ಸಂಕಷ್ಟಗಳಿಗೆ ಸ್ಪಂದಿಸುವ ಬದಲುಸಾಧನಾ ಸಮಾವೇಶ: ಶೆಟ್ಟರ್
Team Udayavani, Oct 21, 2017, 10:18 AM IST
ಹುಬ್ಬಳ್ಳಿ: ರಾಜ್ಯದಲ್ಲಿ ಅತಿವೃಷ್ಟಿವುಂಟಾಗಿ ಜನರು ಸಂಕಷ್ಟದಲ್ಲಿದ್ದಾರೆ. ಆದರೆ ಸರಕಾರ ಅವರಿಗೆ ಸ್ಪಂದಿಸುವ ಬದಲು ಸಾಧನಾ ಸಮಾವೇಶ ಮಾಡಲು ಹೊರಟಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಕಿಡಿ ಕಾರಿದರು.
ಇಲ್ಲಿನ ದೇಶಪಾಂಡೆ ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಸರಕಾರದ ಸಾಧನೆ ಶೂನ್ಯವಾಗಿದ್ದು, ಚುನಾವಣೆ ಸಮೀಪಿಸುತ್ತಿರುವುದರಿಂದ ಸರಕಾರ ಈ ಸಾಧನಾ ಸಮಾವೇಶ ನಡೆಸಲು ಹೊರಟಿದೆ. ಸರಕಾರ ನಿಜವಾದ ಸಾಧನೆ ಮಾಡಿದ್ದರೆ ವರ್ಷಕ್ಕೊಂದು ಸಮಾವೇಶ ಮಾಡಬೇಕಿತ್ತು. ಇದೀಗ ಯಾವುದೇ ಸಾಧನೆಗಳಿಲ್ಲದೆ ಸಾಧನಾ ಸಮಾವೇಶ ಮಾಡಲು ಹೊರಟಿದೆ. ಅದಕ್ಕೆ ಅಧಿಕಾರಿಗಳ ಮೂಲಕ ಆಮಿಷವೊಡ್ಡಿ ಫಲಾನುಭವಿಗಳನ್ನು
ಕರೆದುಕೊಂಡು ಬರಲಾಗುತ್ತಿದೆ. ಭ್ರಷ್ಟಾಚಾರಕ್ಕೆ ಸರಕಾರವೇ ನೇರವಾಗಿ ಇಂಬು ಕೊಡುತ್ತಿದೆ ಎಂದರು.