ಧರ್ಮವೆಂದರೆ ಜೀವನ ವಿಧಾನ


Team Udayavani, Nov 21, 2017, 12:00 PM IST

Sri-Rambhapuri-Jagadguruji-.jpg

ಭಾರತದ ಮಣ್ಣಿನ ಕಣಗಳಲ್ಲಿ ಧರ್ಮ, ಸಂಸ್ಕೃತಿ, ಪರಂಪರೆಯ ಬೇರುಗಳು ಆಳವಾಗಿ ಬೆಳೆದು ಭದ್ರಗೊಂಡಿವೆ. ಭಾರತೀಯರು ದೇವರನ್ನು ಪ್ರೀತಿಸುವ ವಿಚಾರ ವಿಶ್ವತೋಮುಖಗೊಂಡಿದೆ. ಭಾರತೀಯರು ದೇವರನ್ನು ಪ್ರೀತಿಸುತ್ತಾರೆ; ಅದಕ್ಕೆ ನಾವು ಭಾರತೀಯರನ್ನು ಪ್ರೀತಿಸುತ್ತೇವೆ ಎಂಬ ಜರ್ಮನ್‌ ದೇಶದ ಮಗು ನಮ್ಮ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್‌ ಅವರಿಗೆ ಹೇಳಿದ ಮಾತು ಇಲ್ಲಿ ಉಲ್ಲೇಖನೀಯ.

ಧರ್ಮ, ದೇವರು, ಧರ್ಮಾಚರಣೆ, ಧರ್ಮ ಪರಂಪರೆಗಳನ್ನು ಭಾವನಾತ್ಮಕ ಸಂಬಂಧದ ಮುಕ್ತ ನೆಲೆಯಲ್ಲಿ ಸ್ವೀಕರಿಸಿದಾಗ ಅನುಭಾವದ ಅನುಭೂತಿ ಗೋಚರವಾಗುತ್ತದೆ. ಭಗವಂತನೊಂದಿಗೆ ನಡೆಸುವ ನಿತ್ಯದ ಅನುಸಂಧಾನದಲ್ಲಿ ಚಿದೆºಳಗನ್ನು ಕಾಣುವುದೂ ಸಹ ಧರ್ಮ ಸಂಸ್ಕಾರದ ನೆರಳಿನಲ್ಲಿಯೇ ನಡೆಯುತ್ತದೆ. ವಿಶ್ವದ ಪ್ರಮುಖ ಧರ್ಮಗಳಲ್ಲಿ ಒಂದಾಗಿರುವ ಹಿಂದೂ ಧರ್ಮವು ಅತ್ಯಂತ ಪ್ರಾಚೀನ ಧರ್ಮ ಪರಂಪರೆಯನ್ನು ಒಳಗೊಂಡಿದೆ.

ಅದಕ್ಕೆಂದೇ ಹಿಂದೂ ಧರ್ಮ ಸನಾತನ ಧರ್ಮಗಳ ಮೇರು ಪಂಕ್ತಿಯಲ್ಲಿ ಸ್ಥಾನ ಪಡೆದಿದೆ. ಹಿಂದೂ ಧರ್ಮದ ತವರು ಮನೆಯಂತಿರುವ ಭಾರತದಲ್ಲಿ ಹಿಂದೂ ಸಂಸ್ಕೃತಿ, ಆಚರಣೆ ಹಾಗೂ ಪರಂಪರೆಯ ವಿದ್ಯಮಾನಗಳು ವ್ಯಾಪಕವಾಗಿ ಹರಡಿಕೊಂಡಿವೆ. ಅದಕ್ಕೆಂದೇ ಭಾರತವು ಹಿಂದೂಸ್ಥಾನ ಎಂದೂ ಅತಿ ಹೆಚ್ಚು ಪ್ರಸಿದಿಟಛಿ ಪಡೆದುಕೊಂಡಿದೆ. ಪ್ರತಿಯೊಬ್ಬ ಹಿಂದೂವೂ ಸಹ ವೇದಗಳನ್ನು ಹಿಂದೂ ಧರ್ಮದ ಆಧಾರವೆಂದು ನಂಬಿ ಗೌರವಿಸುತ್ತಾನಾದ್ದರಿಂದ ಹಿಂದೂ ಧರ್ಮವನ್ನು ವೈದಿಕ ಧರ್ಮ ಹಾಗೂ ವೇದಾಂತ ಧರ್ಮ ಎಂದೂ ಕರೆಯುವ ರೂಢಿ ಇದೆ. 

