ಪಠ್ಯ ಪುಸ್ತಕ ಅವಾಂತರ; 8ರ ಕನ್ನಡದಲ್ಲಿ ಗಣಿತ;10ನೇ ತರಗತಿಗೆ 9ರ ಕನ್ನಡ


Team Udayavani, Jun 6, 2018, 2:10 PM IST

school.jpg

ವಿಟ್ಲ, ಜೂ. 5: ಕಳೆದ ವರ್ಷ ಸಕಾಲದಲ್ಲಿ ಪಠ್ಯಪುಸ್ತಕ ಸಿಗದೇ ಪರೀಕ್ಷೆ ಬರೆದಿದ್ದ ನೂರಾರು ವಿದ್ಯಾರ್ಥಿಗಳು ಈ ವರ್ಷ ಬೇಗ ಸಿಕ್ಕಿತಲ್ಲ ಎಂದು ಸಂಭ್ರಮಿಸುವಷ್ಟರಲ್ಲೇ ಅದರಲ್ಲಿನ ದೋಷಗಳು ಕಂಗಾಲುಗೊಳಿಸಿವೆ.

ರಾಜ್ಯ ಸರಕಾರ ವಿತರಿಸಿರುವ ಪಠ್ಯಪುಸ್ತಕಗಳಲ್ಲಿ ನಾನಾ ದೋಷಗಳಿವೆ. ಆಂಗ್ಲ ಮಾಧ್ಯಮ ತರಗತಿ ಪುಸ್ತಕಗಳಲ್ಲಿ ಕನ್ನಡ ಮಾಧ್ಯಮದ ಪಾಠ, ಕನ್ನಡ ಪುಸ್ತಕದಲ್ಲಿ ಗಣಿತ, ಎಸೆಸೆಲ್ಸಿಯಲ್ಲಿ 9ನೇ ತರಗತಿ ಪಾಠ. ವಿಟ್ಲದ  ಕೆಲವು ಶಾಲೆ ಗಳಿಗೆ ದೋಷಪೂರಿತ ಪಠ್ಯಪುಸ್ತಕ ವಿತರಣೆಯಾಗಿವೆ.

ಎಂಟರ ಕನ್ನಡದಲ್ಲಿ ಗಣಿತ 8ನೇ ತರಗತಿ ದ್ವಿತೀಯ ಭಾಷೆ “ತಿಳಿ ಕನ್ನಡ’ ಪಠ್ಯ ಪುಸ್ತಕದ ಮೊದಲ ಪಾಠದ “ಬುದ್ಧನ ಸಲಹೆ’ಯ ಎರಡು ಪುಟಗಳು ಸರಿಯಾಗಿವೆ. ಬಳಿಕ ಇದೇ ತರಗತಿಯ ಕನ್ನಡ ಮಾಧ್ಯಮ ಗಣಿತದ 51ನೇ ಪುಟದಿಂದ 66ನೇ ಪುಟದವರೆಗೆ ತುರುಕಲಾಗಿ¨ 19ನೇ ಪುಟದಿಂದ ಮತ್ತೆ “ಬುದ್ಧನ ಸಲಹೆ’ ಮುಂದುವರಿಯುತ್ತದೆ. 

82 ಪುಟಗಳ ಬಳಿಕ ಮತ್ತೆ ಗಣಿತದ ಅವತಾರ. ಕನ್ನಡ ಗದ್ಯ ಭಾಗದ ಎರಡನೇ ಪಾಠವಾದ “ಕನಸು ಮತ್ತು ಸಂದೇಶ’ ಸಂಪೂರ್ಣ ನಾಪತ್ತೆ. ಮೂರನೇ ಪಾಠ “ಗಾಂಧೀಜಿಯ ಬಾಲ್ಯ’ದ ಕೆಲವು ಪುಟಗಳಿವೆ. ಪದ್ಯ ಭಾಗದ “ಅನ್ವೇಷಣೆ’ಯ ಕೊನೆಯ ಪುಟ ಇಲ್ಲ. “ಹಾರಿದ ಹಕ್ಕಿಗಳು’, “ಜ್ಯೋತಿಯೇ ಆಗು ಜಗಕೆಲ್ಲ’ ಪದ್ಯಗಳೇ ಮಾಯ.”ನನ್ನ ಹಾಗೆಯೆ’ ಪದ್ಯದ ಮೊದಲ ಪುಟಗಳಿಲ್ಲ, ಕೊನೆಯ ಪ್ರಶ್ನೋತ್ತರಗಳು ಮಾತ್ರ ಸ್ವಲ್ಪ ಇವೆ. ಕೆಲವು ಪಠ್ಯಪುಸ್ತಕಗಳಲ್ಲಿ ಮೊದಲ ಪಾಠವೇ ನಾಪತ್ತೆ. ವಿಟ್ಲ ಸಮೀಪದ ಒಂದು ಖಾಸಗಿ ಶಾಲೆಗೆ ವಿತರಣೆಯಾದ ಪುಸ್ತಕಗಳಲ್ಲಿ 12ಕ್ಕೂ ಅಧಿಕ ಪಠ್ಯ ಪುಸ್ತಕಗಳಲ್ಲಿ ಇಂತಹ ತಪ್ಪುಗಳಿವೆ.

