಹಂತದಲ್ಲಿದೆ. ಆದರೆ, ಇನ್ನುಳಿದ ಅತ್ಯವಶ್ಯಕ 44 ಜೀವ ರಕ್ಷಕ ಔಷಧಗಳ ಟೆಂಡರ್‌ ಪ್ರಕ್ರಿಯೆ ಮುಕ್ತಾಯ ಹಂತಕ್ಕೆ ಬಂದರೂ, ಸರಬರಾಜಿಗೆ 60 ದಿನ ಬೇಕಾಗುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಖರೀದಿಸಲು ಆರೋಗ್ಯ ಕೇಂದ್ರಗಳಿಗೆ ಅನುಮತಿ ನೀಡುವಂತೆ ಕೆಎಸ್‌ಎಂಎಸ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರು ಆರೋಗ್ಯ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ತಾತ್ಕಾಲಿಕವಾಗಿ ಎಬಿ-ಎಆರ್‌ಕೆ ಹಾಗೂ ಎನ್‌ಎಫ್ಡಿಎಸ್‌ ಅನುದಾನದಲ್ಲಿ ಈ ಔಷಧ ಖರೀದಿಸುವಂತೆ ಇಲಾಖೆಯ ಆಯುಕ್ತ ಡಿ. ರಂದೀಪ್‌ ಸುತ್ತೋಲೆ ಹೊರಡಿಸಿದ್ದಾರೆ.

ಔಷಧ ಪೂರೈಕೆ ಸಂಬಂಧ 2020-21ನೇ ಸಾಲಿನ ಬಾಕಿ ಉಳಿದಿರುವ ಟೆಂಡರ್‌ ಪ್ರಕ್ರಿಯೆ ಗಳನ್ನೇ ಇನ್ನೂ ಅಂತಿಮ ಗೊಳಿಸಿಲ್ಲ. 2021-22ನೇ ಸಾಲಿನ ಟೆಂಡರ್‌ ಪಡೆಯಲು ಯಾವುದೇ ಸಂಸ್ಥೆ ಗಳು ಮುಂದೆ ಬರುತ್ತಿಲ್ಲ. 2022-23ನೇ ಸಾಲಿನ ಟೆಂಡರ್‌ಗಳೂ ಸಮರ್ಪಕವಾಗಿ ನಡೆಯುತ್ತಿಲ್ಲ. ಟೆಂಡರ್‌ಗಳನ್ನು ಸೂಕ್ತ ಕಾರಣವಿಲ್ಲದೇ ರದ್ದು ಮಾಡಲಾಗುತ್ತಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆ ನಿಯಮವೂ ಪಾಲನೆಯಾಗುತ್ತಿಲ್ಲ.

ತಮಿಳುನಾಡು, ಆಂಧ್ರ, ಕೇರಳ ಗಳಲ್ಲಿ ಪ್ರತಿವರ್ಷ ಫೆಬ್ರವರಿಯಲ್ಲಿ ಹೊಸ ಟೆಂಡರ್‌ ಆಹ್ವಾನಿಸಿ ಮಾರ್ಚ್‌ನಲ್ಲಿ ಅಂತಿಮ ಪ್ರಕ್ರಿಯೆ ಮುಗಿಸಿ ಏಪ್ರಿಲ್‌ನಲ್ಲಿ ಔಷಧಗಳ ದಾಸ್ತಾನು ಮಾಡಲಾಗುತ್ತದೆ. ಆದರೆ, ಅವೈಜ್ಞಾನಿಕ ನಿಯಮಗಳಿಂದಾಗಿ ಟೆಂಡರ್‌ ಪ್ರಕ್ರಿಯೆ ವಿಳಂಬವಾಗುತ್ತಿದೆ. ಔಷಧ ಪೂರೈಕೆದಾರರಿಗೆ 4 ವರ್ಷ ಕಳೆದರೂ ಕೋಟ್ಯಂತರ ಬಿಲ್‌ ನೀಡಲು ನಿಗಮ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ.