ಧರ್ಮವೆಂದರೆ ಬೇರೇನೂ ಅಲ್ಲ, ಅದು ನಮ್ಮ ಜೀವನ ವಿಧಾನ. ಧರ್ಮವು ನಮ್ಮ ನಡತೆಗೆ ಸಂಬಂಧಿಸಿದೆ. ಸತ್ಯ-ಶುದಟಛಿ ಸಂಸ್ಕಾರದೊಂದಿಗೆ ಎಲ್ಲರನ್ನೂ ಸರಿಯಾದ ದಾರಿಯಲ್ಲಿ ಮುನ್ನಡೆಸಿ ಬದುಕನ್ನು ಉತ್ತಮಗೊಳಿಸುವ ಕೃಪಾಶಕ್ತಿಯೇ ಧರ್ಮ. ಹಿಂದೂ ಧರ್ಮವೆಂದರೆ ತತ್ವಗಳಿಂದ ಕೂಡಿರುವ ಶಾಸOಉವೂ ಹೌದು, ಜೀವನ ಕ್ರಮವೂ ಹೌದು. ಹಿಂದೂ ಧರ್ಮವು ಸನಾತನ ಧರ್ಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 ಯಾವುದು ವಿಶ್ವವ್ಯಾಪಿಯಾಗಿ ಶಾಶ್ವತ ವಸ್ತುವಿನ ಜ್ಞಾನವನ್ನು ಹರಡುವುದೋ ಅದು ಸನಾತನ ಧರ್ಮ ಎಂದೆನಿಸಿಕೊಳ್ಳುತ್ತದೆ. ಅದು ಅನಾದಿ, ಅನಂತ ಹಾಗೂ ನಿತ್ಯಶಾಶ್ವತ ಧರ್ಮ. ಯಾರು ಧರ್ಮವನ್ನು ನಂಬಿ ಅದರ ಆಚರಣೆಗಳ ನೆಲೆಯಲ್ಲಿ ಬದುಕನ್ನು ನಿರ್ವಹಿಸುತ್ತಾರೋ, ಅವರನ್ನು ಸಂಸಾರ ಬಂಧದಿಂದ ಮುಕ್ತಗೊಳಿಸಿ ಬಯಲಗಳಿಕೆಯ ಶಾಶ್ವತ ಬೆಳಗನ್ನು ತುಂಬುವಲ್ಲಿ ಸನಾತನ ಧರ್ಮವು ಮಾರ್ಗದರ್ಶನ ಮಾಡುತ್ತದೆ. 

ಆಧ್ಯಾತ್ಮ ಬದುಕಿನ ಆರಂಭಿಕ ಹಂತದಿಂದ ಅಂತ್ಯದಲ್ಲಿ ನಡೆಯುವ ನಿರ್ವಿಕಲ್ಪ ಸಮಾಧಿ ಸ್ಥಿತಿಯವರೆಗಿನ ವಿವಿಧ ಹಂತಗಳ ಸಾಧಕರು, ಪ್ರಚಾರಕರು, ಪ್ರತಿಪಾದಕರನ್ನು ಹಿಂದೂ ಧರ್ಮವು ತನ್ನ ವಿಶಾಲ ಆಶ್ರಯದಲ್ಲಿ ಸೇರಿಸಿಕೊಂಡಿದೆ. ಸತ್ಯದ ಬೆಳಕಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಪ್ರತಿಪಾದಿಸಿ ಧನ್ಯರಾಗಲು ಇಲ್ಲಿ  ಸಂಪೂರ್ಣ ಸ್ವಾತಂತ್ರ್ಯ ಹಾಗೂ ಸದವಕಾಶಗಳಿವೆ. 