ಪಠ್ಯ ಪುಸ್ತಕ ಬಂದಿರಲಿಲ್ಲ!
ಕಳೆದ ವರ್ಷ ಖಾಸಗಿ ಶಾಲೆಗಳು ಸೇರಿದಂತೆ ಹಲವೆಡೆ ಸಕಾಲದಲ್ಲಿ ಹಣ ಪಾವತಿಸಿದ್ದರೂ, ಪರೀಕ್ಷೆ ಮುಗಿಯುವವರೆಗೂ ಪಠ್ಯ ಪುಸ್ತಕಗಳು ಸಿಕ್ಕಿರಲಿಲ್ಲ ಎಂಬ ಟೀಕೆಯಿತ್ತು. ಈ ಬಾರಿ ತರಗತಿ ಆರಂಭದ ಹೊತ್ತಿಗೆ ಪಠ್ಯಪುಸ್ತಕಗಳು ಲಭ್ಯವಾಗಿದ್ದರೂ ದೋಷಪೂರಿತವಾಗಿವೆ. ಇದು ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಆತಂಕಕ್ಕೀಡುಮಾಡಿದೆ. ರಾಜ್ಯ ಸರಕಾರ ಹಲವು ವರ್ಷಗಳಿಂದ ಪಠ್ಯಪುಸ್ತಕಗಳನ್ನು ನೇರವಾಗಿ ಶಾಲೆಗಳಿಗೆ ಪೂರೈಸುತ್ತಿದೆ. ಆದರೆ ದೋಷಪೂರಿತ ಪಠ್ಯ ಪುಸ್ತಕಗಳಿಂದ ಮತ್ತಷ್ಟು ಗೊಂದಲ ಹೆಚ್ಚುತ್ತದೆ ಎನ್ನುತ್ತಾರೆ ಕೆಲವು ವಿದ್ಯಾರ್ಥಿಗಳ ಪೋಷಕರು.

ಎಸೆಸೆಲ್ಸಿಗೆ 9ರ ಕನ್ನಡ ಪಾಠ !
ಹತ್ತನೇ ತರಗತಿಯ “ತಿಳಿ ಕನ್ನಡ’ ಪಠ್ಯಪುಸ್ತಕದಲ್ಲಿ ಎರಡನೇ ಪಾಠ “ಅಸಿ-ಮಸಿ- ಕೃಷಿ’ ಪಾಠದ ಬದಲಾಗಿ ಒಂಬತ್ತನೇ ತರಗತಿಯ “ಅರಳಿಕಟ್ಟೆ’ ಪಾಠ ಮುದ್ರಣವಾಗಿದೆ. 7ನೇ ಪುಟದಿಂದ 22ನೇ ಪುಟದವರೆಗೆ ಹಾಗೂ 87ರಿಂದ 102ನೇ ಪುಟದ ವರೆಗೆ ಹಿಂದಿನ ತರಗತಿಯ ಪಠ್ಯವೇ ಇದೆ. 

7ರಲ್ಲಿ ಪುಟಗಳೇ ಹೆಚ್ಚು !
ಏಳನೇ ತರಗತಿಯ ಆಂಗ್ಲ ಮಾಧ್ಯಮದ ವಿಜ್ಞಾನ ಪುಸ್ತಕದಲ್ಲಿ ಒಂದೇ ಪಾಠದ ಪುಟ ಮತ್ತೆ ಮತ್ತೆ ಮುದ್ರಣವಾಗಿದೆ. ಕನ್ನಡ ಮಾಧ್ಯಮ 9ನೇ ತರಗತಿಯ ಸಮಾಜ ವಿಜ್ಞಾನ ಭಾಗ -2ರಲ್ಲಿ ಭಾಗ-1ರ ಪುಟಗಳು ಕಂಡುಬಂದಿವೆ.

ಗಮನಕ್ಕೆ ಬಂದಿಲ್ಲ
ಪಠ್ಯಪುಸ್ತಕದಲ್ಲಿ ಆಗಿರುವ ತಪ್ಪುಗಳು ನಮ್ಮ ಗಮನಕ್ಕೆ ಬಂದಿಲ್ಲ. ಗೋದಾಮಿನಲ್ಲಿರುವ ಪುಸ್ತಕಗಳನ್ನು ಶಾಲೆಗೆ ವಿತರಿಸಲಾಗುತ್ತಿದ್ದು, ಅಧ್ಯಾಪಕರು ವಿದ್ಯಾರ್ಥಿಗಳಿಗೆ ಹಸ್ತಾಂತರಿಸುತ್ತಾರೆ. ಈಗ ಆಗಿರುವುದು ಮುದ್ರಣ ವ್ಯವಸ್ಥೆಯಲ್ಲಾದ ತಪ್ಪುಗಳೆನಿಸುತ್ತಿದೆ. ಅಂಥ
ಪುಸ್ತಕಗಳನ್ನು ತರಿಸಿ, ಪರಿಶೀಲಿಸುವೆ.
-ಶಿವಪ್ರಕಾಶ್‌ ಎನ್‌.
ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ

*ಉದಯ್ ಶಂಕರ್ ನೀರ್ಪಾಜೆ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.