Session; ಈಡೇರದ ಆಶಯ: ಈ ಬಾರಿಯೂ ಉತ್ತರ ಕರ್ನಾಟಕದ ಸಮಸ್ಯೆಗೆ ಸಿಕ್ಕಿಲ್ಲ ಅಭಯ

ಪ್ರತಿ ಬಾರಿಯಂತೆ ಅನಪೇಕ್ಷಿತ ಚರ್ಚೆ, ವಾಗ್ವಾದದಲ್ಲೇ ಅಧಿವೇಶನದ ಮೊದಲ ವಾರ ಮುಕ್ತಾಯ

Team Udayavani, Dec 9, 2023, 5:51 AM IST

1-sadsadasd

ಬೆಳಗಾವಿ: ಬರ, ನೀರಾವರಿ ಸಹಿತ ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದ ಬಗ್ಗೆ ಸಾಕಷ್ಟು ನಿರೀಕ್ಷೆ ಯೊಂದಿಗೆ ಪ್ರಾರಂಭವಾದ ಬೆಳಗಾವಿ ಅಧಿವೇಶನದ ಮೊದಲ ವಾರ ಪ್ರತಿ ಬಾರಿಯಂತೆ ಅನಪೇಕ್ಷಿತ ಚರ್ಚೆ ಹಾಗೂ ವಾಗ್ವಾದದಲ್ಲೇ ಕೊನೆಯಾಗಿದೆ.

ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ರಾಜಕೀಯ ಅನ್ಯಾಯದ ಬಗ್ಗೆ ಈ ಸದನದಲ್ಲಿ ಚರ್ಚಿಸುವುದಕ್ಕೆ ಅವಕಾಶ ನೀಡಬೇಕೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅಧಿವೇಶನದ ಮೊದಲ ದಿನವೇ ಒತ್ತಾಯಿಸಿದ್ದರು. ಈ ಬಗ್ಗೆ ಅವಕಾಶ ನೀಡುವುದಾಗಿ ಸ್ಪೀಕರ್‌ ಯು.ಟಿ.ಖಾದರ್‌ ಭರವಸೆ ನೀಡಿದ್ದರು. ಆದರೆ ಮೊದಲ ವಾರ ಈ ಬಗ್ಗೆ ಚರ್ಚೆಯಾಗಿಲ್ಲ. ಬರದ ಬಗ್ಗೆ ವಿಪಕ್ಷ ನಾಯಕ ಆರ್‌.ಅಶೋಕ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸಹಿತ ಹಲವರು ಪ್ರಸ್ತಾವಿಸಿದ್ದರೂ ಅಭಿವೃದ್ಧಿಗೆ ಹೊರತಾದ ವಿಚಾರಗಳೇ ಹೆಚ್ಚು ವಿಜೃಂಭಿಸಿವೆ.
ಮೊದಲ ಎರಡು ದಿನ ಸಪ್ಪೆ ಎನಿಸಿದ ಅಧಿವೇಶನಕ್ಕೆ ಸ್ವಲ್ಪ ಬಿರುಸು ನೀಡಿದವರೇ ಕರಾವಳಿ ಭಾಗದ ಶಾಸಕರು. ಮೂರನೇ ದಿನದಿಂದ ಕಲಾಪದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡ ವಿ.ಸುನೀಲ್‌ ಕುಮಾರ್‌, ಭರತ್‌ ಶೆಟ್ಟಿ, ವೇದವ್ಯಾಸ್‌ ಕಾಮತ್‌, ಹರೀಶ್‌ ಪೂಂಜ, ಉಮಾನಾಥ್‌ ಕೋಟ್ಯಾನ್‌, ರಾಜೇಶ್‌ ನಾೖಕ್‌ ಮುಂತಾದವರು ಅರಣ್ಯ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ಧ ದಾಖಲಿಸಿದ ಎಫ್ಐಆರ್‌ ಬಗ್ಗೆ ಕಲಾಪದಲ್ಲಿ ಪ್ರಸ್ತಾವಿಸಿ ಧರಣಿ ನಡೆಸಿದ್ದರಿಂದ ಆಡಳಿತ-ವಿಪಕ್ಷದ ಮಧ್ಯೆ ಕಿಚ್ಚು ಕಾಣಿಸಿಕೊಂಡಿತು. ಅಲ್ಲಿಂದ ಮುಂದೆ ದಿನಕ್ಕೊಂದು ವಿಚಾರಗಳು ಸದನದಲ್ಲಿ ಮೊಳಗುತ್ತಿದೆಯಾದರೂ ಅಭಿವೃದ್ಧಿ ವಿಚಾರಗಳು ಸಪ್ಪೆಯಾಗಿವೆ. ಮುಂದಿನ ವಾರ ನೀರಾವರಿ ಯೋಜನೆಗಳು ಸಹಿತ ಹಲವು ವಿಚಾರಗಳ ಬಗ್ಗೆ ಪ್ರಸ್ತಾವಿಸಲು ಅವಕಾಶ ನಿಡುವುದಾಗಿ ಸ್ಪೀಕರ್‌ ಭರವಸೆ ನೀಡಿದ್ದಾರೆ.

ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ
ಉತ್ತರ ಕರ್ನಾಟಕದಲ್ಲಿ ಕಲಾಪ ನಡೆಯುತ್ತಿದ್ದರೂ ಸಚಿವ ಸಂಪುಟ ಸಭೆಯಲ್ಲೂ ಈ ಭಾಗಕ್ಕೆ ಸಂಬಂಧಪಟ್ಟ ಮಹತ್ವದ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಸವದತ್ತಿ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಪುಟ ಅಸ್ತು ಎಂದಿದ್ದನ್ನು ಬಿಟ್ಟರೆ ಈ ಭಾಗಕ್ಕೆ ಮಹತ್ವ ಎನಿಸುವ ಯಾವುದೇ ಘೋಷಣೆಯಾಗಿಲ್ಲ. ಪ್ರತಿಭಟನೆಯ ಬಿಸಿ ಸುವರ್ಣ ವಿಧಾನಸೌಧದವರೆಗೆ ವ್ಯಾಪಿಸದೇ ಇರುವುದು ಈ ಬಾರಿಯ ವಿಶೇಷ.

ವಿಧಾನ ಪರಿಷತ್ತಿನಲ್ಲಿ ಎನ್‌ಇಪಿಗೆ ಸಂಬಂಧಪಟ್ಟಂತೆ ಶುಕ್ರವಾರ ಮಹತ್ವದ ಚರ್ಚೆ ನಡೆದಿದ್ದು, ಉನ್ನತ ಶಿಕ್ಷಣ ಸಚಿವ ಡಾ| ಸುಧಾಕರ್‌ ಉತ್ತರ ನೀಡಿದ್ದಾರೆ. ಸಾವರ್ಕರ್‌ ಫೋಟೋ ತೆರವು ವಿಚಾರ ಬಿಸಿ ಹೊತ್ತಿಕೊಳ್ಳುವ ಮುನ್ಸೂಚನೆ ಕಂಡರೂ ಸ್ಪೀಕರ್‌ ಯು.ಟಿ.ಖಾದರ್‌ ಸಮಯೋಚಿತ ನಿಲುವು ತೆಗೆದುಕೊಳ್ಳುವ ಮೂಲಕ ವಿವಾದ ಕಲಾಪವನ್ನು ಬಲಿ ತೆಗೆದುಕೊಳ್ಳುವುದನ್ನು ತಪ್ಪಿಸಿದ್ದಾರೆ.