ಸಹಸ್ರಾರು ಸಂವತ್ಸರಗಳಿಂದ ಹಿಂದೂ ಧರ್ಮವು ಅನೇಕ ವಿಧದ ವೈರುಧ್ಯಗಳನ್ನು, ದಾಳಿಗಳನ್ನು ಸಹಿಸಿಕೊಂಡು ಎದುರಿಸಿ ಪ್ರಸಂಗಾವಧಾನ ಪ್ರವಾಹದ ವಿರುದಟಛಿವೂ ಈಜಿ ದಡ ಸೇರಿ ಸಂಪೂರ್ಣ ಚೈತನ್ಯಯುಕ್ತವಾಗಿ ಇಂದಿಗೂ ಉಳಿದು ಬೆಳೆದು ಬಂದಿದೆ. ದೇವರು-ಪ್ರಪಂಚ, ಜಗತ್ತು-ಮಾನವ, ಜನನ-ಮರಣ, ಸುಖ-ದುಃಖ ಇತ್ಯಾದಿ ಜೀವನ ವಿಧಾನದ ವಿಚಾರಗಳಿಗೆ ನಿರಂತರ ಬೆಳಕು ಚೆಲ್ಲಿ ಮನುಕುಲದ ಬದುಕು ಮಹೋನ್ನತ

ಸಾಧನೆಯಾದ ಸಾûಾತ್ಕಾರ ಸಂಪಾದನೆಗೆ ತೆರೆದುಕೊಳ್ಳುವಂತೆ ಮಾಡುವ ವಿಶಿಷ್ಟ ಶಕ್ತಿಸಂಚಯ ಹಿಂದೂ ಧರ್ಮದಲ್ಲಿದೆ. ಉಡುಪಿಯಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಹಿರಿತನದಲ್ಲಿ ನವೆಂಬರ್‌ 24, 25 ಹಾಗೂ 26ರಂದು ಆಯೋಜನೆಗೊಂಡಿರುವ ಧರ್ಮ ಸಂಸದ್‌ ಹಿಂದೂಧರ್ಮದ ವಿಭಿನ್ನ ನೆಲೆ ಮೂಲಗಳ ಮೌಲಿಕ ಅಂಶಗಳತ್ತ ಬೆಳಕು ಚೆಲ್ಲಲಿದೆ.

ಆ ಮೂಲಕ ನಮ್ಮ ಭಾರತೀಯ ನೆಲದ ಧರ್ಮ, ಸಂಸ್ಕೃತಿ, ಪರಂಪರೆ ಮತ್ತು ಆಚರಣೆಗಳು ಇನ್ನಷ್ಟು, ಮತ್ತಷ್ಟು ಬಲಗೊಳ್ಳಲಿವೆ. ಪರಮ ದಯಾಳು ಪಾರ್ವತಿ- ಪರಮೇಶ್ವರರು, ಜಗದಾದಿ ಜಗದ್ಗುರು ಶ್ರೀ ರೇಣುಕಾದಿ ಪಂಚಾಚಾರ್ಯರು ನಾಡಿನ ಸಮಸ್ತ ಜನತೆಗೆ ಆಯುರಾರೋಗ್ಯ ಭಾಗ್ಯ, ಸುಖ, ಸಂಪದಗಳನ್ನು ಕರುಣಿಸಲೆಂದು ಹೃದಯ ತುಂಬಿ ಹಾರೈಸುತ್ತೇವೆ. 
-ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ, ಶಿವಾಚಾರ್ಯ ಭಗವತ್ಪಾದರು,
ಶ್ರೀ ರಂಭಾಪುರಿ ಜಗದ್ಗುರುಗಳು, ಬಾಳೆಹೊನ್ನೂರು

ಟಾಪ್ ನ್ಯೂಸ್

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.