ಯಾವೆಲ್ಲ ಔಷಧ ಕೊರತೆ?
ಪ್ಯಾರಸಿಟಮೊಲ್ , ಪುಯನ್‌ಜೋಲ್‌ ಕ್ಯಾಪೊಲ್ಸ್‌, ಡಿಸೈಕ್ಲೋಮೈನ್‌ ಹೈಡ್ರೋಕ್ಲೋರೈಡ್‌ ಇಂಜೆಕ್ಷನ್‌, ಫ್ಯೂರೋಸೆಮೈಡ್‌ ಇಂಜೆಕ್ಷನ್‌, ಹಾವು ಕಡಿತ ಚುಚ್ಚುಮದ್ದು, ಮೆಟಿರ್ಮಿನ್‌, ಬ್ಲಿಡ್‌ ಗ್ರೂಪಿಂಗ್‌ ಕಿಟ್‌, ಡಿಕ್ಲೋಫೆನಾಕ್‌ ಸೋಡಿಯಂ ಇಂಜೆಕ್ಷನ್‌, ವಿಟಮಿನ್‌ ಡಿ ಕ್ಯಾಲ್ಸಿಯಂ, ಟ್ಯಾಬ್ಲೆಟ್‌ ರಾನಿಟಿಡಿನ್‌, ಇಮ್ಯೂನೊಗ್ಲೋಬ್ಯೂಲಿನ್‌, ಎಚ್‌ಬಿಎಸ್‌ಎಜಿ ಕಿಟ್‌, ಬಿಎಸ್‌ಎಜಿ ಕಿಟ್‌, ವಿಡಿಆರ್‌ಎಲ್‌ ಕಿಟ್‌, ಡಬ್ಲ್ಯುಐಡಿಎಲ್‌ ಕಿಟ್‌, ಮೂತ್ರ ಸಂಗ್ರಹ ಚೀಲ, ಕೈಗವಸು ಸೇರಿದಂತೆ 44ಕ್ಕೂ ಹೆಚ್ಚಿನ ಔಷಧಿಗಳ ಅಭಾವ ಉಂಟಾಗಿದೆ.

ಶ್ವಾಸಕೋಶ ಹಾಗೂ ಕರಳು ಸಮಸ್ಯೆ, ಅಸ್ತಮಾ, ರಕ್ತಹೀನತೆ, ನ್ಯುಮೋನಿಯಾ, ಕ್ಯಾನ್ಸರ್‌, ಸಕ್ಕರೆಕಾಯಿಲೆ, ಹೃದಯ ಶಸ್ತ್ರಚಿಕಿತ್ಸೆ, ರಕ್ತ ಹೆಪ್ಪುಗಟ್ಟುವಿಕೆ, ಮೈಗ್ರೇನ್‌, ಶೀತ, ನಿದ್ರಾಹೀನತೆ, ರಕ್ತದೊತ್ತಡ, ಗರ್ಭಾಶಯ ರಕ್ತಸ್ರಾವ, ಹೃದಯಾಘಾತ, ಹುಣ್ಣು, ನೋವು, ವಾಂತಿ, ಮೂಳೆ, ತುರಿಕೆ, ಫ‌ಂಗಸ್‌, ಮಿದುಳು, ಕಣ್ಣಿನ ನೋವು ಸೊಂಕು ನಿವಾರಕ ಔಷಧಗಳ ಕೊರತೆ ಎದುರಾಗಿದೆ.

2021-22ನೇ ಸಾಲಿನಲ್ಲಿ ಔಷಧಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಔಷಧಿಗಳ ಅಭಾವ ಉಂಟಾಗಿದೆ. ಜೀವ ರಕ್ಷಕ ಔಷಧಿ ಗಳ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು. ಕೊರತೆ ಇರುವ ಔಷಧಿಗಳನ್ನು ಸ್ಥಳೀಯವಾಗಿ ಖರೀದಿಸಿ ಪೂರೈಸಲು ಸೂಚಿಸಲಾಗಿದೆ.
– ಡಿ. ರಂದೀಪ್‌,
ಆಯುಕ್ತರು, ಆರೋಗ್ಯ ಇಲಾಖೆ


– ಅವಿನಾಶ್‌ ಮೂಡಂಬಿಕಾನ

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.