ಧರ್ಮ ರಾಜಕೀಯದ ಹಿಂದೆ ಮತಬೇಟೆ ತಂತ್ರ!


Team Udayavani, Jul 26, 2017, 7:40 AM IST

siddu.jpg

ಬೆಂಗಳೂರು: ಜಾತಿ ಜನಗಣತಿ, ಒಳ ಮೀಸಲಾತಿ ಹಾಗೂ ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆಯ ಸೂಕ್ಷ್ಮ ವಿಚಾರ ಮುಂದಿಟ್ಟು ಆಡಳಿತಾರೂಢ ಕಾಂಗ್ರೆಸ್‌ ಅದರಲ್ಲೂ ಸಿಎಂ ಸಿದ್ದರಾಮಯ್ಯ “ಜೇನುಗೂಡಿ’ಗೆ ಕಲ್ಲು ಹಾಕಿದ್ದು ಇದರ ಹಿಂದೆ ಪಕ್ಕಾ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವಿದೆ ಎಂಬ ವಾಖ್ಯಾನಗಳು
ಕೇಳಿಬರುತ್ತಿವೆ.

ಮೂರೂ ಸೂಕ್ಷ್ಮ ವಿಚಾರಗಳಾಗಿದ್ದು, ಮೇಲ್ನೋಟಕ್ಕೆ ಈ ಎಲ್ಲ ವಿಚಾರಗಳು ಮುಂದಿನ ವಿಧಾನಸಭೆ ಚುನಾವಣೆ ಕೇಂದ್ರೀಕೃತವಾಗಿರುವುದು ಹೌದು. ಯಾಕೆಂದರೆ, ಈ ವಿಚಾರದಲ್ಲಿ ಪರ-ವಿರೋಧ ಅಥವಾ ಬೇಕು-ಬೇಡಗಳ ಚರ್ಚೆ, ಹೋರಾಟದಿಂದ ವಿವಾದದ ಸ್ವರೂಪ ಪಡೆದು ಅಂತಿಮವಾಗಿ ಪ್ರಬಲ ಸಮುದಾಯದ ಮತ ಒಂದೇ ಪಕ್ಷದತ್ತ ವಾಲದಂತಹ ಸ್ಥಿತಿ ನಿರ್ಮಾಣವಾಗುತ್ತದೆ.

ಇದರಿಂದ ಆಡಳಿತಾರೂಢ ಕಾಂಗ್ರೆಸ್‌ಗೆ ಲಾಭವಾಗದಿದ್ದರೂ ದೊಡ್ಡ ಮಟ್ಟದ ನಷ್ಟವಂತೂ ಆಗುವುದಿಲ್ಲ. ಆದರೆ, ಒಂದು ಪಕ್ಷದತ್ತ ಹೋಗುವ ಮತ ತಡೆಯುವ ಪ್ರಯತ್ನವಂತೂ ಫ‌ಲಿಸಬಹುದು. ಅದು ಪರೋಕ್ಷವಾಗಿ ಲಾಭವೇ ಎಂಬ ಲೆಕ್ಕಾಚಾರ ಇದರ ಹಿಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ವೀರಶೈವ ಮಹಾಸಭಾ ಹಾಗೂ ಕೆಲವು ಲಿಂಗಾಯತ-ವೀರಶೈವ ಮಠಾಧೀಶರ ಬೆಂಬಲ ಪಡೆದು ಕಾಂಗ್ರೆಸ್‌ನಲ್ಲಿರುವ ಲಿಂಗಾಯತ ಸಮುದಾಯದ ಎಲ್ಲ ಸಚಿವರು -ಮುಖಂಡರನ್ನು ಇದಕ್ಕಾಗಿ ಹೋರಾಟಕ್ಕೆ ಸಜ್ಜುಗೊಳಿಸಿರುವುದರ ಹಿಂದೆ “ಮತಬೇಟೆಯ ರಣತಂತ್ರ’ವಿದೆ. ಇದಕ್ಕೆ ಹೈಕಮಾಂಡ್‌ ಶ್ರೀರಕ್ಷೆಯೂ ಇದೆ ಎಂದು ಹೇಳಲಾಗಿದೆ.

ಜಾತಿ ಜನಗಣತಿ ವಿಚಾರದಲ್ಲಿ ದೊಡ್ಡ ಚರ್ಚೆ ನಡೆದು, ಗಣತಿ ನಂತರ ವರದಿ ಬಿಡುಗಡೆ ಕುತೂಹಲ ಘಟ್ಟಕ್ಕೆ ತಂದು ನಿಲ್ಲಿಸಲಾಗಿದೆ. ವರದಿಯಲ್ಲಿ ಯಾವ್ಯಾವ ಸಮುದಾಯದ ಎಷ್ಟೆಷ್ಟು ಜನಸಂಖ್ಯೆ ಹೊಂದಿದೆ ಎಂಬ ಮಾಹಿತಿ ಇದೆ. ಅದು
ಬಿಡುಗಡೆಯಾದರೆ ಚುನಾವಣೆ ವರ್ಷವಾದ್ದರಿಂದ ಆ ವರದಿಯಲ್ಲಿನ ಅಂಕಿ-ಅಂಶಗಳ ಆಧಾರದಲ್ಲೇ ರಾಜಕೀಯ ಪ್ರಾತಿನಿಧ್ಯ (ಟಿಕೆಟ್‌ ಹಂಚಿಕೆ) ನಡೆಯಬೇಕು ಎಂಬ ಕೂಗು ಕೇಳಿಬರುವುದಂತೂ ಸಹಜ. ಈಗಾಗಲೇ ಹೆಚ್ಚು ಸವಲತ್ತು,
ಮೀಸಲು ಪಡೆಯುತ್ತಿರುವ ವರ್ಗದ ಪಾಲು ಕಡಿಮೆಯಾಗಲಿದೆ. ಅದು ಪರ-ವಿರೋಧ ಹೋರಾಟಕ್ಕೂ ಕಾರಣವಾಗಬಹುದು.

ಒಳ ಮೀಸಲಾತಿ ದಲಿತ ಸಮುದಾಯದಲ್ಲಿ ದಶಕಗಳಿಂದ ನಡೆಯುತ್ತಿರುವ ಚರ್ಚೆ. ಈ ಬಗ್ಗೆ ನ್ಯಾ. ಸದಾಶಿವ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಎಸ್‌ಸಿ ಪಟ್ಟಿಯಲ್ಲಿರುವ 101 ಪಂಗಡಗಳಿಗೆ ಒಳ ಮೀಸಲಾತಿ ಕಲ್ಪಿಸುವ
ಪ್ರಸ್ತಾವನೆಯ ಈ ವರದಿ ಒಪ್ಪಬಾರದು ಮತ್ತು ಒಪ್ಪಬೇಕೆಂಬ ವಿಚಾರದಲ್ಲೂ ಹೋರಾಟ ನಡೆಯುತ್ತಿದೆ. ಇದರ ಬಗ್ಗೆ ಸರ್ಕಾರ ಏನೇ ತೀರ್ಮಾನ ಕೈಗೊಂಡರೂ ಜೇನುಗೂಡಿಗೆ ಕಲ್ಲು ಎಸೆದಂತೆಯೇ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.