ಬೆಂಗಳೂರಿನಲ್ಲಿ “ಮಹಾ” ಪ್ರತಿಭಟನೆ ವಾಪಸ್; ಮತ್ತೆ ನರಗುಂದದಲ್ಲಿ ಹೋರಾಟ
Team Udayavani, Dec 27, 2017, 6:14 PM IST
ಬೆಂಗಳೂರು: ಕಳೆದ ಶನಿವಾರದಿಂದ ಬಿಜೆಪಿ ಕಚೇರಿ ಮುಂದೆ ಅಹೋರಾತ್ರಿ ಮಹದಾಯಿ ನದಿ ನೀರಿಗೆ ಸಂಬಂಧಿಸಿದಂತೆ ಧರಣಿ ನಡೆಸುತ್ತಿದ್ದ ರೈತರು ಬುಧವಾರ ಪಾದಯಾತ್ರೆ ಮೂಲಕ ರಾಜಭವನ, ಚುನಾವಣಾ ಆಯೋಗ, ಸಿಎಂ ಕಚೇರಿಗೆ ಹಾಗೂ ಜೆಡಿಎಸ್ ಕಚೇರಿಗೆ ಮನವಿ ಸಲ್ಲಿಸುವ ಮೂಲಕ ಬೆಂಗಳೂರಿನಲ್ಲಿ ಪ್ರತಿಭಟನೆ ವಾಪಸ್ ಪಡೆದುಕೊಂಡಿರುವುದಾಗಿ ಮಹದಾಯಿ ಹೋರಾಟ ಸಮಿತಿ ತಿಳಿಸಿದೆ.
ಮನವಿ ಸಲ್ಲಿಕೆಯ ಬಳಿಕ ಫಿಲಂ ಛೇಂಬರ್ ನಲ್ಲಿ ಕನ್ನಡ ಚಿತ್ರರಂಗದ ಗಣ್ಯರ ಜತೆ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರೇಶ್ ಸೊಬರದಮಠ ಚರ್ಚೆ ನಡೆಸಿದರು.
ನಂತರ ಸುದ್ದಿಗಾರರ ಜತೆ ಮಾತನಾಡುತ್ತ, ಮಹದಾಯಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡಿರುವುದರಿಂದ ಮತ್ತಷ್ಟು ಬಲಬಂದಂತಾಗಿದೆ. ಈ ಹಿಂದೆಯೂ ಚಿತ್ರರಂಗ ನಮಗೆ ಬೆಂಬಲ ನೀಡಿತ್ತು. ಅಲ್ಲದೇ ಇಂದು ಬೆಂಗಳೂರಿನಲ್ಲಿ ಮಹದಾಯಿ ಪ್ರತಿಭಟನೆಯನ್ನು ಅಂತ್ಯಗೊಳಿಸುತ್ತಿರುವುದಾಗಿ ಘೋಷಿಸಿದರು. ಜನವರಿಯಲ್ಲಿ ನರಗುಂದದಲ್ಲಿ ಮತ್ತೆ ಬೃಹತ್ ಹೋರಾಟ ನಡೆಸುವುದಾಗಿ ತಿಳಿಸಿದರು.
ರೈತ ಪ್ರತಿಭಟನಾಕಾರರೆಲ್ಲ ಇಂದೇ ಊರಿಗೆ ಮರಳಲಿದ್ದಾರೆ, ಆದರೆ ರೈತ ಮುಖಂಡರಾದ ನಾವು ಮುಂದಿನ ಹೋರಾಟದ ರೂಪರೇಷೆ ಬಗ್ಗೆ ಚರ್ಚೆ ನಡೆಸಿ ಗುರುವಾರ ವಾಪಸ್ ಊರಿಗೆ ತೆರಳುವುದಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