ಋತುಮತಿಯರ ಮನೆಗೆ ಸೇರಿಸಿದ ಶಾಸಕಿ ಪೂರ್ಣಿಮಾ
Team Udayavani, Jan 9, 2020, 3:00 AM IST
ಚನ್ನಗಿರಿ: ತಾಲೂಕಿನ ಚಿಕ್ಕಗಂಗೂರು ಸಮೀಪದ ಗೊಲ್ಲರಹಟ್ಟಿಯಲ್ಲಿ ಋತುಮತಿ ಆದವರನ್ನು ಹೊರಗಿಡುವ ಪದ್ಧತಿ ಬೆಳಕಿಗೆ ಬಂದಿದ್ದು, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗ್ರಾಮದ ಜನರ ಮನವೊಲಿಸಿ ಆ ಮಹಿಳೆಯರನ್ನು ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೊಲ್ಲರಹಟ್ಟಿಯಲ್ಲಿನ ದೇವಾಲಯದ ಕಾರ್ಯಕ್ರವåಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.
ಶಾಸಕಿ ಪೂರ್ಣಿಮಾ ದೇವಾಲಯದ ಕಾರ್ಯಕ್ರಮ ಮುಗಿಸಿ ಹೊರಡುವಾಗ ನಾಲ್ವರು ಮಹಿಳೆಯರು ಗ್ರಾಮದ ಹೊರಗಿನ ಒಂದು ಕಟ್ಟಡದಲ್ಲಿ ಇರುವುದನ್ನು ಗಮನಿಸಿದ್ದಾರೆ. ಅವರನ್ನು ಕರೆದು ಊರ ಹೊರಗಿರುವ ಬಗ್ಗೆ ವಿಚಾರಿಸಿದ್ದಾರೆ. ಆಗ ಮಹಿಳೆಯರು ಗ್ರಾಮದ ಸಂಪ್ರದಾಯದ ಬಗ್ಗೆ ಹೇಳಿದ್ದಾರೆ. ಋತುಮತಿಯರಾದ ತಾವೆಲ್ಲ ಮನೆಯಿಂದ ಹೊರಗುಳಿದು ಮೂರು ದಿನ ಊರ ಹೊರಗೇ ಇರುತ್ತೇವೆ ಎಂದಿದ್ದಾರೆ.
ತಕ್ಷಣ ಶಾಸಕಿ ಗ್ರಾಮದ ಹಿರಿಯರು ಹಾಗೂ ಜನರನ್ನು ಕರೆಸಿ ಇವೆಲ್ಲ ಮೌಢಾಚರಣೆಯಾಗಿದ್ದು, ಋತುಮತಿ ಆದವರನ್ನು ಊರ ಹೊರಗಡೆ ಕಳುಹಿಸುವುದು ತಪ್ಪು. ಮಹಿಳೆಯರಲ್ಲಿ ಇವೆಲ್ಲ ಸಹಜ ಎಂದು ತಿಳಿಹೇಳಿ ನಾಲ್ವರು ಮಹಿಳೆಯರನ್ನು ಅವರ ಮನೆಗೆ ಸೇರಿಸಿದ್ದಾರೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಜಿಪಂ ಅಧ್ಯಕ್ಷೆ ಯಶೋಧಮ್ಮ, ಜಿಪಂ ಸದಸ್ಯೆ ಶಾಂತ ಕುಮಾರಿ ಶಶಿಧರ್, ಪಿ.ವಾಗೀಶ್, ತಾಪಂ ಅಧ್ಯಕ್ಷೆ ಉಷಾ ಹಾಗೂ ಗ್ರಾಮದ ಮಹಿಳೆಯರು ಮತ್ತು ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
MUST WATCH
ಹೊಸ ಸೇರ್ಪಡೆ
Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್ ಕಾನ್ಸ್ಟೆಬಲ್ ಗೆ ಗಾಯ
Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ
Brahmavara: ವಿದ್ಯುತ್ ಕಂಬ ಮುರಿದು ಬಿದ್ದು ಯುವಕ ಮೃತ್ಯು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್