ಜಗತ್ತಿನ ಅರ್ಧದಷ್ಟು ಬಡವರ ಸಂಪತ್ತು 8 ಸಿರಿವಂತರ ಬಳಿ!


Team Udayavani, Jan 17, 2017, 3:45 AM IST

HOMEEE-1.jpg

ದಾವೋಸ್‌: ಭಾರತದ ಆರ್ಥಿಕತೆ ಪ್ರಕಾಶಿಸುತ್ತಿದೆ, ಅಭಿವೃದ್ಧಿಯತ್ತ ಸಾಗುತ್ತಿದೆ, ಇನ್ನು ಕೆಲವೇ ದಿನಗಳಲ್ಲಿ ಚೀನವನ್ನೂ ಮೀರಿಸುವಂತೆ ಜಿಡಿಪಿಯಲ್ಲಿ ಸಾಧನೆ ಮಾಡಲಿದೆ ಎಂಬ ಸುದ್ದಿ ಕೇಳಿ ಕಿವಿಗೆ ಇಂಪು ಮಾಡಿಕೊಳ್ಳುತ್ತಿದ್ದವರೇ ಹೆಚ್ಚು. ಆದರೆ ಭಾರತದಂಥ ಅಸಮಾನ ಆರ್ಥಿಕತೆಯಲ್ಲಿ ಬಹುತೇಕ ಸಂಪತ್ತು ಶೇಖರಣೆಯಾಗಿ ಕುಳಿತಿರುವುದು ಶೇ. 1ರಷ್ಟು ಮಂದಿಯಲ್ಲಿ  ಮಾತ್ರ !

ಇದೇ ವೇಳೆ ಇದಕ್ಕಿಂತಲೂ ಅಚ್ಚರಿಯಾದ ಸಂಗತಿಯೆಂದರೆ ಇಡೀ ಜಗತ್ತಿನಲ್ಲಿನ ಶೇ. 50 ಕಡು ಬಡವರು ಹೊಂದಿರುವಷ್ಟು ಸಂಪತ್ತು ಕೂಡ ಕೇಂದ್ರೀಕೃತವಾಗಿರುವುದು ಕೇವಲ 8 ಶತಕೋಟ್ಯಧಿಪತಿಗಳ ಮುಷ್ಟಿಯಲ್ಲಿ. ಹೌದು… ಭಾರತವೂ ಸಹಿತ ಜಗತ್ತಿನ ಹಲವಾರು ದೇಶ ಮತ್ತು ಒಟ್ಟಾರೆಯಾಗಿ ಜಗತ್ತಿನ ಆರ್ಥಿಕತೆ ಮತ್ತು ಸಂಪತ್ತಿನ ಮೂಲದ ಬಗ್ಗೆ ಹಕ್ಕುಗಳ ಸಂಸ್ಥೆಯಾದ ಆಕ್ಸ್‌ಫಾಮ್‌ ವರದಿ ನೀಡಿದೆ.  ಇದಕ್ಕೆ  ಶೇ. 99  ಮಂದಿಯ ಆರ್ಥಿಕತೆ ಎಂಬ ಶೀರ್ಷಿಕೆಯನ್ನೂ ನೀಡಿದ್ದು, ಬಡವ ಮತ್ತು ಶ್ರೀಮಂತರ ನಡುವಿನ ಅಂತರಕ್ಕೆ ಕಾರಣಗಳ ಬಗ್ಗೆ ವಿವರಿಸಿದೆ. ಅದರಲ್ಲಿ ಈ ಸಂಗತಿಗಳಿವೆ.

ಭಾರತದ ಪೈಕಿ ರಿಲಯನ್ಸ್‌ ಕಂಪೆನಿಯ ಮಾಲಕ ಮುಕೇಶ್‌ ಅಂಬಾನಿ, ದಿಲೀಪ್‌ ಸಾಂ Ì, ಅಜೀಮ್‌ ಪ್ರೇಮ್‌ಜಿಯಂಥವರು ದೇಶದ ಹತ್ತಿರಹತ್ತಿರ ಶೇ.60ರಷ್ಟು ಸಂಪತ್ತನ್ನು ಹೊಂದಿದ್ದಾರೆ. ಇಡೀ ಭಾರತದ ಶೇ.58ರಷ್ಟು ಸಂಪತ್ತು ಕ್ರೋಡೀಕೃತಗೊಂಡಿರುವುದು ಶೇ.1ರಷ್ಟು ಮಂದಿಯಲ್ಲಿ ಮಾತ್ರವಂತೆ. ಇನ್ನುಳಿದ ಶೇ.42ರಷ್ಟು ಸಂಪತ್ತನ್ನು ಉಳಿದ ಶೇ.99ರಷ್ಟು ಮಂದಿ ಹಂಚಿಕೊಂಡಿದ್ದಾರೆ. 

