ಸಹಿ ಸಂಗ್ರಹ ಮಾಡಿಲ್ಲ: ರೇಣುಕಾಚಾರ್ಯ
Team Udayavani, Jan 2, 2020, 3:03 AM IST
ತುಮಕೂರು: ಡಿಸಿಎಂ ಖಾತೆ ವಿರೋಧಿಸಿ ಯಾರಿಂದಲೂ ಸಹಿ ಸಂಗ್ರಹ ಮಾಡಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿ, ಡಿಸಿಎಂ ಖಾತೆ ವಿರೋಧಿಸಿ ಸಹಿ ಸಂಗ್ರಹ ಮಾಡಿದ್ದೇನೆ. ಸಿಎಂ ಬೆಂಬಲ ನೀಡಿದ್ದಾರೆ ಎನ್ನುವುದು ಸತ್ಯಕ್ಕೆ ದೂರ. ಡಿಸಿಎಂ ಸ್ಥಾನದ ಬಗ್ಗೆ ಎಲ್ಲಿಗೆ ವಿಷಯ ಮುಟ್ಟಿಸಬೇಕೋ ಅಲ್ಲಿಗೆ ಮುಟ್ಟಿಸಿದ್ದೇನೆ.
ನನ್ನ ವಿರುದ್ಧ ವರಿಷ್ಠರಿಗೆ ದೂರು ನೀಡಬಹುದಿತ್ತು. ಪಕ್ಷದ ಸಭೆಯಲ್ಲಿ ಮಾತನಾಡಬಹುದಿತ್ತು. ಆದರೆ, ಮಾಧ್ಯಮದ ಮುಂದೆ ಏಕೆ ಮಾತನಾಡಿದರು ಎಂಬುದು ಗೊತ್ತಿಲ್ಲ ಎಂದರು. ಯಾರ ಮೇಲೂ ಅಸಮಾಧಾನ ಇಲ್ಲ. ಉಪ ಮುಖ್ಯಮಂತ್ರಿ ಹುದ್ದೆ ಕುರಿತ ನನ್ನ ಹೇಳಿಕೆಯೇ ಜನರ ಭಾವನೆಯಾಗಿದೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನ ಭಾವನೆಯನ್ನು ರಾಜ್ಯಾಧ್ಯಕ್ಷರ ಬಳಿ ಹೇಳಿದ್ದೇನೆ ಎಂದರು.