D. Devaraja Arasu State Award: ಜನತೆಯ ಆಶೀರ್ವಾದ ಈಗ ಫಲ ಕೊಟ್ಟಿದೆ: ಕಾಗೋಡು ತಿಮ್ಮಪ್ಪ

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನ

Team Udayavani, Aug 19, 2023, 11:20 PM IST

KAGOD TIMMAPPA

ಶಿವಮೊಗ್ಗ ಜಿಲ್ಲೆಯ ಸಾಗರದ ಹಿರಿಯ ರಾಜಕಾರಣಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನಲ್ಲಿ ರವಿವಾರ (ಆ. 20) ಪ್ರಶಸ್ತಿ ಪ್ರದಾನ ನಡೆಯಲಿದೆ.

 ಅರಸು ಪ್ರಶಸ್ತಿಗೆ ಭಾಜನರಾಗಿದ್ದೀರಿ. ಏನನ್ನಿಸುತ್ತಿದೆ?

ನನ್ನ ಹೋರಾಟದ ಜೀವನಕ್ಕೆ ಜನ ಮಾಡಿರುವ ಆಶೀರ್ವಾದ ಇವತ್ತು ಫಲ ಕೊಟ್ಟಿದೆ. ಇದ ರಿಂದ ಖುಷಿ ಆಗಿದೆ. ನಾನು ಬದುಕಿ ರುವವರೆಗೆ ಜನರ ಉಸಿರಾಗಿ ರುತ್ತೇನೆ. ಜನರ ಆಲೋಚನೆ, ವಿಚಾರಗಳನ್ನು ನೆನಪಿಸಿಕೊಳ್ಳುತ್ತಿರುತ್ತೇನೆ. ಜೀವನದಲ್ಲಿ ಇಂತಹ ಅವಕಾಶ ದೊರಕಿರುವುದು ಸಾಗರ ತಾಲೂಕಿನ ಬಡ ಜನರ ಆಶೀರ್ವಾದ ಎಂದು ಭಾವಿಸಿದ್ದೇನೆ. ಇಷ್ಟು ದೊಡ್ಡ ಹೋರಾಟದಲ್ಲಿ ನನ್ನ ಶ್ರಮಕ್ಕಿಂತ ಜನರ ತ್ಯಾಗ, ಪರಿಶ್ರಮವೇ ದೊಡ್ಡದು.  ಒಬ್ಬ ಗೇಣಿ ರೈತ ನನಗೆ ಭೂಮಿ ತಪ್ಪಿಹೋಯಿತು ಎಂದು ಹೇಳಿದ್ದರೆ ಈ ಗೌರವ ಸಿಗುತ್ತಿರಲಿಲ್ಲ.

 ಈ ಪ್ರಶಸ್ತಿ ಬಂದಿದ್ದು ತಡವಾಯಿತು ಅನ್ನಿಸುತ್ತಿದೆಯೇ?

ಇಲ್ಲ. ಇವೆಲ್ಲ ಬಹಳ  ಚಿಂತಿಸಿ ಕೊಡುವ ಪ್ರಶಸ್ತಿಗಳು. ಸರಕಾರಕ್ಕೆ, ಪ್ರಶಸ್ತಿಗೆ ಸೂಕ್ತವಾದ ಮಾನದಂಡಗಳಿರುತ್ತವೆ.  ಸಾಕಷ್ಟು ವಿಚಾರ ವಿನಿಮಯ ಮಾಡಿ ಕೊಡುವ ಪ್ರಶಸ್ತಿ. ಆ ದಾರಿಯಲ್ಲಿ ಹಲವರಿಗೆ ಈ ಪ್ರಶಸ್ತಿ ಸಂದಿದೆ.

 ಸಿಎಂ ಗಾದಿ ಸಿಗಬೇಕು ಅನ್ನಿಸಿಲ್ಲವೇ?

ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಅನಿಸಿಕೆ ಇತ್ತು. ಹಲವರಲ್ಲಿ ಅಂತಹ ಭಾವನೆ ಇದೆ. ಆದರೆ ನಾನು ಎಂದೂ ಅಧಿಕಾರದ ಹಿಂದೆ ಹೋದವನಲ್ಲ. ಅರಸು ಪ್ರಶಸ್ತಿ ಕೂಡ ನನಗೆ ಆಶ್ವರ್ಯವೇ. ಅದು ಬಂದಂತೆ ಸ್ವೀಕರಿಸಿದ್ದಷ್ಟೇ. ಹಾಗಾಗಿ ಮುಖ್ಯಮಂತ್ರಿ ಆಗಿಲ್ಲ ಎಂದು ಏನನ್ನೋ ಕಳೆದುಕೊಂಡೆ ಅಂತ ನನಗೆ ಅನಿಸಿಲ್ಲ.

 ಈಗಿನ ರಾಜಕಾರಣದ ಬಗ್ಗೆ ಏನಂತೀರಿ?

ಈಗಿನವರೂ ರಾಜಕಾರಣಿಗಳೇ. ಅವತ್ತಿನವರೂ ರಾಜಕಾರಣಿಗಳೇ. ಆದರೆ ಜನಸೇವೆಗೆ ಇಳಿದವರಿಗೆ ಇಚ್ಛಾಶಕ್ತಿ ಇರಬೇಕು. ತತ್ವ-ನೀತಿಗಳ ಬಗ್ಗೆ ಬದ್ಧತೆ ಇರಬೇಕು. ಇದು ವ್ಯಾಪಾರವಲ್ಲ. ಜನರ ಸಮಸ್ಯೆ, ಕಾನೂನುಗಳ ಬಗ್ಗೆ ಸಂಕಷ್ಟ ಪರಿಹರಿಸುವ ಕೆಲಸ ಮಾಡಬೇಕು. ನನಗಂತೂ ತೀರಾ ವ್ಯತ್ಯಾಸ ಕಾಣುತ್ತಿಲ್ಲ.

 ಕಾಗೋಡು ಚಳವಳಿಗೆ ಪ್ರೇರಣೆ ಯಾರು?

1952ರಲ್ಲಿ ಕಾಗೋಡಿನಲ್ಲಿ ಭೂ ಹೋರಾಟ ಆರಂಭವಾಯಿತು. ಗೋಪಾಲ ಗೌಡರು ಇದಕ್ಕೆ ಪ್ರೇರಣೆ ನೀಡಿದರು. ನಾನು ಆಗ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದೆ. ಗೋಪಾಲಗೌಡರು ನಮ್ಮ ಮನೆಗೇ ಬಂದು ಉಳಿಯುತ್ತಿದ್ದರು. ಅವರ ಆಚಾರ-ವಿಚಾರಗಳು ನನ್ನ ಮೇಲೆ ಪ್ರಭಾವ ಬೀರಿದವು. ಸಮಾಜವಾದಿ ಸಿದ್ಧಾಂತಕ್ಕೆ ಆಕರ್ಷಿತನಾಗಿ ಅದನ್ನು ಮೈಗೂಡಿಸಿಕೊಂಡೆ. ಮುಂದೆ ನಾನು ಹೆಚ್ಚಿನ ಶಿಕ್ಷಣಕ್ಕೆ ಬೆಂಗಳೂರಿಗೆ ಹೋಗಲು ಅವರೇ ಕಾರಣ.

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.