ಸಾಲ ಎಷ್ಟಿದೆ ಎಂದು ಗೊತ್ತಿಲ್ಲ,ವರದಿ ತರಿಸ್ತೇವೆ:ಡಿಸಿಎಂ ಪರಂ
Team Udayavani, Jun 29, 2018, 4:19 PM IST
ಬೆಂಗಳೂರು: ರೈತರ ಸಾಲ ಮನ್ನಾ ಕುರಿತು ಬಿಜೆಪಿ ಮತ್ತು ರೈತ ಸಂಘಟನೆಗಳು ಪಟ್ಟು ಹಿಡಿದಿರುವ ಬೆನ್ನಲ್ಲೇ ”ಎಷ್ಟು ಸಾಲ ಇದೆ ಎಂದು ಗೊತ್ತಿಲ್ಲ.ನಮಗೆ ಆ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಅಧಿಕೃತ ವರದಿ ತರಿಸಿಕೊಂಡು ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರೊಂದಿಗಿನ ಸಭೆಯ ಬಳಿಕ ಮಾತನಾಡಿದ ಪರಮೇಶ್ವರ್ ‘ರೈತರ ಸಾಲ ಇಷ್ಟೇ ಇದೆ ಅಷ್ಟೇ ಇದೆ ಎಂದು ಹೇಳಲಾಗುತ್ತಿದೆ. ಆದರೆ ಕೋ ಆಪರೇಟಿವ್ ಬ್ಯಾಂಕ್ಗಳಲ್ಲಿ ಎಷ್ಟಿದೆ, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಎಷ್ಟಿದೆ ಎನ್ನುವ ಅಂಕಿ ಅಂಶ ಅಧಿಕೃತವಾಗಿ ತಿಳಿದು ಬಂದಿಲ್ಲ’ ಎಂದಿದ್ದಾರೆ.
ಹಳೆ ಸರ್ಕಾರದ ಎಲ್ಲಾ ಕಾರ್ಯಕ್ರಮ ಮುಂದುವರಿಕೆ
ಸಮ್ಮಿಶ್ರ ಸರ್ಕಾರದಲ್ಲೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ. ಯಾವುದಾದರೂ ಬೊಕ್ಕಸಕ್ಕೆ ಹೊರೆ ಅನಿಸಿದರೆ ಆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
ಯಾವಾಗ್ಲೂ ಆಗಬಹುದು !
ಸಂಪುಟ ವಿಸ್ತರಣೆ ಯಾವಾಗಬೇಕಾದರೂ ಆಗಬಹುದು , 24 ಗಂಟೆಗಳಲ್ಲೂ ಆದ ನಿದರ್ಶನಗಳಿವೆ ಎಂದರು.