ಜಗತ್ತಿನ ಅರ್ಧ ಸಂಪತ್ತಿಗೆ ಬಿಲ್‌ಗೇಟ್ಸ್‌  ರಾಜ ಸಂಪತ್ತಿನ ಅಸಮಾನತೆ ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ. 
ಇದು ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಸಂಗತಿಯಾಗಿದೆ ಎಂದು ಈ ವರದಿ ವಿಶ್ಲೇಷಿಸಿದೆ. ಅಂದರೆ ಜಗತ್ತಿನ ಅರ್ಧದಷ್ಟು ಕಡುಬಡವರು ಹೊಂದಿರುವಷ್ಟು ಸಂಪತ್ತು ಕೇಂದ್ರೀಕೃತವಾಗಿರುವುದು 8 ಮಂದಿ ಶತಕೋಟ್ಯಧಿಪತಿಗಳ ಕೈಯಲ್ಲಿ.

ಈ ಪಟ್ಟಿಯಲ್ಲಿ ಬಿಲ್‌ಗೇಟ್ಸ್‌ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇವರ ಆಸ್ತಿ 5,107.87 ಶತಕೋಟಿ ರೂಪಾಯಿ ಇದ್ದರೆ, ಅಮಾನ್ಸಿಯೋ ಒರ್ಟೆಗೋ ಆಸ್ತಿ 4,563.03 ಶತಕೋಟಿ ರೂ. ಇದೆ. ಇನ್ನು ವಾರನ್‌ ಬಫೆಟ್‌ ಅವರದ್ದು 4,140.78 ಶತಕೋಟಿ ರೂ. ಆಗಿದೆ ಎಂದು ಈ ವರದಿ ಹೇಳಿದೆ.

ಇಡೀ ಜಗತ್ತಿನ ಒಟ್ಟಾರೆ ಆಸ್ತಿ ಮೌಲ್ಯ 17,414.45 ಲಕ್ಷ ಕೋಟಿ ರೂಪಾಯಿಯಾಗಿದೆ. ಇದರಲ್ಲಿ 442.68 ಲಕ್ಷ ರೂ. ಕೋಟಿ ಆಸ್ತಿಯನ್ನು ಈ 8 ಮಂದಿ ಹೊಂದಿದ್ದಾರೆ ಎಂದು ಈ ವರದಿ ಹೇಳಿದೆ. 

ಈ ವರದಿ ಕೇವಲ ಸಂಪತ್ತಿನ ಬಗ್ಗೆಯಷ್ಟೇ ಹೇಳಿಲ್ಲ. ನೌಕರರ ವೇತನದ ಅಸಮಾನತೆ ಬಗ್ಗೆಯೂ ಬೆಳಕು ಚೆಲ್ಲಿದೆ. ದೇಶದಲ್ಲಿನ ಪ್ರಮುಖ ಕಂಪೆನಿಗಳ ಸಿಇಓಗಳು ದೇಶದ ಸಾಮಾನ್ಯ ನೌಕರನಿಗಿಂತ ಸುಮಾರು 416 ಪಟ್ಟು ಹೆಚ್ಚು ವೇತನ ಪಡೆಯುತ್ತಿದ್ದಾರೆ ಎಂದಿದೆ.

ಭಾರತದಲ್ಲಿ 85 ಶತಕೋಟ್ಯಪತಿಗಳು
ಭಾರತದಲ್ಲಿರುವ ಶತಕೋಟ್ಯಪತಿಗಳ ಸಂಖ್ಯೆ ಸುಮಾರು 85. ಇವರ ಒಟ್ಟಾರೆ ಆಸ್ತಿ ಮೌಲ್ಯ 16.890 ಲಕ್ಷ ಕೋಟಿ ರೂಪಾಯಿ. ಆದರೆ ಭಾರತದ ಒಟ್ಟಾರೆ ಸಂಪತ್ತಿನ ಮೌಲ್ಯ 2ಧಿ0 ಲಕ್ಷ  ಕೋಟಿ ರೂಪಾಯಿ. ಇದರಲ್ಲಿ ಮುಕೇಶ್‌ ಅಂಬಾನಿ (1.314 ಲಕ್ಷ ಕೋಟಿ ರೂ.), ದಿಲೀಪ್‌ ಸಾಂ Ì (1.137 ಲಕ್ಷ ಕೋಟಿ ರೂ.) ಮತ್ತು ಅಜೀಮ್‌ ಪ್ರೇಮ್‌ಜಿ (1.021 ಲಕ್ಷ ಕೋಟಿ ರೂ.) ಪಾಲು ಹೊಂದಿದ್ದಾರೆ.

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.