ಕಲಾಪಕ್ಕೆ ಶಾಸಕರ ಗೈರು
ಶುಕ್ರವಾರ ಸಮೀಪಿಸುತ್ತಿದ್ದಂತೆ ವಿಧಾನಸಭೆ ಕಲಾಪಕ್ಕೆ ಶಾಸಕರ ಗೈರು ಕಾಣಿಸಿಕೊಂಡಿದೆ. ಇದೆಲ್ಲದರ ಮಧ್ಯೆ ಸಚಿವರೂ ಸದನಕ್ಕೆ ಗೈರಾಗುತ್ತಿರುವುದು ಅನೇಕರ ಬೇಸರಕ್ಕೆ ಕಾರಣವಾಗಿದೆ. ಸಚಿವರ ಗೈರು, ವಿಪಕ್ಷದ ತರಾಟೆ ಎಂಬುದು ಕಲಾಪದ ಸತ್ಸಂಪ್ರದಾಯವೇನೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಸಭಾಧ್ಯಕ್ಷರು ಕ್ರಮ ತೆಗೆದುಕೊಳ್ಳಬೇಕೆಂಬುದು ಹಿರಿಯ ಶಾಸಕರ ಬೇಡಿಕೆಯಾಗಿದೆ.

ನಿಲ್ಲದ ಗೊಂದಲ
ಇವೆಲ್ಲದರ ಮಧ್ಯೆ ವಿಪಕ್ಷ ಪಾಳಯದ ಗೊಂದಲ ಮಾತ್ರ ಮುಂದುವರಿದಿದೆ. “ಎಲ್ಲರೂ ನಾಯಕರು’ ಎಂಬಂತೆ ವರ್ತಿಸುತ್ತಿದ್ದು, ವಿಜಯೇಂದ್ರ ಬಣ, ಅಶೋಕ ಬಣ, ಸುನಿಲ್‌ ಕುಮಾರ್‌ ಬಣ, ಯತ್ನಾಳ್‌ ಬಣ ಎದ್ದು ಕಾಣುತ್ತಿದೆ. ಗುರುವಾರ ಈ ಗೊಂದಲ ಸ್ಫೋಟಗೊಂಡಿದ್ದು, ಹೊಂದಾಣಿಕೆ ಮೂಡಿಸುವ ಹೊಣೆ ಯಾರದು ಎಂಬ ಪ್ರಶ್ನೆ ಉದ್ಭವವಾಗಿದೆ.

Ad

ಟಾಪ್ ನ್ಯೂಸ್

ಏಷ್ಯಾದ ಅತ್ಯಂತ ಹಿರಿಯ ಆನೆ ‘ವತ್ಸಲ’ ಸಾವು…

Asia’s oldest elephant: ಏಷ್ಯಾದ ಅತ್ಯಂತ ಹಿರಿಯ ಆನೆ ‘ವತ್ಸಲ’ ಇನ್ನಿಲ್ಲ…

Rekha-Gupta-CM

ದಿಲ್ಲಿ ಸಿಎಂ ಅಧಿಕೃತ ನಿವಾಸ ನವೀಕರಣ ಟೆಂಡರ್‌ ರದ್ದುಗೊಳಿಸಿದ ಸರಕಾರ

ಸಿಎಂ ನೇತೃತ್ವದ ನಿಯೋಗದಿಂದ ರಕ್ಷಣಾ ಸಚಿವರ ಭೇಟಿ, 2 ಡಿಫೆನ್ಸ್‌ ಕಾರಿಡಾರ್‌ಗೆ ಮನವಿ

ಸಿಎಂ ನೇತೃತ್ವದ ನಿಯೋಗದಿಂದ ರಕ್ಷಣಾ ಸಚಿವರ ಭೇಟಿ, 2 ಡಿಫೆನ್ಸ್‌ ಕಾರಿಡಾರ್‌ಗೆ ಮನವಿ

ರಾಜ್ಯದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರ ಸಕಾರಾತ್ಮಕ ಸ್ಪಂದನೆ: ಸಿದ್ದರಾಮಯ್ಯ

ರಾಜ್ಯದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರ ಸಕಾರಾತ್ಮಕ ಸ್ಪಂದನೆ: ಸಿದ್ದರಾಮಯ್ಯ

Aranthodu: ಆಕಸ್ಮಿಕ ಬೆಂಕಿ… ಹೊತ್ತಿ ಉರಿದ ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕ

Aranthodu: ಆಕಸ್ಮಿಕ ಬೆಂಕಿ… ಹೊತ್ತಿ ಉರಿದ ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕ

Shivasene–MLA–Assult

ಹಳಸಿದ ಆಹಾರ ಕೊಟ್ಟಿದ್ದಕ್ಕೆ ಕ್ಯಾಂಟೀನ್‌ ಸಿಬ್ಬಂದಿ ಮುಖಕ್ಕೆ ಗುದ್ದಿದ ಶಿವಸೇನೆ ಶಾಸಕ!

Dharwad: ಆಂಗ್ಲ ಮಾದ್ಯಮ ಶಾಲೆ ಆರಂಭಿಸುವುದು ಕೈಬಿಡಿ… ಸರ್ಕಾರಕ್ಕೆ ಕವಿಸಂ ಆಗ್ರಹ

Dharwad: ಆಂಗ್ಲ ಮಾದ್ಯಮ ಶಾಲೆ ಆರಂಭಿಸುವುದು ಕೈಬಿಡಿ… ಸರ್ಕಾರಕ್ಕೆ ಕವಿಸಂ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಆಂಗ್ಲ ಮಾದ್ಯಮ ಶಾಲೆ ಆರಂಭಿಸುವುದು ಕೈಬಿಡಿ… ಸರ್ಕಾರಕ್ಕೆ ಕವಿಸಂ ಆಗ್ರಹ

Dharwad: ಆಂಗ್ಲ ಮಾದ್ಯಮ ಶಾಲೆ ಆರಂಭಿಸುವುದು ಕೈಬಿಡಿ… ಸರ್ಕಾರಕ್ಕೆ ಕವಿಸಂ ಆಗ್ರಹ

Dharawad: ಕಾಂಗ್ರೆಸ್-ಬಿಜೆಪಿಯಿಂದ ಹಿಂದಿ ಹೇರಿಕೆ ತಡೆ ಅಸಾಧ್ಯ: ಪ್ರೊ.ಬಿಳಿಮಲೆ

Dharawad: ಕಾಂಗ್ರೆಸ್-ಬಿಜೆಪಿಯಿಂದ ಹಿಂದಿ ಹೇರಿಕೆ ತಡೆ ಅಸಾಧ್ಯ: ಪ್ರೊ.ಬಿಳಿಮಲೆ

Kalaburagi: ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್

Kalaburagi: ರಸ್ತೆ ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು… ಬಾಲಕಿ ಸಾ*ವು, ಯುವಕನ ಸ್ಥಿತಿ ಗಂಭೀರ

Gadag: ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಜೋಡಿ… ಬಾಲಕಿ ಸಾ*ವು, ಯುವಕನ ಸ್ಥಿತಿ ಗಂಭೀರ

15-sri-ramulu

ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಆರಂಭವಾಗಿದ್ದು, ಬದಲಾವಣೆ ಸನಿಹವಿದೆ: ಬಿ.ಶ್ರೀರಾಮುಲು

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

dw

Sullia: ಜಾರಿ ಬಿದ್ದು ವೃದ್ಧೆ ಸಾವು

4

Mangaluru: ಮಾದಕ ವಸ್ತು ಸಾಗಾಟ; ಮೂವರ ಸೆರೆ

ಏಷ್ಯಾದ ಅತ್ಯಂತ ಹಿರಿಯ ಆನೆ ‘ವತ್ಸಲ’ ಸಾವು…

Asia’s oldest elephant: ಏಷ್ಯಾದ ಅತ್ಯಂತ ಹಿರಿಯ ಆನೆ ‘ವತ್ಸಲ’ ಇನ್ನಿಲ್ಲ…

23

Belthangady: ನಾರಾವಿ ಸಮೀಪ ಕಾರು ಅಪಘಾತ

death

Malpe: ವ್ಯಕ್ತಿ ಆತ್ಮಹ*ತ್ಯೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.