ಸಾರಿಗೆ ನೌಕರರ ಕೂಟದ ಹೆಸರಿನಲ್ಲಿ ಚಂದಾ ವಸೂಲು?
Team Udayavani, May 4, 2021, 6:31 AM IST
ಬೆಂಗಳೂರು: ವೇತನ ಬಿಡುಗಡೆ ಆಗಿರುವವರು ನಿಮ್ಮ ಕೈಲಾದಷ್ಟು ದೇಣಿಗೆಯನ್ನು ಸಾರಿಗೆ ನೌಕರರ ಕೂಟದ ಖಾತೆಗೆ ಜಮೆ ಮಾಡಬೇಕು! ಇಂಥದ್ದೊಂದು ಅಲಿಖೀತ ಫರ್ಮಾನುಗಳು ನಿಗಮದೊಂದಿಗೆ ಸಾರಿಗೆ ನೌಕರರ ಮೊಬೈಲ್ಗಳಿಗೆ ಬರುತ್ತಿವೆ.
ಮಾರ್ಚ್ ತಿಂಗಳ ಸಂಬಳ ಹೆಚ್ಚು-ಕಡಿಮೆ ಒಂದು ತಿಂಗಳು ತಡವಾಗಿ ಬಿಡುಗಡೆಯಾಗಿದೆ. ಬಸ್ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿ ದ್ದರಿಂದ ಬರುವ ತಿಂಗಳು ಎಷ್ಟು ಪ್ರಮಾಣದಲ್ಲಿ ವೇತನ ಕೈಸೇರುತ್ತದೆ ಎಂಬುದು ಖಾತ್ರಿ ಇಲ್ಲ. ಈ ನಡುವೆ ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಸಂದೇಶಗಳನ್ನು ಬರುತ್ತಿರುವುದು ನೌಕರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ನುಂಗಲಾರದ ತುತ್ತು :
ಧನಸಹಾಯ ಮಾಡದಿದ್ದರೆ ಸ್ಥಳೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಇದು ಬೇರೆ ರೀತಿಯ ಪರಿಣಾಮ ಬೀರಲಿದೆ ಎಂಬ ಭಯ ಕಾಡುತ್ತಿದೆ. ಧನಸಹಾಯ ಮಾಡಿದರೆ ಕುಟುಂಬ ನಿರ್ವಹಣೆ ಕಷ್ಟವಾಗ ಲಿದೆ. ಏನು ಮಾಡುವುದೆಂದು ತೋಚುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿ ನೌಕರರೊಬ್ಬರು ಹೇಳಿ ಕೊಂಡರು.
ಸುಮಾರು 1.30 ಲಕ್ಷ ನೌಕರರು ಇದ್ದಾರೆ. ಇದರಲ್ಲಿ ಲಕ್ಷ ಜನ ತಲಾ 100 ರೂ. ಜಮೆ ಮಾಡಿದರೂ 1 ಕೋಟಿ ರೂ. ಆಗುತ್ತದೆ. ಅಷ್ಟಕ್ಕೂ ಕೂಟಕ್ಕೆ ಈಗ ಹಣದ ಅಗತ್ಯವೇನಿದೆ? ಅಮಾನತು, ವಜಾಗೊಂಡ ನೌಕರರ ಪರ ಕಾನೂನು ಹೋರಾಟಕ್ಕೆ ಮಾಡು
ವುದಕ್ಕೂ ಹಣದ ಅಗತ್ಯವಿಲ್ಲ. ಯಾಕೆಂದರೆ ಈಗಾಗಲೇ ಸಾರ್ವ ಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂತದಲ್ಲಿದೆ. ಜತೆಗೆ ಒಂದಿಬ್ಬರು ವಕೀಲರು ಉಚಿತವಾಗಿ ನಮ್ಮ ಪರ ವಾದಿಸಲು ಮುಂದೆ ಬಂದಿ ದ್ದಾರೆ ಎಂದು ಕೆಎಸ್ಆರ್ಟಿಸಿಯ ಮಂಗಳೂರು ಘಟಕದ ಚಾಲಕರೊಬ್ಬರು ಹೇಳುತ್ತಾರೆ.
100 ರೂ. ನೋಂದಣಿ ಶುಲ್ಕ :
ಈ ಬಗ್ಗೆ ನನಗೂ ಕೆಲವು ನೌಕರರು ಕರೆ ಮಾಡಿ ಕೇಳಿದ್ದಾರೆ. ಮಂಗಳೂರಿನಿಂದ ಒಂದಿಬ್ಬರು ಸ್ನೇಹಿತರು ಕರೆ ಮಾಡಿ, 1,000 ರೂ. ಹಾಕುವಂತೆ ಕೇಳುತ್ತಿದ್ದಾರೆ. ಏನು ಮಾಡುವುದು ಎಂದು ಕೇಳಿದರು. ಕೂಟದಿಂದ ಧನಸಹಾಯ ಕೇಳುತ್ತಿಲ್ಲ. ಹೆಸರು ನೋಂದಣಿ ಮಾಡಿಕೊಳ್ಳಲಾಗುತ್ತಿದ್ದು, ಅದಕ್ಕೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ. ಯಾರಾದರೂ ದುರುದ್ದೇಶ ದಿಂದ ಹಣ ಸಂಗ್ರಹಿಸುವುದಿದ್ದರೆ ಅದರ ಬಗ್ಗೆ ನೌಕರರು ಜಾಗರೂಕ ರಾಗಿರಬೇಕು ಎಂದು ರಾಜ್ಯ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಆರ್. ಚಂದ್ರಶೇಖರ್ ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